![Gadag; ಜಿಲ್ಲೆಯಲ್ಲಿ ಡೇಂಜರ್ ಡೆಂಘೀಗೆ ಮೊದಲ ಬಲಿ](https://www.udayavani.com/wp-content/uploads/2024/07/deng-415x229.jpg)
Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ
ಉದ್ವಿಗ್ನತೆ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು....
Team Udayavani, Jul 4, 2024, 9:05 PM IST
![police crime](https://www.udayavani.com/wp-content/uploads/2024/07/police-crime-2-620x382.jpg)
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಶಿವ ದೇವಾಲಯಲ್ಲಿ ಧ್ವಂಸ ಮಾಡಿದ ಆರೋಪದ ಮೇಲೆ ಪೊಲೀಸರು 43 ಜನರನ್ನು ಬಂಧಿಸಿದ್ದಾರೆ.
ಶನಿವಾರ ಸಂಜೆ ಧರ್ಮಾರಿ ಪ್ರದೇಶದ ಹಳ್ಳಿಯೊಂದರಲ್ಲಿ ಪೂಜಾ ಸ್ಥಳವನ್ನು ಧ್ವಂಸಗೊಳಿಸಿದ್ದು, ಉದ್ವಿಗ್ನತೆ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು. ವಿಧ್ವಂಸಕ ಕೃತ್ಯದ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿದ್ದಂತೆ, ಸ್ಥಳೀಯರು ಮತ್ತು ಹಲವಾರು ಹಿಂದೂ ಸಂಘಟನೆಗಳು ಜಮ್ಮು ಪ್ರದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದರು. ರಿಯಾಸಿ ಮತ್ತು ಕತ್ರಾ ಪಟ್ಟಣಗಳಲ್ಲಿ ಬಂದ್ ಆಚರಿಸಲಾಗಿತ್ತು.
ಅರ್ನಾಸ್ನ ಧರ್ಮರಿ ಪ್ರದೇಶದ ಧಾರ್ಮಿಕ ಸ್ಥಳದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ 24 ಶಂಕಿತರು ಸೇರಿದಂತೆ 43 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿರುವುದರಿಂದ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ರಿಯಾಸಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶಮ್ರಾ ಪಿಟಿಐಗೆ ತಿಳಿಸಿದ್ದಾರೆ.
ರಿಯಾಸಿಯ ಜನರು ಶಾಂತವಾಗಿರಲು ಮತ್ತು ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡುವಂತೆ ಎಸ್ಎಸ್ಪಿ ಮನವಿ ಮಾಡಿ, ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಸಾರ್ವಜನಿಕರ ಮುಂದೆ ತರಲಾಗುವುದು ಎಂದರು.
ಪೊಲೀಸರು ಕಾನೂನಿನ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ಅಪರಾಧಿಗಳನ್ನು ಗುರುತಿಸಲು ಮತ್ತು ಬಂಧಿಸಲು ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು ಪ್ರಕರಣವನ್ನು ಭೇದಿಸಲು ಎಸ್ಐಟಿ ವಿವಿಧ ಸುಳಿವುಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜನರನ್ನು ವಿನಂತಿಸುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
![Gadag; ಜಿಲ್ಲೆಯಲ್ಲಿ ಡೇಂಜರ್ ಡೆಂಘೀಗೆ ಮೊದಲ ಬಲಿ](https://www.udayavani.com/wp-content/uploads/2024/07/deng-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![rahul gandhi](https://www.udayavani.com/wp-content/uploads/2024/07/rahul-8-150x83.jpg)
LK Advani ಆರಂಭಿಸಿದ ಚಳುವಳಿಯನ್ನು ಅಯೋಧ್ಯೆಯಲ್ಲಿಯೇ ಸೋಲಿಸಿದ್ದೇವೆ..: ರಾಹುಲ್ ಗಾಂಧಿ
![terror attack on Army camp in Jammu and Kashmir’s Rajouri](https://www.udayavani.com/wp-content/uploads/2024/07/rajuori-150x83.jpg)
Rajouri; ಸೇನಾ ಶಿಬಿರದ ಮೇಲೆ ಉಗ್ರರ ದಾಳಿ; ಗಾಯಗೊಂಡ ಓರ್ವ ಸೈನಿಕ
![Heavy Rain: ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್!](https://www.udayavani.com/wp-content/uploads/2024/07/himachala-150x91.jpg)
Heavy Rain: ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್!
![NEET-UG Counselling: ನೀಟ್-ಯುಜಿ ಕೌನ್ಸೆಲಿಂಗ್ ಈ ಮಾಸಾಂತ್ಯಕ್ಕೆ ಆರಂಭ?](https://www.udayavani.com/wp-content/uploads/2024/07/neet-5-150x83.jpg)
NEET-UG Counselling: ನೀಟ್-ಯುಜಿ ಕೌನ್ಸೆಲಿಂಗ್ ಈ ಮಾಸಾಂತ್ಯಕ್ಕೆ ಆರಂಭ?
![Justin Bieber: ಅಂಬಾನಿ ಪುತ್ರನ “ಸಂಗೀತ್’ನಲ್ಲಿ ಮನಗೆದ್ದ ಜಸ್ಟೀನ್ ಕಾರ್ಯಕ್ರಮ](https://www.udayavani.com/wp-content/uploads/2024/07/ambani-1-150x90.jpg)
Justin Bieber: ಅಂಬಾನಿ ಪುತ್ರನ “ಸಂಗೀತ್’ನಲ್ಲಿ ಮನಗೆದ್ದ ಜಸ್ಟೀನ್ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.