10 ಸಾವಿರಕ್ಕೆ ವಿಐಪಿ ದರ್ಶನ
Team Udayavani, Jul 22, 2019, 5:38 AM IST
ತಿರುಪತಿ: ತಿರುಪತಿಯಲ್ಲಿರುವ ವೆಂಕಟೇಶ್ವರ ದೇಗುಲದಲ್ಲಿ ಗಣ್ಯ, ಅತಿಗಣ್ಯರಿಗೆ ಮೀಸಲಾಗಿ ಇರುವ ದೇವರ ದರ್ಶನ ವ್ಯವಸ್ಥೆ ರದ್ದು ಮಾಡುವ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನಮ್ಸ್ (ಟಿಟಿಡಿ) ಆಡಳಿತ ಮಂಡಳಿ ಈಗಾಗಲೇ ಘೋಷಣೆ ಮಾಡಿದೆ. ಇನ್ನು ಮುಂದೆ ಅದನ್ನು ಜನಸಾಮಾನ್ಯರಿಗೂ ವಿಸ್ತರಿಸಲಾಗುತ್ತದೆ. ಅದಕ್ಕಾಗಿ ಹತ್ತು ಸಾವಿರ ರೂ. ನೀಡಬೇಕು.
ಟಿಟಿಡಿ ಆಡಳಿತ ಮಂಡಳಿ ಶ್ರೀವಾನಿ ಟ್ರಸ್ಟ್ ಅಂದರೆ ಶ್ರೀ ವೆಂಕಟೇಶ್ವರ ಆಲಯ ನಿರ್ಮಾಣಂ ಟ್ರಸ್ಟ್ ಎಂಬ ಹೊಸ ವ್ಯವಸ್ಥೆ ಶುರು ಮಾಡಿದೆ. ದೇಶಾದ್ಯಂತ ವೆಂಕಟೇಶ್ವರ ದೇಗುಲ ನಿರ್ಮಿಸಲು ಅದರ ಮೂಲಕ ಧನಸಂಗ್ರಹ ಮಾಡಲಾಗುತ್ತದೆ. ಅದಕ್ಕಾಗಿ ಧನ ಸಂಗ್ರಹಿಸಲು ಈ ಟ್ರಸ್ಟ್ಗೆ 10 ಸಾವಿರ ರೂ. ನೀಡಿದರೆ ಅವರಿಗೆ ದೇವರ ದರ್ಶನದ ವಿಐಪಿ ಟಿಕೆಟ್ ನೀಡಲಾಗುತ್ತದೆ. ಸದ್ಯ ವಿಐಪಿ ದರ್ಶನದ ಟಿಕೆಟ್ಗೆ 500 ರೂ. ನಿಗದಿ ಮಾಡಲಾಗಿದೆ. ಲಕ್ಷಾಂತರ ಮಂದಿ ಭಕ್ತರು ದೇಗುಲಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕೆಲವೊಮ್ಮೆ ಹಣ ಪಾವತಿ ಮಾಡಿದರೂ ಟಿಕೆಟ್ ಸಿಗುತ್ತಿಲ್ಲ. ಅದಕ್ಕಾಗಿ ಶ್ರೀವಾನಿ ಟ್ರಸ್ಟ್ ಮೂಲಕ 10 ಸಾವಿರ ರೂ.ಸಂಗ್ರಹಿಸಿದರೆ ದೇಗುಲ ನಿರ್ಮಾಣಕ್ಕೂ ಧನಸಂಗ್ರಹವಾಗುತ್ತದೆ ಮತ್ತು ಜನಸಾಮಾನ್ಯರಿಗೂ ವಿಐಪಿ ಟಿಕೆಟ್ ನೀಡಿದಂತಾಗುತ್ತದೆ. ಇದರ ಜತೆಗೆ ದೇವರ ದರ್ಶನಕ್ಕಾಗಿ ಟೆಕೆಟ್ ತೆಗೆಸಿಕೊಡುತ್ತೇನೆ ಎಂದು ವಂಚಿಸುವ ಮಧ್ಯವರ್ತಿಗಳಿಗೂ ತಡೆಯೊಡ್ಡಿದಂತಾಗುತ್ತದೆ ಎಂದು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.