ಮಹಾಕಾಲ ಲೋಕ; ಇಂದು ಪ್ರಧಾನಿ ಮೋದಿಯಿಂದ ಲೋಕಾರ್ಪಣೆ
Team Udayavani, Oct 11, 2022, 7:15 AM IST
ಮಧ್ಯಪ್ರದೇಶದ ಉಜ್ಜೈನ್ ನಲ್ಲಿ ಮಹಾಕಾಲೇಶ್ವರ ದೇಗುಲ ಕಾರಿಡಾರ್ ಅಭಿವೃದ್ಧಿ ಯೋಜನೆಯ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಲಿದ್ದಾರೆ. 900 ಮೀ. ಉದ್ದದ ಮಹಾಕಾಲ ಲೋಕ ಕಾರಿಡಾರ್ ಅನ್ನು ಅವರು ಲೋಕಾರ್ಪಣೆ ಮಾಡಲಿದ್ದು, ಇದು ಭಾರತದಲ್ಲೇ ಅತ್ಯಂತ ಉದ್ದವಾದ ಕಾರಿಡಾರ್ ಎಂಬ ಖ್ಯಾತಿ ಪಡೆಯಲಿದೆ.
ಉದ್ದೇಶವೇನು?
ಪ್ರಾಚೀನ ಮಹಾಕಾಲೇಶ್ವರ ದೇವಾಲಯವು ದೇಶದಲ್ಲಿನ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ವರ್ಷಪೂರ್ತಿ ಇಲ್ಲಿಗೆ ಜನರು ಹರಿದುಬರುತ್ತಲೇ ಇರುತ್ತಾರೆ. ಇದನ್ನು ಆಧ್ಯಾತ್ಮಿಕ ಹಾಗೂ ಪ್ರವಾಸಿತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಮಹಾಕಾಲ ಲೋಕ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಜತೆಗೆ ನಗರದ ಪುರಾತನ ಜಲಾಶಯವಾದ ರುದ್ರಸಾಗರ ಸರೋವರಕ್ಕೂ ಹೊಸ ರೂಪ ನೀಡಲಾಗಿದೆ.
ವೈಶಿಷ್ಟ್ಯವೇನು?
– ಕಾರಿಡಾರ್ನ ಆರಂಭದಲ್ಲೇ ನಂದಿದ್ವಾರ ಮತ್ತು ಪಿನಾಕಿ ದ್ವಾರವನ್ನು ನಿರ್ಮಿಸಲಾಗಿದೆ.
– ಒಳಗೆ ಬೃಹದಾಕಾರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.
– ಕಾರಿಡಾರ್ ನಿರ್ಮಾಣದಲ್ಲಿ ರಾಜಸ್ಥಾನದ ಬಾನ್ಸಿ ಪಹಾರ್ಪುರದ ಮರಳುಗಲ್ಲು ಬಳಕೆ
ರಾಜಸ್ಥಾನ, ಗುಜರಾತ್, ಒಡಿಶಾದ ಶಿಲ್ಪಿಗಳು ಪ್ರತಿಯೊಂದು ಶಿಲೆಯನ್ನೂ ಕೆತ್ತಿ ಅದ್ಭುತ ಸ್ತಂಭಗಳನ್ನು ನಿರ್ಮಿಸಿದ್ದಾರೆ.
– ಕಾರಂಜಿಗಳು, ಶಿವಪುರಾಣದ ಕಥೆಗಳನ್ನು ಹೇಳುವಂಥ 50 ವರ್ಣಚಿತ್ರಗಳು ಕಾರಿಡಾರ್ನಲ್ಲಿ ಮಿಂಚಲಿವೆ.
– 108 ಸ್ತಂಭಗಳಿದ್ದು, ಈ ಪೈಕಿ ಕೆಲವು ಸ್ತಂಭಗಳ ಮೇಲ್ಭಾಗದಲ್ಲಿ ತ್ರಿಶೂಲ ಶೈಲಿಯ ವಿನ್ಯಾಸ ಮಾಡಲಾಗಿದೆ. ಜತೆಗೆ ಮುಂಭಾಗದಲ್ಲಿ ಶಿವಮುದ್ರೆಗಳಿವೆ.
– ಉದ್ಯಾನ, ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ, ಮಳಿಗೆಗಳು, ಸೌರ ವಿದ್ಯುತ್ದೀಪಗಳು, ಯಾತ್ರಿಗಳಿಗೆ ಫೆಸಿಲಿಟಿ ಸೆಂಟರ್ ಮತ್ತಿತರ ವ್ಯವಸ್ಥೆಗಳಿವೆ.
– ರುದ್ರಸಾಗರ ಸರೋವರದ ಮುಂಭಾಗದಲ್ಲಿ ಸಂಗೀತ ಕಾರಂಜಿಯ ವ್ಯವಸ್ಥೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horrific; ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನೇ ಬ*ಲಿ ನೀಡಿದ ಮಾಲಕ !!!
Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ
Gurugram: ಗುಂಡಿನ ಚಕಮಕಿ-ನಟೋರಿಯಸ್ ಕ್ರಿಮಿನಲ್ ಭಾಷಾ ಬಂಧನ, ಶಸ್ತ್ರಾಸ್ತ್ರ ವಶ
Gold Stolen: ಹಾಡಹಗಲೇ ಕಾರು ಅಡ್ಡಗಟ್ಟಿ, ಇಬ್ಬರನ್ನು ಅಪಹರಿಸಿ 2.5 ಕೆಜಿ ಚಿನ್ನ ದೋಚಿದ ತಂಡ
MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Horrific; ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನೇ ಬ*ಲಿ ನೀಡಿದ ಮಾಲಕ !!!
Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ
ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!
KSRTC; ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ
World Tourism Day:ಪಶ್ಚಿಮ ಘಟ್ಟದ ಕಾನನದ ಸಣ್ಣ ಜಲಪಾತದ ಹುಡುಕಾಟದ ಸಾಹಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.