ರಚನಾತ್ಮಕ ಟೀಕೆಗೆ ಸ್ವಾಗತ : ಮನ್‌ ಕಿ ಬಾತ್‌ನಲ್ಲಿ ಮೋದಿ


Team Udayavani, May 29, 2017, 10:23 AM IST

Narendra-Modi-6-600.jpg

ಹೊಸದಿಲ್ಲಿ: ‘ನಾವು ಮಾಡಿರುವ ಕೆಲಸಗಳನ್ನು ಜನರು ಅಭೂತಪೂರ್ವವಾಗಿ ವಿಶ್ಲೇಷಿಸುತ್ತಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಏಕೆಂದರೆ, ರಚನಾತ್ಮಕ ಟೀಕೆಯು ಪ್ರಜಾಸತ್ತೆ ಯನ್ನು ಬಲಿಷ್ಠಗೊಳಿಸುತ್ತದೆ.’ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಮಾತಿದು.  ಕೇಂದ್ರ ಸರಕಾರವು 3 ವರ್ಷಗಳನ್ನು ಪೂರೈಸಿದ ನಂತರದ ಮೊದಲ ‘ಮನ್‌ ಕಿ ಬಾತ್‌’ನಲ್ಲಿ ಮಾತನಾಡಿದ ಅವರು, ಮೊದಲಿಗೆ ಮುಸ್ಲಿಮರ ಪವಿತ್ರ ಮಾಸ ರಂಜಾನ್‌ ಆರಂಭಗೊಂಡ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶುಭ ಕೋರಿದರು.

ನಮ್ಮ ದೇಶವು ಎಲ್ಲ ನಂಬಿಕೆಗಳು ಹಾಗೂ ಸಮುದಾಯಗಳ ಜನರನ್ನು ಹೊಂದಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಈ ರಮ್ಜಾನ್‌ ಮಾಸವು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಹೆಚ್ಚಿಸಲಿ ಎಂದು ಪ್ರಾರ್ಥಿಸುವುದಾಗಿ ಅವರು ಹೇಳಿದರು. ಭಾರತದಲ್ಲಿ ವಿಗ್ರಹಪೂಜೆಯನ್ನು ನಂಬುವವರು ಮತ್ತು ಅದನ್ನು ವಿರೋಧಿಸುವವರು ಜತೆಯಾಗಿ ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಕೊನೆಯದಾಗಿ, ಎಲ್ಲ ಧರ್ಮಗಳು, ನಂಬಿಕೆಗಳು, ಸಿದ್ಧಾಂತಗಳು ಅಥವಾ ಸಂಪ್ರದಾಯಗಳು ನೀಡುವ ಸಂದೇಶವೊಂದೇ- ಅದು ಶಾಂತಿ, ಒಗ್ಗಟ್ಟು ಮತ್ತು ಸದ್ಭಾವನೆ ಎಂದು ಹೇಳಿದರು ಮೋದಿ.

ಸ್ವಚ್ಛತೆಯು ಸಾಮೂಹಿಕ ಚಳವಳಿಯಾಗಲಿ: ಎಲ್ಲರೂ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದೂ ಕರೆ ನೀಡಿದ ಮೋದಿ, ದೇಶದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಸಾಮೂಹಿಕ ಚಳವಳಿ ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು. ‘ತ್ಯಾಜ್ಯವನ್ನು ಕೇವಲ ‘ಕಸ’ವೆಂದು ನೋಡಬೇಡಿ. ಅದನ್ನು ‘ರಸ’ವೆಂದು ನೋಡಿದರೆ, ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಯ ಐಡಿಯಾಗಳು ಹೊಳೆಯುತ್ತವೆ,’ ಎಂದರು. ಜತೆಗೆ, ಮುಂಬೈನ ವರ್ಸೋವಾ ಬೀಚ್‌ ಅನ್ನು ಸ್ವಚ್ಛಗೊಳಿಸುವ ಕಾರ್ಯಕ್ಕಿಳಿದಿರುವ ಅಫ್ರೋಜ್‌ ಶಾ ಮತ್ತು ತಂಡವನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.


