![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 7, 2019, 4:25 PM IST
ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡಿದ್ದರಿಂದ ಕೂದಲೆಳೆ ಅಂತರದಲ್ಲಿ ಸೇಫ್ ಲ್ಯಾಂಡಿಂಗ್ ತಪ್ಪಿದೆ. ಈಗ ಮುಂದೇನು ಎಂಬ ಪ್ರಶ್ನೆ ಬರುವುದು ಸಹಜ.
ಲ್ಯಾಂಡರ್ ಚಂದ್ರನಲ್ಲಿ ಸರಿಯಾಗಿ ಇಳಿದಿಲ್ಲ ಎಂದರೆ ಇಡೀ ಯೋಜನೆಯೇ ಹಾಳಾಯಿತು ಎಂದರ್ಥವಲ್ಲ. ಚಂದ್ರನ ಹೊರಗಿನ ಕಕ್ಷೆಯಲ್ಲಿ ಉಪಗ್ರಹ ಸುತ್ತುತ್ತಿದ್ದು ಇನ್ನು 1 ವರ್ಷ ಅದರ ಆಯುಷ್ಯ ಇರಲಿದೆ. ಇದೇ ವೇಳೆ ಇಸ್ರೋ ಚಂದ್ರಯಾನ 2 ರ ಮುಂದಿನ ಹೆಜ್ಜೆಯ ಬಗ್ಗೆಯೂ ತೀರ್ಮಾನಿಸಲಿದೆ.
ವಿಕ್ರಂ ಲ್ಯಾಂಡಿಂಗ್ನಲ್ಲಿ ಆದ ಸಮಸ್ಯೆಯೇನು ಎಂಬುದನ್ನು ತಿಳಿಯಲು ಅದು ದತ್ತಾಂಶ ಸಂಗ್ರಹಣೆ ಮಾಡಲಿದೆ. ಶೇ.95ರಷ್ಟು ಯೋಜನೆ ಯಶಸ್ವಿಯಾಗಿರುವುದರಿಂದ ಮುಂದಿನ ಯೋಜನೆಗೆ ನೆರವು ಸಿಗಲಿದೆ.
ಇಸ್ರೋದ ಮಾಜಿ ನಿರ್ದೇಶಕ ಡಿ ಶಶಿಕುಮಾರ್ ಅವರು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದಂತೆ ಲ್ಯಾಂಡರ್ ಮತ್ತು ಆರ್ಬಿಟರ್ (ಉಪಗ್ರಹ) ನಡುವೆ ಸಂಪರ್ಕ ಸರಿಯಾಗಿತ್ತು. ಆದರೆ ಸಂವಹನ ದತ್ತಾಂಶಗಳು ಸಿಗದಾಗಿವೆ. ಇದರಿಂದ ಕೊನೆಯ 15 ನಿಮಿಷದಲ್ಲಿ ಏನಾಯ್ತು ಎಂಬುದರ ಬಗ್ಗೆ ವಿಜ್ಞಾನಿಗಳು ಶೋಧ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ದೂರ ಬಾಹ್ಯಾಕಾಶ ಯಾನದಲ್ಲಿ, ಲ್ಯಾಂಡಿಂಗ್ ವೇಳೆ ಹೀಗಾಗದಂತೆ ನೋಡಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.