ಪಶ್ಚಿಮ ಬಂಗಾಳ: ಮೃತ ಮರಿಯನ್ನು ಹೊತ್ತು ಸುಮಾರು 7 ಕಿ.ಮೀ. ದೂರ ನಡೆದ ತಾಯಿ ಆನೆ
Team Udayavani, May 30, 2022, 8:10 PM IST
ಕೋಲ್ಕತ: ಎಲ್ಲಕ್ಕಿಂತ ಶ್ರೇಷ್ಠ ಪ್ರೀತಿ ತಾಯಿಯ ಪ್ರೀತಿ ಎನ್ನುವ ಮಾತಿದೆ. ಅದೇ ರೀತಿ ಮಗುವಿನ ಬಗ್ಗೆ ಅಗಾಧ ಪ್ರೀತಿ ಹೊತ್ತಿದ್ದ ತಾಯಿ ಆನೆಯೊಂದು ತನ್ನ ಕರುವಿನ ಮೃತದೇಹವನ್ನು ಕಿಲೋ ಮೀಟರ್ಗಟ್ಟಲೆ ದೂರ ಹೊತ್ತು ನಡೆದಿರುವ ಭಾವನಾತ್ಮಕ ಘಟನೆ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ನಡೆದಿದೆ.
ಡೋರ್ಸ್ ಪ್ರದೇಶದ ಚುನಾಬಟಿ ಚಹಾ ಗಾರ್ಡೆನ್ನ ಬಳಿ ಇತ್ತೀಚೆಗೆ ಆನೆಮರಿ ಸಾವನ್ನಪ್ಪಿತ್ತು. ಆ ಮರಿಯನ್ನು ತನ್ನ ಸೊಂಡಿಲಲ್ಲಿ ಎತ್ತಿಕೊಂಡ ತಾಯಿ ಆನೆ, ತನ್ನ ಹಿಂಡಿನೊಂದಿಗೆ ನಡೆಯುತ್ತಾ ಸಾಗಿದೆ.
ಚುನಾಬಟಿ ಗಾರ್ಡೆನ್ನಿಂದ ಹೊರಟ ಆನೆ ಹಿಂಡು ಅಂಬಾರಿ ಚಹಾ ಗಾರ್ಡೆನ್, ಡಿಯಾನಾ ಚಹಾ ಗಾರ್ಡೆನ್, ನ್ಯೂಡೋರ್ಸ್ ಚಹಾ ಗಾರ್ಡೆನ್ ದಾಟಿ ಸಾಗಿದೆ. ರೆಡ್ಬ್ಯಾಂಕ್ ಚಹಾ ಗಾರ್ಡೆನ್ ಬಳಿಯ ಪೊದೆಯೊಂದರಲ್ಲಿ ತಾಯಿ ಆನೆಯು ತನ್ನ ಕರುವಿನ ಶವವನ್ನು ಇರಿಸಿದೆ.
ಸುಮಾರು 30-35 ಆನೆಗಳಿದ್ದ ಹಿಂಡು ಮೃತ ಕರುವಿನ ಶವದೊಂದಿಗೆ ಸುಮಾರು 7 ಕಿ.ಮೀ. ದೂರ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ರೀತಿ ಸಾಗುತ್ತಿದ್ದ ಆನೆ ಹಿಂಡನ್ನು ನೋಡಿದ ಸ್ಥಳೀಯರು ಗಾಬರಿಯಿಂದ ಮನೆಯೊಳಗೆ ಸೇರಿಕೊಂಡಿದ್ದಾರೆ.
#WATCH | WB: A mother elephant seen carrying carcass of her dead calf in Ambari Tea Estate, Jalpaiguri. A team of Binnaguri wildlife reached there to retrieve the carcass but elephant walked away to Redbank Tea Estate. Cause of death yet to be ascertained.
(Source: Unverified) pic.twitter.com/cPFSWtRDGk
— ANI (@ANI) May 27, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ
Panaji: ಮಲ್ಪೆಯ 2 ಮೀನುಗಾರಿಕಾ ಬೋಟ್ ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ
Punjab; ಆಮ್ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ
J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ
Panaji: ಮಲ್ಪೆಯ 2 ಮೀನುಗಾರಿಕಾ ಬೋಟ್ ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ
Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.