Mumbai; ಟೀಮ್ ಇಂಡಿಯಾ ಸ್ವಾಗತ ಮೆರವಣಿಗೆ ಬಳಿಕ ಭಾರೀ ಕಸ ಸಂಗ್ರಹ

ರಾತ್ರೋ ರಾತ್ರಿ ಕ್ಲೀನ್

Team Udayavani, Jul 5, 2024, 5:11 PM IST

1-aaaa

ಮುಂಬೈ: T20 ವಿಶ್ವಕಪ್ ವಿಜೇತ್ ಭಾರತ ಕ್ರಿಕೆಟ್ ತಂಡಕ್ಕೆ ಗುರುವಾರ ಸಂಜೆ ಮುಂಬೈನಲ್ಲಿ ಅದ್ದೂರಿ ಸ್ವಾಗತ ನೀಡಿ ವಿಕ್ಟರಿ ಪರೇಡ್ ನಡೆಸಿದ ಬಳಿಕ ರಸ್ತೆಗಳಲ್ಲಿ ಭಾರೀ ಪ್ರಮಾಣದ ಕಸ ಕಂಡು ಬಂದಿದೆ.

ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ವೀರೋಚಿತ ಸ್ವಾಗತ ನೀಡಲು ಮುಂಬೈನ ಐಕಾನಿಕ್ ಮರೀನಾ ಡ್ರೈವ್ ಸಮುದ್ರ ತೀರದ ರಸ್ತೆಗಳಲ್ಲಿ ಬಹುಸಂಖ್ಯೆಯ ಜನರು ನೀರಿನ ಬಾಟಲಿಗಳು ಮತ್ತು ಪಾದರಕ್ಷೆಗಳನ್ನು ಒಳಗೊಂಡಂತೆ ಕಸವನ್ನು ಎಸೆದು ಹೋಗಿದ್ದು, ನಂತರ ಅದನ್ನು ನಾಗರಿಕ ಸಂಸ್ಥೆ ಏಳು ವಾಹನಗಳಲ್ಲಿ ಸಂಗ್ರಹಿಸಿ ಸ್ವಚ್ಛ ಕಾರ್ಯ ನಡೆಸಿದೆ.

ವಿಜಯೋತ್ಸವದ ಮೆರವಣಿಗೆಯ ನಂತರ ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಶುಕ್ರವಾರ ತಿಳಿಸಿದೆ.

ಗುರುವಾರ ಸಂಜೆ ಭಾರತೀಯ ಕ್ರಿಕೆಟ್ ತಂಡದ ವಿಜಯೋತ್ಸವದ ಮೆರವಣಿಗೆಯನ್ನು ವೀಕ್ಷಿಸಲು ದಕ್ಷಿಣ ಮುಂಬೈನ ಮರೀನಾ ಡ್ರೈವ್‌ನಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ನಾರಿಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (NCPA) ನಿಂದ ರಾತ್ರಿ 7.30 ರ ನಂತರ ತೆರೆದ ಬಸ್ ಮೆರವಣಿಗೆಯು ವಾಂಖೆಡೆ ಕ್ರೀಡಾಂಗಣದವರೆಗೆ ನಡೆಯಿತು. ಈ ಎರಡು ಸ್ಥಳಗಳ ಅಂತರವನ್ನು ಕ್ರಮಿಸಲು ಸಾಮಾನ್ಯವಾಗಿ ಐದು ನಿಮಿಷ ಸಾಕಾಗುತ್ತದೆಯಾದರೂ, ಭಾರೀ ಜನದಟ್ಟಣೆಯಿಂದಾಗಿ ಮೆರವಣಿಗೆ ತಲುಪಲು ಒಂದೂವರೆ ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡಿತು.

ಸ್ವಚ್ಛತಾ ಅಭಿಯಾನದ ವೇಳೆ ಹೆಚ್ಚಿನ ಸಂಖ್ಯೆಯ ಆಹಾರ ಪದಾರ್ಥಗಳ ಪ್ಲಾಸ್ಟಿಕ್ ಗಳು, ನೀರಿನ ಬಾಟಲಿಗಳು ಹೊದಿಕೆಗಳ ಜತೆಗೆ ಹೆಚ್ಚಿನ ಪ್ರಮಾಣದ ಶೂಗಳು ಮತ್ತು ಚಪ್ಪಲಿಗಳನ್ನು ಸಂಗ್ರಹಿಸಲಾಗಿದೆ. ಒಟ್ಟು ಕಸದ ಪೈಕಿ ಶೂಗಳು ಮತ್ತು ಚಪ್ಪಲ್‌ಗಳನ್ನು ಐದು ಜೀಪ್‌ಗಳಲ್ಲಿ ಸಂಗ್ರಹಿಸಲಾಗಿದೆ, ಎರಡು ಡಂಪರ್‌ಗಳನ್ನು ಸಹ ಸ್ಥಳದಿಂದ ಕಸ ಎತ್ತಲು ಬಳಸಲಾಗಿದೆ ಎಂದು BMC ಹೇಳಿದೆ.

