Lok Sabha 2024; ಫಲಿತಾಂಶ ಮೋದಿಯ ನೈತಿಕ ಸೋಲು: ಖರ್ಗೆ
Team Udayavani, Jun 5, 2024, 12:42 AM IST
ಹೊಸದಿಲ್ಲಿ: ಚುನಾವಣ ಫಲಿತಾಂಶ ದೇಶದ ಜನರಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಜತೆಗೆ ಪ್ರಧಾನಿ ಮೋದಿ ಯವರ ವಿರುದ್ಧದ ಜನಾಭಿಪ್ರಾಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.
ಫಲಿತಾಂಶದ ಬಳಿಕ ಎಐಸಿಸಿ ಕಚೇರಿಯಲ್ಲಿ ಮಾತನಾಡಿ, “ಚುನಾವಣ ಫಲಿತಾಂಶ ದೇಶದ ಜನರು ಮತ್ತು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಈ ಚುನಾ ವಣೆ ದೇಶದ ಜನ ಮತ್ತು ಮೋದಿ ನಡು ವಿನ ಹೋರಾಟವೆಂದು ನಾವು ಹೇಳುತ್ತಿ ದ್ದೆವು. ಜನರು ನೀಡಿದ ತೀರ್ಪನ್ನು ವಿನೀತರಾಗಿ ಸ್ವೀಕರಿಸುತ್ತೇವೆ’ ಎಂದಿದ್ದಾರೆ.
ಮತದಾರರು ಬಿಜೆಪಿ ಸೇರಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಲಿಲ್ಲ. ಈ ಫಲಿತಾಂಶ ಪ್ರಧಾನಿ ಮೋದಿಯವರಿಗೆ ಉಂಟಾದ ನೈತಿಕ, ರಾಜಕೀಯ ಸೋಲು. ಪ್ರತಿಯೊಂದಕ್ಕೂ ನಾನು ನಾನು ಎನ್ನುತ್ತಿದ್ದ ಪ್ರಧಾನಿಗೆ ಉಂಟಾಗಿರುವ ಸೋಲು ಎಂದಿದ್ದಾರೆ. ರಾಹುಲ್ ಗಾಂಧಿಯ ಭಾರತ್ ಜೋಡೋ ಮತ್ತು ಭಾರತ್ ಜೋಡೋ ನ್ಯಾಯಯಾತ್ರೆ ದೇಶದ ಲಕ್ಷಾಂತರ ಮತದಾರರನ್ನು ಸಂಪರ್ಕಿಸು ವಲ್ಲಿ ನೆರವಾಯಿತು. ಅವರೆಲ್ಲರೂ ಪಕ್ಷವನ್ನು ಬೆಂಬಲಿಸಿದರು ಎಂದಿದ್ದಾರೆ.
ಪ್ರಧಾನಿಯಿಂದ ಸುಳ್ಳು ಪ್ರಚಾರ: ಕಾಂಗ್ರೆಸ್ನ ಪ್ರಣಾಳಿಕೆ ಬಗ್ಗೆ ಪ್ರಧಾನಿ ಮೋದಿ ಯಾವತ್ತೂ ಸುಳ್ಳು ಪ್ರಚಾರ ನಡೆಸಿದರು. ಅದು ದೇಶದ ಜನರಿಗೆ ಮನವರಿಕೆಯಾಗಿದೆ. ಇಂಡಿಯಾ ಕೂಟ ಜನರಿಗೆ ಉಂಟಾಗುತ್ತಿದ್ದ ನೈಜ ಸಮಸ್ಯೆ ಗಳಾಗಿರುವ ನಿರುದ್ಯೋಗ, ಹಣದು ಬ್ಬರ, ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿಯ ವಿಚಾರ ಮುಂದಿಟ್ಟುಕೊಂಡು ಪ್ರಚಾರ ನಡೆಸಿದೆವು ಎಂದರು.
ವಿರೋಧ ಮಾಡಿದ್ರೆ ಜೈಲು
ಬಿಜೆಪಿ ವಿರೋಧಿಸಿದವರನ್ನು ಜೈಲಿಗೆ ಹಾಕಲಾಯಿತು. ಒತ್ತಡ ತಾಳಲಾ ರದ ಕೆಲವು ಪಕ್ಷಗಳು ಸಹಕರಿಸಿದವು. ಮತ್ತೆ ಬಿಜೆಪಿಗೆ ಅಧಿಕಾರ ಕೊಟ್ಟರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಹಾನಿ ಎಂದು ಜನಕ್ಕೆ ಮನವರಿಕೆಯಾ ಗಿದೆ ಎಂದು ಖರ್ಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ
Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!
BBK11: ಬಿಗ್ ಬಾಸ್ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.