![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 19, 2022, 6:20 AM IST
ಶ್ರೀನಗರ: ಕಾಶ್ಮೀರಿ ಪಂಡಿತರಿಗೆ ಮತ್ತೆ ಲಷ್ಕರ್ ಪ್ರೇರಿತ ಉಗ್ರವಾದಿ ಸಂಘಟನೆ “ದಿ ರೆಸಿಸ್ಟೆನ್ಸ್ ಫ್ರಂಟ್'(ಟಿಆರ್ಎಫ್) ಬೆದರಿಕೆ ಹಾಕಿದೆ. ಅಷ್ಟೇ ಅಲ್ಲ, ಜಮ್ಮು ಮತ್ತು ಕಾಶ್ಮೀರದ 6 ಮಂದಿ ಅಧಿಕಾರಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು, “ಈ ಪಟ್ಟಿ ನಿಮ್ಮೆಲ್ಲರ ಕಣ್ಣು ತೆರೆಸಲಿ’ ಎಂದು ಬರೆಯಲಾಗಿದೆ.
“ಕಾಶ್ಮೀರಿ ಪಂಡಿತ ಸಮುದಾಯವು ಯಾವಾಗ ನೋಡಿದರೂ ತಾವೇ ಬಲಿಪಶು ಗಳು ಎಂಬಂತೆ ತೋರಿಸಿಕೊಳ್ಳುತ್ತದೆ. ವಲಸಿಗ ಪಂಡಿತರ “ಪಿಎಂ ಪ್ಯಾಕೇಜ್ ವಿದೂಷಕ’ರಂತೆ ವರ್ತಿಸುವವರು ಮತ್ತು ಪಂಡಿತರ ಪರ ಮೃದು ಧೋರಣೆ ಹೊಂದಿರುವ ಎಲ್ಲರಿಗೂ ಇದು ಕಣ್ಣು ತೆರೆಸುವಂಥ ಪಟ್ಟಿಯಾಗಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಈ 6 ಅಧಿಕಾರಿಗಳು 1990ರ ದಶಕದಲ್ಲಿ ಗುಪ್ತಚರ ಬ್ಯೂರೋದ ದಾಳವಾಗಿದ್ದರು. ಈಗ ಸಂ ಅಜೆಂಡಾಗೆ ತಕ್ಕಂತೆ ನಡೆಯುತ್ತಿ ದ್ದಾರೆ’ ಎಂದೂ ಬೆದರಿಕೆ ಪತ್ರದಲ್ಲಿ ಬರೆಯ ಲಾಗಿದೆ.ಕೇವಲ ಶಿಕ್ಷಣ ಇಲಾಖೆ ಮಾತ್ರವಲ್ಲ, ಎಲ್ಲ ಇಲಾಖೆಗಳಲ್ಲೂ ಈ ದಿಲ್ಲಿ ಪ್ರಾಯೋ ಜಿತ ಏಜೆಂಟ್ಗಳು ಕೆಲಸ ಮಾಡುತ್ತಿದ್ದಾರೆ.
ಈ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ. ಸದ್ಯದಲ್ಲೇ ಇವರೆಲ್ಲರ ರಕ್ತ ಹರಿಯಲಿದೆ ಎಂದೂ ಟಿಆರ್ಎಫ್ ಎಚ್ಚರಿಸಿದೆ. ಜತೆಗೆ, “ನಾವು ಒಂದು ವಿಚಾರ ಸ್ಪಷ್ಟಪಡಿಸುತ್ತೇವೆ- 1990ರ ದಶಕದಲ್ಲಿ ವಲಸೆ ಹೋಗದೇ, ಕಾಶ್ಮೀರದಲ್ಲೇ ಉಳಿದಿದ್ದಂತಹ ಪಂಡಿತರು ಯಾವುದೇ ಕಾರಣಕ್ಕೂ ಚಿಂತೆ ಪಡಬೇಕಾಗಿಲ್ಲ’ ಎಂದೂ ಪತ್ರದಲ್ಲಿ ಬರೆಯಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.