ಭಾರೀ ಭದ್ರತೆಯ ನಡುವೆಯೂ ಮೆರವಣಿಗೆ ವೇಳೆ ನೂಕು ನುಗ್ಗಲಿನ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಹಲವಾರು ಪಾದರಕ್ಷೆಗಳನ್ನು ಕಾಲುಗಳಿಂದ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ

France Poll: ಬ್ರಿಟನ್‌ ಆಯ್ತು…ಫ್ರಾನ್ಸ್‌ ಚುನಾವಣೆಯಲ್ಲೂ ಎಡಪಕ್ಷ ಮೇಲುಗೈ-ಅತಂತ್ರ ಸಂಸತ್!

France Poll: ಬ್ರಿಟನ್‌ ಆಯ್ತು…ಫ್ರಾನ್ಸ್‌ ಚುನಾವಣೆಯಲ್ಲೂ ಎಡಪಕ್ಷ ಮೇಲುಗೈ-ಅತಂತ್ರ ಸಂಸತ್!

Compulsory menstrual leave issue; What did the Supreme Court say?

Menstrual Leave; ಕಡ್ಡಾಯ ಮುಟ್ಟಿನ ರಜೆ ವಿಚಾರ; ಸುಪ್ರೀಂ ಕೋರ್ಟ್ ಹೇಳಿದ್ದೇನು?

Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಹೊಳೆಯಲ್ಲಿ ಶವವಾಗಿ‌ ಪತ್ತೆ

Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಹೊಳೆಯಲ್ಲಿ ಪತ್ತೆ

Neha Hiremath Case; 483-page charge sheet was submitted by the CID

Neha Hiremath Case; 483 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದ ಸಿಐಡಿ

Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲನ್ನು ಕಳೆದುಕೊಂಡ ಮಹಿಳೆ

Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆ

14

ಪ್ರಭಾಸ್‌ – ಸಂದೀಪ್‌ ವಂಗಾ ʼಸ್ಪಿರಿಟ್‌ʼನಲ್ಲಿ ವಿಲನ್‌ ಪಾತ್ರಕ್ಕೆ ಕೊರಿಯಾದ ಖ್ಯಾತ ನಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Compulsory menstrual leave issue; What did the Supreme Court say?

Menstrual Leave; ಕಡ್ಡಾಯ ಮುಟ್ಟಿನ ರಜೆ ವಿಚಾರ; ಸುಪ್ರೀಂ ಕೋರ್ಟ್ ಹೇಳಿದ್ದೇನು?

Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲನ್ನು ಕಳೆದುಕೊಂಡ ಮಹಿಳೆ

Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆ

Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ

PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Shirva; ವಿಜಯಾ ಬ್ಯಾಂಕ್ ನಿವೃತ್ತ ಚೀಫ್‌ ಮ್ಯಾನೇಜರ್‌ ಕೆ. ದಿವಾಕರ ಮಾರ್ಲ ನಿಧನ

Shirva; ವಿಜಯಾ ಬ್ಯಾಂಕ್ ನಿವೃತ್ತ ಚೀಫ್‌ ಮ್ಯಾನೇಜರ್‌ ಕೆ. ದಿವಾಕರ ಮಾರ್ಲ ನಿಧನ

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ

ಹಾವೇರಿ: ವಾಸ್ತವಿಕ ಸ್ಥಿತಿಗತಿ ಪರಿಚಯಿಸುತ್ತದೆ “ಮನವಾಣಿಗಳು’ ಕೃತಿ

ಹಾವೇರಿ: ವಾಸ್ತವಿಕ ಸ್ಥಿತಿಗತಿ ಪರಿಚಯಿಸುತ್ತದೆ “ಮನವಾಣಿಗಳು’ ಕೃತಿ

France Poll: ಬ್ರಿಟನ್‌ ಆಯ್ತು…ಫ್ರಾನ್ಸ್‌ ಚುನಾವಣೆಯಲ್ಲೂ ಎಡಪಕ್ಷ ಮೇಲುಗೈ-ಅತಂತ್ರ ಸಂಸತ್!

France Poll: ಬ್ರಿಟನ್‌ ಆಯ್ತು…ಫ್ರಾನ್ಸ್‌ ಚುನಾವಣೆಯಲ್ಲೂ ಎಡಪಕ್ಷ ಮೇಲುಗೈ-ಅತಂತ್ರ ಸಂಸತ್!

Compulsory menstrual leave issue; What did the Supreme Court say?

Menstrual Leave; ಕಡ್ಡಾಯ ಮುಟ್ಟಿನ ರಜೆ ವಿಚಾರ; ಸುಪ್ರೀಂ ಕೋರ್ಟ್ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.