![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 10, 2017, 3:00 AM IST
ಸಿಹೋರ್ (ಮ.ಪ್ರ): ಗದ್ದೆ ಉಳಲು ಎತ್ತುಗಳೇ ಇಲ್ಲ. ಹಾಗೆಂದು ಕೃಷಿ ಬಿಡಲು ಸಾಧ್ಯವಿಲ್ಲ. ಅದಕ್ಕಾಗಿ ಶಾಲೆಗೆ ಹೋಗುತ್ತಿದ್ದ ಪುತ್ರಿಯರ ಕೈಗೆ ನೇಗಿಲು ಕೊಡಿಸಿದ್ದಾನೆ ಮಧ್ಯಪ್ರದೇಶದ ಸಿಹೋರ್ ಜಿಲ್ಲೆಯ ವಸಂತಪುರ ಪಂಗ್ರಿ ಗ್ರಾಮದ ರೈತ. ಎತ್ತು ಖರೀದಿಸಲು ದುಡ್ಡಿನ ಕೊರತೆ ಇರುವುದರಿಂದ ಮನಸ್ಸಿಲ್ಲದೇ ಇದ್ದರೂ ಇಂಥ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಆತ ಮಾಧ್ಯಮಗಳಿಗೆ ಹೇಳಿದ್ದಾನೆ.
“ಎತ್ತುಗಳ ಖರೀದಿಗೆ ಮತ್ತು ಅವುಗಳ ಸಾಕಣೆ, ಉಸ್ತುವಾರಿಗಾಗಿ ನನ್ನ ಹತ್ತಿರ ಅಗತ್ಯಕ್ಕೆ ತಕ್ಕಷ್ಟು ದುಡ್ಡು ಇಲ್ಲ. ಹೀಗಾಗಿ ಶಾಲೆಗೆ ಹೋಗುತ್ತಿರುವ ಪುತ್ರಿಯರನ್ನು ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದ್ದೇನೆ’ ಎಂದು ಸರ್ದಾರ್ ಕಹ್ಲಾ ಎಂಬ ರೈತ ತನ್ನ ವ್ಯಥೆಯ ಕಥೆಯನ್ನು ವಿವರಿಸಿದ್ದಾನೆ. ಮಾಧ್ಯಮಗಳಲ್ಲಿ ರೈತನ ವಿಚಾರ ಪ್ರಕಟವಾಗುತ್ತಲೇ ಜಿಲ್ಲಾಡಳಿತ, ಸಂಕಷ್ಟದಲ್ಲಿರುವ ರೈತರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬಾರದು. ಅವರಿಗೆ ಸೂಕ್ತ ನೆರವು ನೀಡಲಾಗುತ್ತದೆ ಎಂದು ಹೇಳಿದೆ.
ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ಕೃಷಿಯಲ್ಲಿ ಉಂಟಾಗಿರುವ ಬೆಳೆ ನಷ್ಟ. ಸಾಲ ಬಾಧೆ ಇನ್ನಿತರ ಹಲವು ಸಮಸ್ಯೆಗಳಿಂದಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಆರು ರೈತರು ಪೊಲೀಸರು ಹಾರಿಸಿದ ಗುಂಡಿಗೆ ಬಲಿಯಾಗಿದ್ದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.