ಜಾಲತಾಣ ವೀರರೇ, ಯುದ್ಧ ಭೂಮಿಯಲ್ಲಿ ಹೋರಾಡಿ
Team Udayavani, Mar 4, 2019, 1:10 AM IST
“ಸಾಮಾಜಿಕ ಜಾಲತಾಣಗಳ ವೀರರೇ, ನಿಮಗೆ ಯುದ್ಧ ಬೇಕೆಂದರೆ ದಯವಿಟ್ಟು ಸೇನೆಗೆ ಸೇರಿ, ರಣಾಂಗಣದಲ್ಲಿ ಹೋರಾಡಿ.’ ಹುತಾತ್ಮ ಯೋಧರೊಬ್ಬರ ಪತ್ನಿ ಆಡಿರುವ ಆಕ್ರೋಶದ ನುಡಿಗಳಿವು. ಜಮ್ಮು-ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ಕಳೆದ ವಾರ ಪತನಕ್ಕೀಡಾದ ಎಂಐ-17 ಕಾಪ್ಟರ್ನಲ್ಲಿದ್ದ ವಾಯುಪಡೆ ಅಧಿಕಾರಿ, ಸ್ಕ್ವಾಡ್ರನ್ ಲೀಡರ್ ನಿನಾದ್ ಮಂಡವಾYನೆ (33) ಅವರ ಅಂತ್ಯಸಂಸ್ಕಾರ ನಡೆದ ಮಾರನೇ ದಿನ ಸುದ್ದಿಗಾರರ ಜತೆ ಅವರ ಪತ್ನಿ ವಿಜೇತಾ ಆಡಿರುವ ಮಾತುಗಳಿವು.
“ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ನಡೆಯುತ್ತಿದೆ. ಮಾಧ್ಯಮಗಳು ಕೆಲವೊಮ್ಮೆ ಜವಾಬ್ದಾರಿ ಯುತವಾಗಿ ವರ್ತಿಸಿದರೆ, ಮತ್ತೆ ಕೆಲವೊಮ್ಮೆ ಸಂಪೂರ್ಣ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ. ಸುಖಾಸುಮ್ಮನೆ ಯುದ್ಧ ಬೇಕೆಂದು ಅರಚಾಡುವ ನೀವು, ನನ್ನ ಪತಿ ನಿನಾದ್ಗೋಸ್ಕರ, ವಿಂಗ್ ಕಮಾಂಡರ್ ಅಭಿನಂದನ್ಗೊàಸ್ಕರ ಅಥವಾ ಹುತಾತ್ಮರಿಗೋಸ್ಕರ ಒಂದು ಕೆಲಸ ಮಾಡಿ. ಒಂದೋ ನೀವು ಸೇನೆಗೆ ಸೇರಿ ಅಥವಾ ನಿಮ್ಮ ಕುಟುಂಬದ ಯಾರಾದರೊಬ್ಬ ಸದಸ್ಯರನ್ನು ಸೇನೆಗೆ ಸೇರಿಸಿ. ಅದು ಸಾಧ್ಯವಾಗದಿದ್ದರೆ, ನಿಮ್ಮ ಸುತ್ತಮುತ್ತಲೂ ಸಣ್ಣಪುಟ್ಟ ಸಕಾರಾತ್ಮಕ ಬದಲಾವಣೆಯನ್ನಾದರೂ ಮಾಡಿ’ ಎಂದು ವಿಜೇತಾ ಹೇಳಿದ್ದಾರೆ.
“ನಮಗೆ ಯುದ್ಧ ಬೇಡ. ನಿಮಗೆ ಯುದ್ಧದಿಂದಾಗುವ ಹಾನಿ ಬಗ್ಗೆ ಗೊತ್ತಿಲ್ಲ. ನಿನಾದ್ರಂಥ ಯೋಧರನ್ನು ಕಳೆದುಕೊಳ್ಳಲು ನಾವು ಇಷ್ಟಪಡುವುದಿಲ್ಲ. ಅಷ್ಟಕ್ಕೂ ಸಾಮಾಜಿಕ ಜಾಲತಾಣಗಳ ವೀರರಾದ ನಿಮಗೆ ಯುದ್ಧ ಬೇಕೆಂದಾದರೆ, ಹೋಗಿ ರಣಾಂಗಣದಲ್ಲಿ ಹೋರಾಡಿ’ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ ವಿಜೇತಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್
EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ
J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ
Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Sulya: ಅವಾಚ್ಯ ಮಾತು: ಮಹಿಳೆಯಿಂದ ಪೊಲೀಸರಿಗೆ ದೂರು
Udupi; ಗೀತಾರ್ಥ ಚಿಂತನೆ 57: ದುರ್ಯೋಧನನಲ್ಲಿ ಮಾನಸಿಕ ಸ್ಥೈರ್ಯ ಕುಸಿತ
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!
By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.