![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 1, 2022, 8:11 PM IST
ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮುಂದಿನ ತಿಂಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಹೊರತರಲಿದ್ದು, ಅದರಲ್ಲಿ ಅವರ ಜೀವನದ ಒಳನೋಟಗಳನ್ನು ನೀಡಲಿದ್ದಾರೆ, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಸೇರಿದಂತೆ ಅವರ ಯುಗದ ಇತರ ರಾಜಕೀಯ ಮತ್ತು ಬೌದ್ಧಿಕ ದೈತ್ಯರೊಂದಿಗೆ ಅವರು ಹೊಂದಿದ್ದ ವಿವಾದಗಳನ್ನು ಎತ್ತಿ ತೋರಿಸಲಿದ್ದಾರೆ.
“ಅಂಬೇಡ್ಕರ್: ಎ ಲೈಫ್” ನಲ್ಲಿ ತರೂರ್ ಅವರು ಅಂಬೇಡ್ಕರ್ ಆಧುನಿಕ ಕಾಲದ ಶ್ರೇಷ್ಠ ಭಾರತೀಯರೇ ಎಂಬ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಏಪ್ರಿಲ್ 14, 1891 ರಂದು ಬಾಂಬೆ ಪ್ರೆಸಿಡೆನ್ಸಿಯಲ್ಲಿ ಮಹರ್ಗಳ ಕುಟುಂಬದಲ್ಲಿ ಅವರು ಜನಿಸಿದಾಗಿನಿಂದ ಡಿಸೆಂಬರ್ 6, 1956 ರಂದು ದೆಹಲಿಯಲ್ಲಿ ನಿಧನ ಹೊಂದಿದ ಅಂಬೇಡ್ಕರ್ ಅವರ ಜೀವನದ ಯಾತ್ರೆಯನ್ನು ಕಾಂಗ್ರೆಸ್ ಸಂಸದರು ಬರೆದಿದ್ದಾರೆ.
ತಾವು ಹುಟ್ಟಿದ ಸಮುದಾಯಕ್ಕೆ ಕಳಂಕ ತಂದ ಸಮಾಜದಲ್ಲಿ ಅಂಬೇಡ್ಕರ್ ಅವರು ಅನುಭವಿಸಿದ ಅನೇಕ “ಅವಮಾನಗಳು ಮತ್ತು ಅಡೆತಡೆಗಳನ್ನು” ವಿವರಿಸಿದ್ದು, ಅವರು ಎದುರಿಸಿದ ಪ್ರತಿಯೊಂದು ಅಡೆತಡೆಗಳನ್ನು ಅವರು ಏಕ ಮನಸ್ಸಿನಿಂದ ಜಯಿಸಿದರು ಎಂದು ಪ್ರಕಾಶಕ ಅಲೆಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈಯಕ್ತಿಕ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಆಧುನಿಕ ಪರಿಕಲ್ಪನೆಗಳು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು,ತರೂರ್ ಅವರ ಪ್ರಕಾರ, ಅಂಬೇಡ್ಕರ್ “ಅವರು ಇನ್ನೂ ಹುಟ್ಟದ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದರು, ಪ್ರಾಚೀನ ನಾಗರಿಕತೆಯನ್ನು ಆಧುನಿಕ ಯುಗಕ್ಕೆ ತಮ್ಮ ಬುದ್ಧಿಶಕ್ತಿ ಮತ್ತು ಲೇಖನಿಯ ಶಕ್ತಿಯ ಮೂಲಕ ಬದಲಾಯಿಸಿದರು ಎಂದಿದ್ದಾರೆ. ಅಕ್ಟೋಬರ್ 1 ರಂದು ಪುಸ್ತಕ ಬಿಡುಗಡೆಯಾಗುತ್ತಿದೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.