ತವರಿಗೆ ಸುಸ್ವಾಗತ; ಏರ್‌ಲಿಫ್ಟ್ 2,500ಕ್ಕೂ ಅಧಿಕ ಮಂದಿ ಇಂದು ತಾಯ್ನಾಡಿಗೆ


Team Udayavani, May 7, 2020, 6:20 AM IST

ತವರಿಗೆ ಸುಸ್ವಾಗತ; ಏರ್‌ಲಿಫ್ಟ್ 2,500ಕ್ಕೂ ಅಧಿಕ ಮಂದಿ ಇಂದು ತಾಯ್ನಾಡಿಗೆ

ಹೈದರಾಬಾದ್‌/ ಕೊಚ್ಚಿ/ ಹೊಸದಿಲ್ಲಿ: ವಿದೇಶದಿಂದ ಆಗಮಿಸಲಿರುವ 2,500ಕ್ಕೂ ಅಧಿಕ ಮನೆಮಕ್ಕಳನ್ನು ಸ್ವದೇಶವು ಗುರುವಾರ ಸ್ವಾಗತಿಸಲಿದೆ. ವಿಶ್ವದ ಅತಿದೊಡ್ಡ ಏರ್‌ಲಿಫ್ಟ್ ಗೆ ಭಾರತ ಭಾಷ್ಯ ಬರೆಯಲಿದ್ದು, ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಕಲ ವ್ಯವಸ್ಥೆ ಸಂಪೂರ್ಣವಾಗಿದೆ.

ಮುತ್ತಿನ ನಗರಿಗೆ 2,350 ಮಂದಿ
ಆರು ದೇಶಗಳಿಂದ ಬರುವ ಏಳು ವಿಶೇಷ ವಿಮಾನಗಳು ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಇಳಿಯಲಿದ್ದು, 2,350 ಜನರ ಸ್ವಾಗತಕ್ಕೆ ವ್ಯವಸ್ಥೆಯಾಗಿದೆ. ಹೈದರಾಬಾದಿನ ಹೊಟೇಲ್‌ಗ‌ಳಲ್ಲಿ ವಿವಿಧ ಶ್ರೇಣಿಯ ಪ್ರಯಾಣಿಕರಿಗೆ ಪ್ರತ್ಯೇಕ ಬಜೆಟ್‌ಗಳಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಅನುವು ಮಾಡಿಕೊಡಲಾಗಿದೆ. ಅಗತ್ಯ ವೈದ್ಯಕೀಯ ತಂಡಗಳೂ ಅಲ್ಲಿ ಬೀಡುಬಿಡಲಿವೆ.

ಕೊಚ್ಚಿ ಏರ್‌ಪೋರ್ಟ್‌, ಬಂದರಿನಲ್ಲೂ ಸಿದ್ಧತೆ
ಕೊಲ್ಲಿ ರಾಷ್ಟ್ರಗಳಿಂದ ಹೊರಡಲಿರುವ ಮೂರು ವಿಮಾನ ಗಳ ಪೈಕಿ ಒಂದು ಗುರುವಾರ ಕೊಚ್ಚಿ ಏರ್‌ಪೋರ್ಟ್‌ನಲ್ಲಿ ಇಳಿಯಲಿದೆ. ಅಬುಧಾಬಿಯಿಂದ ಇದು ಹೊರಡಲಿದ್ದು, ರಾತ್ರಿ 9.45ಕ್ಕೆ ಕೊಚ್ಚಿ ತಲುಪಲಿದೆ. ಇದರಲ್ಲಿ ಆಗಮಿಸುವ 200 ಭಾರತೀಯರ ಕ್ವಾರಂಟೈನ್‌ಗೆ ಸಿದ್ಧತೆ ಮುಗಿದಿದೆ. ಮುಂದಿನ ಒಂದು ವಾರದಲ್ಲಿ 2,700 ಮಂದಿಯನ್ನು ಕೇರಳ ಸ್ವಾಗತಿಸಲಿದೆ. ಇನ್ನೊಂದೆಡೆ ಮಾಲ್ಡೀವ್ಸ್‌, ಯುಎಇ ಕಡೆ ಯಿಂದ ಹಡಗುಗಳಲ್ಲಿಯೂ ಸಹಸ್ರಾರು ಮಂದಿ ಆಗಮಿಸಲಿ ದ್ದಾರೆ. ಕೊಚ್ಚಿ ಏರ್‌ಪೋರ್ಟ್‌, ಬಂದರುಗಳಲ್ಲಿ ಸಕಲ ವ್ಯವಸ್ಥೆಯನ್ನು ಎರ್ನಾಕುಳಂ ಜಿಲ್ಲಾಡಳಿತ ಪರಿಶೀಲಿಸಿದೆ.ತಿರುವನಂತಪುರದಲ್ಲಿ ಮೇ 9, 10ರಂದು ತಲಾ 200 ಪ್ರಯಾಣಿಕರ ಎರಡು ವಿಮಾನಗಳು ಇಳಿಯಲಿದ್ದು, ಅಲ್ಲೂ ಭರದ ಸಿದ್ಧತೆಯಾಗಿದೆ.

