![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 14, 2024, 12:44 PM IST
ಲಕ್ನೋ: ಬಟ್ಟೆ ಖರೀದಿಸುವ ವೇಳೆ ವ್ಯಕ್ತಿಯೊಬ್ಬ ಅಂಗಡಿ ಮಾಲೀಕನ ಜೊತೆ ವಾಗ್ವಾದವನ್ನು ನಡೆಸಿ ಆತನ ಬೆರಳುಗಳನ್ನು ಕಚ್ಚಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.
ಗಾರ್ಮೆಂಟ್ ಅಂಗಡಿಯೊಂದರಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವ ಶಿವಚಂದ್ರ ಕಾರವಾರಿಯಾ ಅವರ ಅಂಗಡಿಗೆ ವ್ಯಕ್ತಿಯೊಬ್ಬ ಫ್ರಾಕ್ ಖರೀದಿಸಲು ಬಂದಿದ್ದಾನೆ. ಗ್ರಾಹಕ ಫ್ರಾಕ್ ಖರೀದಿ ಮಾಡಿ ಆ ದಿನ ವಾಪಾಸ್ ಹೋಗಿದ್ದಾನೆ.
ಮರುದಿನ ಅದೇ ಗ್ರಾಹಕ ವಾಪಾಸ್ ಬಂದು, ನಿನ್ನೆ ಖರೀದಿಸಿದ ಫ್ರಾಕ್ ಸಣ್ಣದಾಗುತ್ತದೆ. ತನಗೆ ದೊಡ್ಡ ಸೈಜ್ ವುಳ್ಳ ಫ್ರಾಕ್ ಬೇಕೆಂದು ಶಿವಚಂದ್ರ ಅವರ ಬಳಿ ಕೇಳಿದ್ದಾನೆ. ಈ ವೇಳೆ ಶಿವಚಂದ್ರ ಅವರು ದೊಡ್ಡ ಸೈಜ್ ನ ಫ್ರಾಕ್ ಗೆ 50 ರೂಪಾಯಿ ಹೆಚ್ಚಗೆ ನೀಡಬೇಕೆಂದು ಹೇಳಿದ್ದಾರೆ. ಆದರೆ ಇದಕ್ಕೆ ಗ್ರಾಹಕ ಗರಂ ಆಗಿದ್ದಾರೆ. 50 ರೂಪಾಯಿ ಹೆಚ್ಚು ಪಾವತಿಸುವುದಿಲ್ಲ ಎಂದಿದ್ದಾರೆ. ಗ್ರಾಹಕ ಹಾಗೂ ಮಾಲೀಕನ ನಡುವೆ ವಾಗ್ವಾದ ನಡೆದು, ಗ್ರಾಹಕ ಮಾಲೀಕನ ಬೆರಳುಗಳನ್ನು ಕಚ್ಚಿ ಗಾಯಗೊಳಿಸಿದ್ದಾನೆ. ಪಕ್ಕದಲ್ಲಿದ್ದ ಮಾಲೀಕನ ಮಗನಿಗೂ ಕಚ್ಚಿದ್ದಾನೆ. ಅಂಗಡಿಯಿಂದ ವಾಪಾಸ್ ಹೋಗುವ ವೇಳೆ ಬಟ್ಟೆಗಳನ್ನು ಎಸೆದು ಮಾಲೀಕನಿಗೆ ಬೆದರಿಕೆಯನ್ನು ಹಾಕಿದ್ದಾರೆ.
ಗಾಯಗೊಂಡ ಕಾರವಾರಿಯಾ ಸಮೀಪದ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.
ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಆತನನ್ನು ಬಂಧಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಸೈನಿ ತಿಳಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.