Miracle: 40 ದಿನದಲ್ಲಿ 7ಬಾರಿ ಹಾವು ಕಚ್ಚಿದರೂ ಬದುಕುಳಿದ ಯುವಕ, ಇದೊಂದು ಪವಾಡ ಎಂದ ವೈದ್ಯರು
Team Udayavani, Jul 13, 2024, 12:48 PM IST
ಉತ್ತರಪ್ರದೇಶ: ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಯುವಕನೊಬ್ಬನಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ಬಾರಿ ಹಾವು ಕಚ್ಚಿರುವ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಘಟನೆ ಬಗ್ಗೆ ಯುವಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಜಿಲ್ಲೆಯ ಸೌರಾ ಗ್ರಾಮದ ನಿವಾಸಿಯಾಗಿರುವ ವಿಕಾಸ್ ದುಬೆ ಎಂಬ ಯುವಕನೇ ಹಾವಿನ ದಾಳಿಗೆ ಒಳಗಾಗಿ ಬದುಕುಳಿದ ಯುವಕ. ಇದೀಗ ಏಳನೇ ಬಾರಿ ಹಾವಿನ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವಿನ ದವಡೆಯಿಂದ ಪಾರಾಗಿದ್ದಾನೆ ಎಂದು ಆತನಿಗೆ ಚಿಕಿತ್ಸೆ ನೀಡುವ ವೈದ್ಯರು ಹೇಳಿದ್ದಾರೆ.
ವಿಕಾಸ್ ದುಬೆಗೆ ಜೂನ್ 2ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಹವಿ ಕಚ್ಚಿದೆ ವಿಚಾರ ಗೊತ್ತಾಗುತಿದಂತೆ ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಗುಣಮುಖನಾಗಿ ಎರಡು ದಿನದಲ್ಲಿ ಮನೆಗೆ ಬಂದಿದ್ದ, ಇದಾದ ಬಳಿಕ ಜೂನ್ 10ರಂದು ಮತ್ತೆ ಎರಡನೇ ಬಾರಿ ಹಾವು ಕಚ್ಚಿದೆ ಈ ವೇಳೆಯೂ ಅದೇ ಆಸ್ಪತ್ರೆಗೆ ತೆರಳಿ ಅದೇ ವೈದ್ಯರ ಬಳಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದಾನೆ, ಆದರೆ ಈ ವೇಳೆ ಆತನಿಗೆ ಹಾವಿನ ಬಗ್ಗೆ ಭಯ ಹುಟ್ಟಿದೆ ಸತತ ಎರಡು ಬರಿ ಹಾವು ಕಚ್ಚಿದ್ದರಿಂದ ಭಯಗೊಂಡ ವಿಕಾಸ್ ರಾತ್ರಿ ಮಲಗಲೂ ಹೆದರುತ್ತಿದ್ದನಂತೆ ಹೀಗೆ ಏಳು ದಿನಗಳು ಬಿಟ್ಟು ಜೂನ್ 17ರಂದು ಮತ್ತೆ ಹಾವಿನ ದಾಳಿಗೆ ಒಳಗಾಗಿದ್ದಾನೆ ಅಲ್ಲದೆ ಈ ವೇಳೆ ಆತ ಗಾಬರಿಗೊಂಡಿದ್ದರಿಂದ ಮೂರ್ಛೆ ಕೂಡ ಹೋಗಿದ್ದ ಎನ್ನಲಾಗಿದೆ ಆದರೂ ಹಿಂದೆ ಚಿಕಿತ್ಸೆ ನೀಡಿದ ವೈದ್ಯರೇ ಚಿಕಿತ್ಸೆ ನೀಡಿ ಗುಣಮುಖನಾಗಿ ಮನೆಗೆ ಬಂದಿದ್ದಾನೆ.