ದಿಲ್ಲಿಯೂ ಸಿದ್ಧ
ಆಗಮಿಸುವವರನ್ನು ಕಡ್ಡಾಯ ತಪಾಸಣೆಗೆ ಒಳಪಡಿಸಲು ದಿಲ್ಲಿ ಸರಕಾರ ಕೂಡ ಮಾರ್ಗಸೂಚಿ ಹೊರಡಿಸಿದೆ. ಕ್ವಾರಂಟೈನ್‌ ಕೇಂದ್ರಗಳ ಪರಿಶೀಲನೆ ನಡೆಸುತ್ತಿದೆ.

ಲಗ್ಗೆ ಇರಿಸಿದ ಜನ:
ವೆಬ್‌ಸೈಟ್‌ ಕ್ರ್ಯಾಶ್‌
ಹೊರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಕರೆತರುವ ಯೋಜನೆಗೆ ಚಾಲನೆ ನೀಡುತ್ತಿದ್ದಂತೆ ನಾಗರಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್‌ ಕ್ರ್ಯಾಶ್‌ ಆಗಿದೆ. ಭಾರೀ ಸಂಖ್ಯೆಯ ಜನ ಒಂದೇ ಸಮನೆ ವೆಬ್‌ಸೈಟ್‌ ಪ್ರವೇಶಿಸಿದ್ದರಿಂದ ಹೀಗಾಗಿದೆ ಎಂದು ಸಚಿವಾಲಯ ದೃಢಪಡಿಸಿದೆ. ಈ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ಪ್ರಯಾಣದ ಎಲ್ಲ ವಿವರ ಏರ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ.

ಹೊರಡುವ ಮುನ್ನ ಖಡಕ್‌ ಸೂಚನೆ
ಸಂಯುಕ್ತ ಅರಬ್‌ ರಾಷ್ಟ್ರಗಳಿಂದ ನಿರ್ಗಮಿಸುವ ಪ್ರತೀ ಭಾರತೀಯ ಪ್ರಯಾಣಿಕನನ್ನೂ ಕಡ್ಡಾಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿಯೇ ವೈದ್ಯಕೀಯ ತಪಾಸಣೆ, ಐಜಿಎಂ/ ಐಜಿಜಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಭಾರತದಲ್ಲಿ ಇಳಿದ ಕೂಡಲೇ ಕ್ವಾರಂಟೈನ್‌ಗೆ ಒಳಪಡುವ, ಅದರ ವೆಚ್ಚವನ್ನು ಪ್ರಯಾಣಿಕರೇ ಭರಿಸುವ ಒಪ್ಪಂದಕ್ಕೂ ಸಹಿ ಹಾಕಿಸಿಕೊಳ್ಳಲಾಗುತ್ತಿದೆ. ಬೋರ್ಡಿಂಗ್‌ ಸಮಯದಲ್ಲಿ ಪ್ರತಿಯೊಬ್ಬನಿಗೂ ಮಾಸ್ಕ್, 2 ಜೋಡಿ ಕೈಗವಸು, ಸೂಚನಾಪತ್ರ ಹೊಂದಿರುವ ಬ್ಯಾಗ್‌, ಸ್ಯಾನಿಟೈಸರ್‌ ಒಳಗೊಂಡ ಸುರಕ್ಷಾ ಕಿಟ್‌ ನೀಡಲಾಗುತ್ತಿದೆ. ಪ್ರಯಾಣದ ವೇಳೆ ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿರುವ ಆರೋಗ್ಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಯಭಾರ ಕಚೇರಿ ತಿಳಿಸಿದೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.