ದಿಲ್ಲಿಯ ಸ್ಲಮ್‌ನಲ್ಲಿ ಮನ್‌ ಕಿ ಬಾತ್‌ ಆಲಿಸುತ್ತಿರುವ ಅಮಿತ್‌ ಶಾ.

ಇದೇ ವೇಳೆ, ಹಿಂದುತ್ವದ ಐಕಾನ್‌ ವಿ.ಡಿ.ಸಾವರ್ಕರ್‌ರ 134ನೇ ಜನ್ಮದಿನದ ಅಂಗವಾಗಿ, ಅವರನ್ನು ಸ್ಮರಿಸಿದ ಮೋದಿ, ಸಾವರ್ಕರ್‌ರಂಥ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇಂದಿನ ಯುವಜನತೆ ತೋರಿಸುತ್ತಿರುವ ಆಸಕ್ತಿಯು ಶ್ಲಾಘನೀಯ ಎಂದರು. ಯೋಗದ ಮಹತ್ವವನ್ನೂ ಪ್ರಸ್ತಾಪಿಸಿ, ದೇಹದ ಎಲ್ಲ ಇಂದ್ರಿಯಗಳನ್ನು ಸಂಪರ್ಕಿಧಿಸುವಂತೆ, ಜಗತ್ತಿನ ಎಲ್ಲ ಜನರನ್ನೂ ಸಂಪರ್ಕಿಸುವ ಸಾಮರ್ಥ್ಯ ಯೋಗಕ್ಕಿದೆ ಎಂದರು.

ಮನದ ಮಾತಿನಿಂದ ನಿಮ್ಮಲ್ಲಿ ಒಬ್ಬನಾದೆ
2 ವರ್ಷಗಳ ಹಿಂದೆ ಮನ್‌ ಕಿ ಬಾತ್‌ ಕಾರ್ಯಕ್ರಮ ಆರಂಭಿಸಿದಾಗ ನಾನು ಇದನ್ನು ಯಾರೂ ರಾಜಕೀಯ ಕನ್ನಡಕ ಧರಿಸಿ ನೋಡಲಿಕ್ಕಿಲ್ಲ ಎಂದು ಭಾವಿಸಿದ್ದೆ. ಕೆಲವರು ಅದನ್ನು ಮಾಡುತ್ತಿದ್ದಾರೆ. ಆದರೆ, ಮನ್‌ ಕಿ ಬಾತ್‌ ಮೂಲಕ ನಾನು ದೇಶದ ಪ್ರತಿಯೊಂದು ಕುಟುಂಬದಲ್ಲೂ ಒಬ್ಬ ಸದಸ್ಯನಂತಾದೆ. ಕುಟುಂಬ ಸದಸ್ಯರೊಂದಿಗೆ ಎಲ್ಲ ವಿಚಾರಗಳನ್ನು ಮಾತನಾಡುವಂತೆ, ಚರ್ಚಿಸುವಂತೆ ನಾನಿಲ್ಲಿ ನಿಮ್ಮಲ್ಲಿ ಒಬ್ಬ ನಾದೆ ಎಂದೂ ಮೋದಿ ಹೇಳಿದರು. ಇದೇ ಸಂದರ್ಭದಲ್ಲಿ, ಇತ್ತೀಚೆಗೆ ಬಿಡುಗಡೆಯಾದ ಮನ್‌ ಕಿ ಬಾತ್‌ ಪುಸ್ತಕಕ್ಕೆ ಒಂದು ರೂಪಾಯಿ ಯನ್ನೂ ಪಡೆಯದೇ ಚಿತ್ರ ಬಿಡಿಸಿಕೊಟ್ಟ ಅಬುಧಾಬಿಯ ಕಲಾವಿದ ಅಕ್ಬರ್‌ ಸಾಬ್‌ಗೆ ಧನ್ಯವಾದ ಹೇಳಬಯಸುತ್ತೇನೆ ಎಂದರು ಪ್ರಧಾನಿ.

ಟಾಪ್ ನ್ಯೂಸ್

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ISSF Junior World Championship: ಕಿರಿಯರ ಶೂಟಿಂಗ್‌; ಭಾರತಕ್ಕೆ ಸಮಗ್ರ ಪ್ರಶಸ್ತಿ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

ಗ್ವಾಲಿಯರ್‌ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.