ATM Robbery: ಎಟಿಎಂ ದೋಚುವ ಯತ್ನ ವಿಫಲ… ಸುಟ್ಟು ಭಸ್ಮವಾಯ್ತು 21 ಲಕ್ಷ ರೂ…
Team Udayavani, Jan 15, 2024, 3:22 PM IST
ಮಹಾರಾಷ್ಟ್ರ: ಎಟಿಎಂ ದೋಚಲು ದರೋಡೆಕೋರರು ನಡೆಸಿದ ಯತ್ನವೊಂದು ವಿಫಲವಾಗಿದ್ದು ಪರಿಣಾಮ ಎಟಿಎಂ ನಲ್ಲಿದ್ದ ಸುಮಾರು 21 ಲಕ್ಷ ರೂ.ನಗದು ಸುಟ್ಟು ಭಸ್ಮವಾಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಜನವರಿ 13 ರ ಮುಂಜಾನೆ ಡೊಂಬಿವಲಿ ಟೌನ್ಶಿಪ್ನ ವಿಷ್ಣು ನಗರ ಪ್ರದೇಶದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ನ ಎಟಿಎಂನಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳ ತಂಡವೊಂದು ಎಟಿಎಂ ಯಂತ್ರದ ಬೀಗ ಮುರಿದು ಹಣ ದೋಚುವ ಯತ್ನ ಮಾಡಿದೆ ಆದರೆ ಅದು ಫಲಿಸದ ಕಾರಣ ತಾವು ತಂದ ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಯಂತ್ರದ ಬಾಗಿಲನ್ನು ಮುರಿಯಲು ಯತ್ನಿಸಿದ್ದಾರೆ ಆದರೆ ಬೆಂಕಿಯ ಕಿಡಿ ಒಳಗಿರುವ ಹಣದ ಕಂತೆಗೆ ತಗುಲಿದೆ ಪರಿಣಾಮ ಒಳಗಿನಿಂದ ಹಣ ಹೊತ್ತಿ ಉರಿಯಲು ಆರಂಭಿಸಿದೆ. ದರೋಡೆಕೋರರು ಯಂತ್ರವನ್ನು ಗ್ಯಾಸ್ ಕಟ್ಟರ್ ಮೂಲಕ ತೆರೆಯುವಷ್ಟರಲ್ಲಿ ಒಳಗಿದ್ದ ಹಣದ ಕಂತೆಗಳು ಸುಟ್ಟು ಭಸ್ಮವಾಗಿತ್ತು.
ಬೆಂಕಿಯಿಂದ ಯಂತ್ರಕ್ಕೆ ಹಾನಿಯಾಗಿದ್ದು ಇದರೊಳಗೆ ಇದ್ದ ಸುಮಾರು 21,11,800 ರೂ. ಸುಟ್ಟು ಭಸ್ಮವಾಗಿದೆ.
ಎಟಿಎಂ ಕೇಂದ್ರವನ್ನು ನಿರ್ವಹಿಸುವ ಜವಾಬ್ದಾರಿಯುತ ಎಲೆಕ್ಟ್ರಾನಿಕ್ ಪೇಮೆಂಟ್ ಸಿಸ್ಟಮ್ಸ್ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ,”
ಅಪರಿಚಿತ ವ್ಯಕ್ತಿಗಳ ವಿರುದ್ಧ ಸೆಕ್ಷನ್ 457, 380, ಮತ್ತು 427 ಅಡಿಯಲ್ಲಿ ಪ್ರಕರಣ ದಾಖಲಿಸಿ ದರೋಡೆಕೋರರ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ: Rajeshwariben: ಕೇಂದ್ರ ಸಚಿವ ಅಮಿತ್ ಶಾ ಹಿರಿಯ ಸಹೋದರಿ ನಿಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.