![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 14, 2018, 12:12 PM IST
ಹೊಸದಿಲ್ಲಿ: ದೇಶದಾದ್ಯಂತ ನಾನಾ ಬ್ಯಾಂಕು ಗಳಲ್ಲಿ ಅನಾಥವಾಗಿರುವ ಖಾತೆಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದ್ದು, ಇಂಥ ಖಾತೆಗಳಲ್ಲಿ ಸುಮಾರು 8 ಸಾವಿರ ಕೋಟಿ ರೂ.ಹಣ ನಿರುಪ ಯುಕ್ತವಾಗಿ ಉಳಿದಿದೆಯೆಂದು ಆರ್ಬಿಐ ತಿಳಿಸಿದೆ.
2017ರ ಡಿ. 16ರವರೆಗಿನ ಮಾಹಿತಿಯಂತೆ ದೇಶದಲ್ಲಿ ಇಂಥ 2.63 ಕೋಟಿ ಬ್ಯಾಂಕ್ ಖಾತೆಗಳಿದ್ದು, ಇವುಗಳಲ್ಲಿ 8,864.6 ಕೋಟಿ ರೂ. ಹಣವಿದೆ. ಅನಾಮಧೇಯ ವ್ಯಕ್ತಿಗಳಿಂದ ಕೆಲ ಬ್ಯಾಂಕ್ಗಳ ಖಾತೆಗೆ ಹಣ ಜಮೆ ಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹಾಗೂ ಮೌಲ್ಯಗಳಲ್ಲೂ ಗಣನೀಯ ಹೆಚ್ಚಳವಾಗಿದೆ ಎಂದು ಆರ್ಬಿಐ ಹೇಳಿದೆ.
ನಾಲ್ಕು ವರ್ಷಗಳಲ್ಲಿ ಅಧಿಕ: 2012ರಲ್ಲಿ 1.32 ಕೋಟಿ ಖಾತೆಗಳಿಗೆ ಹೀಗೆ ಹಣ ಹರಿದುಬಂದಿದ್ದರೆ, 2016ರಲ್ಲಿ 2.63 ಕೋಟಿ ಖಾತೆಗಳಿಗೆ ಇಂಥ ಹಣ ಜಮೆಯಾಗಿದೆ. ಇದಲ್ಲದೆ, 2012ರಲ್ಲಿ 3,598 ಕೋಟಿ ರೂ.ಗಳಷ್ಟಿದ್ದ ಈ ಅನಾಥ ಧನ, 2016ರ ಹೊತ್ತಿಗೆ 8,864 ಕೋಟಿ ರೂ.ಗಳಿಗೆ ಬಂದು ಮುಟ್ಟಿದೆ. ಆದರೆ, ಈ ಹಣವನ್ನು ಪಡೆದುಕೊಳ್ಳಲು ಯಾರೂ ಬಂದಿಲ್ಲ ಎಂದಿದೆ ಆರ್ಬಿಐ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.