Agnipath Scheme: ಅಗ್ನಿಪಥ ಯೋಜನೆಯಲ್ಲಿ ಶೇ.50 ಯೋಧರ ಉಳಿಕೆಗೆ ಚಿಂತನೆ ?
ಅಗ್ನಿಪಥ ಪ್ರವೇಶ ವಯಸ್ಸು 23ಕ್ಕೆ ಏರಿಕೆಗೂ ಚಿಂತನೆ
Team Udayavani, Sep 6, 2024, 9:32 PM IST
ನವದೆಹಲಿ: ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿರುವ “ಅಗ್ನಿಪಥ’ ಯೋಜನೆಯಲ್ಲಿ ಸರ್ಕಾರ ದೊಡ್ಡ ಮಟ್ಟದ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.
ಪೂರ್ವ ಲಡಾಖ್ನಲ್ಲಿ ಚೀನಾ ಜತೆಗೆ ಉಂಟಾಗಿರುವ ಗಡಿ ತಗಾದೆ ಹಿನ್ನೆಲೆಯಲ್ಲಿ “ಅಗ್ನಿಪಥ’ ಯೋಜನೆಯಲ್ಲಿ ನೇಮಕಗೊಂಡಿರುವ ಯೋಧರನ್ನು ಸೇನೆಯ 3 ವಿಭಾಗಗಳಲ್ಲಿ ಉಳಿಸಿಕೊಳ್ಳುವ ಪ್ರಮಾಣವನ್ನು ಹಾಲಿ ಶೇ.25ರಿಂದ ಶೇ.50ಕ್ಕೆ ಏರಿಕೆ ಮಾಡುವ ಪ್ರಸ್ತಾಪದ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಸರ್ಕಾರದ ಮುಂದಿರುವ ಹೊಸ ಪ್ರಸ್ತಾಪದ ಅನ್ವಯ ಯೋಜನೆಗಾಗಿ ಆರಂಭಿಕ ವಯೋಮಿತಿಯನ್ನು ಈಗಿ ರುವ 17ರಿಂದ 23ನೇ ವರ್ಷಕ್ಕೆ ಪರಿಷ್ಕರಿಸಲಾಗುತ್ತದೆ. ಪರ್ವತ ಮತ್ತು ಕಡಿದಾದ ಗುಡ್ಡಗಾಡು ಪ್ರದೇಶಗಳಲ್ಲಿ ಹೋರಾಟ ಮತ್ತು ಕಾರ್ಯಾಚರಣೆ ನಡೆಸಲು ಯುವಕರ ಅಗತ್ಯವಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಸೇನಾಧಿಕಾರಿ ಹೇಳಿಕೊಂಡಿದ್ದಾರೆ.
“ಅಗ್ನಿಪಥ’ ಯೋಜನೆಯ ಅನ್ವಯ 17 ವರ್ಷದಿಂದ 21 ವರ್ಷ ವಯೋಮಿತಿಯವರೆಗೆ ಯುವಕರನ್ನು ಸೇನೆಯ 3 ವಿಭಾಗಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. 4 ವರ್ಷಗಳ ಸೇವೆಯ ಬಳಿಕ ಶೇ.25 ಮಂದಿಯನ್ನು ಹೊರತುಪಡಿಸಿ ಉಳಿದವರನ್ನು ಕೈಬಿಡುವ ಬಗ್ಗೆ ಈಗಿನ ಪ್ರಸ್ತಾಪವಿದೆ.
ಇದನ್ನೂ ಓದಿ: ಪೆನ್ನಿಂದ ವಿಶ್ವದ ಅತಿ ಚಿಕ್ಕ ವ್ಯಾಕ್ಯೂಮ್ ಕ್ಲೀನರ್ ತಯಾರಿಸಿದ ಭಾರತೀಯ ವಿದ್ಯಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ಟ್ರೈನಿ ವೈದ್ಯೆ ಅತ್ಯಾಚಾರ – ಹತ್ಯೆ ಪ್ರಕರಣ: ಮಹತ್ವದ ಮಾಹಿತಿ ನೀಡಿದ ಸಿಬಿಐ
Shiv sena:ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ: ಶಿವಸೇನಾ ಶಾಸಕ
Amroha: ವರದಕ್ಷಿಣೆ ನೀಡಲಿಲ್ಲ ಎಂದು ಪತ್ನಿಯನ್ನು ಹೊಡೆದು ಕೊ*ದ ಪತಿ!
NDA: 3ನೇ ಅವಧಿಯಲ್ಲೇ ಒಂದು ದೇಶ-ಒಂದು ಚುನಾವಣೆ ಜಾರಿಯಾಗಲಿದೆ…ಮೈತ್ರಿ ಬೆಂಬಲವಿದೆಯೇ?
Gujarat: ವಂದೇ ಮೆಟ್ರೋ ಹೆಸರು ಬದಲಾಯಿಸಿದ ಸರ್ಕಾರ; ಇನ್ಮುಂದೆ…
MUST WATCH
ಹೊಸ ಸೇರ್ಪಡೆ
Kiccha Sudeep: ʼಸೈಮಾʼ ಕಾರ್ಯಕ್ರಮದಲ್ಲಿ ನಿರೂಪಕನಿಗೆ ʼಕನ್ನಡʼ ಪಾಠ ಮಾಡಿದ ಕಿಚ್ಚ
ಇನ್ನು ಹತ್ತು ವರ್ಷಗಳಲ್ಲಿ ದಾವಣಗೆರೆ ಐಎಎಸ್ ಹಬ್- ಜಿ.ಬಿ. ವಿನಯ್ ಕುಮಾರ್
Kolkata: ಟ್ರೈನಿ ವೈದ್ಯೆ ಅತ್ಯಾಚಾರ – ಹತ್ಯೆ ಪ್ರಕರಣ: ಮಹತ್ವದ ಮಾಹಿತಿ ನೀಡಿದ ಸಿಬಿಐ
Sandalwood: ದೆವ್ವ ಹುಡುಕಿ ಹೊರಟ ʼಮಾಂತ್ರಿಕʼ
Shiv sena:ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ: ಶಿವಸೇನಾ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.