ಇದಾಗಿ ಕೆಲ ದಿನಗಳು ಬಿಟ್ಟು ನಾಲ್ಕನೇ ಬರಿ ಹಾವಿನ ಕಡಿತಕ್ಕೆ ಒಳಗಾಗಿದ್ದಾನೆ ಮನೆಯವರು ಮತ್ತೆ ಆತನನ್ನು ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಇದನ್ನು ಕಂಡ ವೈದ್ಯರು ಕೂಡ ಬೆಚ್ಚಿ ಬಿದ್ದಿದ್ದಾರೆ ಅಲ್ಲದೆ ದುಬೆಗೆ ಒಂದು ಸಲಹೆಯನ್ನು ನೀಡಿದ್ದಾರೆ, ಸ್ವಲ್ಪ ಸಮಯ ಊರು ಬಿಟ್ಟು ಬೇರೆ ಕಡೆ ಇರುವಂತೆ ಸಲಹೆ ನೀಡಿದ್ದಾರೆ. ಅದರಂತೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ದುಬೆ ತನ್ನ ಮನೆ ಬಿಟ್ಟು ಫತೇಹ್ ಪುರ್ ನ ರಾಧಾ ನಗರದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಇರಲು ನಿರ್ಧರಿಸಿ ಅಲ್ಲಿಗೆ ತೆರಳಿದ್ದಾನೆ ಆದರೆ ಆತನ ದುರದೃಷ್ಟ ಅಲ್ಲಿಯೂ ಹಾವಿನ ದಾಳಿಗೆ ಒಳಗಾಗಿದ್ದಾನೆ ಮತ್ತೆ ಪೋಷಕರು ಆತನನ್ನು ತನ್ನ ಊರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಇದನ್ನು ಕಂಡ ವೈದ್ಯರೂ ಇದೊಂದು ಪವಾಡವೇ ಸರಿ ಎಂದು ಹೇಳಿದ್ದಾರೆ.
ಇನ್ನು ಚಿಕ್ಕಮ್ಮಣ್ಣ ಮನೆಯಲ್ಲೂ ನನಗೆ ರಕ್ಷಣೆ ಇಲ್ಲ ಎಂದು ತಿಳಿದ ದುಬೆ ಹೆತ್ತವರೊಂದಿಗೆ ತನ್ನ ಊರಲ್ಲೇ ಇರಲು ನಿರ್ಧರಿಸಿದ ಆದರೆ ಹಾವಿಗೆ ದುಬೆ ಮೇಲೆ ಅದೇನು ದ್ವೇಷನೋ ಗೊತ್ತಿಲ್ಲ ಆರನೇ ಬಾರಿ ಕಚ್ಚಿದೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿ ಕೆಲ ದಿನ ಆಸ್ಪತ್ರೆಯಲ್ಲೇ ಇದ್ದು ವಾಪಸ್ಸಾಗಿದ್ದಾನೆ, ಒಂದೆಡೆ ಹಾವಿನ ಭಯ ಮತ್ತೊಂದೆಡೆ ಕನಸಿನಲ್ಲೂ ಹಾವು ಬಂದು ಕಚ್ಚುವ ಕನಸು, ಜೀವಭಯದಲ್ಲೇ ರಾತ್ರಿ ಕಳೆಯುತಿದ್ದ ದುಬೆಗೆ ಇದೀಗ ಏಳನೇ ಬಾರಿ ಹಾವು ಕಚ್ಚಿದೆಯಂತೆ ಮತ್ತೆ ಆಸ್ಪತ್ರೆಗೆ ದಾಖಲಾಗಿರುವ ದುಬೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದ್ಯ ಅಪಾಯದಿಂದ ಪಾರಾಗಿದ್ದಾನೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಜವಾಹರಲಾಲ್ ಹೇಳಿದ್ದಾರೆ.
ಇದನ್ನೂ ಓದಿ: Team India; “ಶಮಿಯನ್ನು ಮೊದಲು ನೋಡಿಕೊಳ್ಳಿ…”: ಗೌತಿಗೆ ಸಲಹೆ ನೀಡಿದ ಮಾಜಿ ಬೌಲಿಂಗ್ ಕೋಚ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ
Fake Visa: ನಕಲಿ ವೀಸಾ ಉತ್ಪಾದನೆಯ ಫ್ಯಾಕ್ಟರಿ ಪತ್ತೆ-ಮೂವರು ಆರೋಪಿಗಳ ಬಂಧನ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.