“ಅಮ್ಮಾ, ಬಾಬಾ ಹೇಗಿದ್ದಾರೆ?’ ವಿಧವೆಯಂತೆ ಕಂಡ ತಾಯಿಗೆ ಜಾಧವ್‌


Team Udayavani, Dec 28, 2017, 3:57 PM IST

Jadhav-family1-600.jpg

ಹೊಸದಿಲ್ಲಿ : ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯಗಳ ಆರೋಪ ಹೊತ್ತು ಪಾಕ್‌ ಮಿಲಿಟರಿ ಕೋರ್ಟ್‌ ನಿಂದ ಮರಣ ದಂಡನೆಯ ಶಿಕ್ಷೆಗೆ ಗುರಿಯಾಗಿ ಅಲ್ಲಿನ ಜೈಲಿನಲ್ಲಿರುವ 47ರ ಹರೆಯದ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಸೆರೆಯಾದ 22 ತಿಂಗಳ ಬಳಿಕ ಕೆಲ ದಿನಗಳ ಹಿಂದೆ ಇಸ್ಲಾಮಾಬಾದ್‌ ನಲ್ಲಿ ತನ್ನ ತಾಯಿ ಮತ್ತು ಪತ್ನಿಯೊಂದಿಗೆ ನಡೆಸಿದ ಅತ್ಯಂತ ಬಿಗಿ ಭದ್ರತೆಯ 40 ನಿಮಿಷಗಳ ಭೇಟಿಯ ಬಳಿಕ ಮನ ಕಲಕುವ ಹಲವು ವಿವರಗಳು ಬಯಲಾಗಿವೆ.

ಹಣೆಗೆ ಬಿಂದಿ, ಕುತ್ತಿಗೆಯಲ್ಲಿ ಮಾಂಗಲ್ಯ, ಕೈಗೆ ಬಳೆ ಇಲ್ಲದೆ ವಿಧವೆಯರ ರೀತಿಯಲ್ಲಿ ಕಂಡು ಬಂದ ತನ್ನ ತಾಯಿ ಮತ್ತು ಪತ್ನಿಯನ್ನು ತನ್ನ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಕಂಡಾಗ ಜಾಧವ್‌ ಆಘಾತಕ್ಕೆ ಗುರಿಯಾಗಿ ತಾಯಿಯಲ್ಲಿ ಕೇಳಿದ ಪ್ರಶ್ನೆ, “ಅಮ್ಮಾ, ಬಾಬಾ (ತಂದೆ) ಹೇಗಿದ್ದಾರೆ ? ಅವರಿಗೇನಾಗಿದೆ?’.

ತಾಯಿ ಆವಂತಿ ಮತ್ತು ಪತ್ನಿ ಚೇತನಾ, ಜಾಧವ್‌ ಜತೆಗೆ ಮನೆ ಭಾಷೆ ಮರಾಠಿಯಲ್ಲಿ ಮಾತನಾಡುವಾಗ ಇವರ ಮೇಲೆ ವಿಚಕ್ಷಣೆ ನಡೆಸುತ್ತಿದ್ದ ಪಾಕ್‌ ಅಧಿಕಾರಿಗಳು ಪದೇ ಪದೇ ಸಂವಹನಕ್ಕೆ ತಾಂತ್ರಿಕವಾಗಿ ತಡೆಯೊಡುತ್ತಿದ್ದರು. ಮೇಲಾಗಿ ಉಭಯತರ ನಡುವೆ ಭದ್ರತೆಯ ನೆಪದಲ್ಲಿ ಪಾಕಿಸ್ಥಾನ, ಗಾಜಿನ ಪರದೆಯನ್ನು ಕೂಡ ಅಳವಡಿಸಿ ಯಾವುದೇ ರೀತಿಯ, ಆಲಿಂಗನವೇ ಮೊದಲಾದ, ಭಾವನಾತ್ಮಕ ಸಮ್ಮಿಲನಕ್ಕೆ ಅವಕಾಶ ನೀಡಿರಲಿಲ್ಲ.

ಕುಲಭೂಷಣ್‌ ಜಾಧವ್‌ಗೆ ಅವರ ತಾಯಿ ಮತ್ತು ಪತ್ನಿಯನ್ನು ವಿಧವೆಯರಂತೆ ಕಾಣಿಸುವ ಮೂಲಕ ಮಾನಸಿಕವಾಗಿ ಜಾಧವ್‌ ಅವರನ್ನು ಇನ್ನಷ್ಟು ಜರ್ಜರಿತಗೊಳಿಸುವುದು ಪಾಕ್‌ ಹುನ್ನಾರವಾಗಿತ್ತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಇವಿಷ್ಟೂ ಸಾಲದೆಂಬಂತೆ ರಣಹದ್ದುಗಳಂತೆ ಈ ಇಬ್ಬರು ಮಹಿಳೆಯರ ಮೇಲೆ ಎರಗಿದ ಪಾಕ್‌ ಪತ್ರಕರ್ತರು ಇವರಿಗೆ ಕೇಳಿದ ಸಂದರ್ಭಕ್ಕೆ ಸಲ್ಲದ ಪ್ರಶ್ನೆಗಳು ಆಘಾತಕಾರಿಯಾಗಿವೆ. 

“ಸಾವಿರಾರು ಅಮಾಯಕ ಪಾಕಿಸ್ಥಾನೀಯರನ್ನು ಕೊಂದ ನಿಮ್ಮ ಪತಿಯ ಬಗ್ಗೆ ನೀವು ಏನು ಹೇಳುತ್ತೀರಿ ?’ “ಕೊಲೆಗಾರನಾಗಿರುವ ನಿಮ್ಮ ಮಗನನ್ನು ಭೇಟಿಯಾದ ಬಳಿಕ ನಿಮಗೇನು ಅನ್ನಿಸಿತು?” ಎಂಬ ಪ್ರಶ್ನೆಗಳನ್ನು ಪಾಕ್‌ ಪತ್ರಕರ್ತರು ಈ ಮಹಿಳೆಯರನ್ನು ತಿವಿಯುವ ರೀತಿಯಲ್ಲಿ, ದೈಹಿಕವಾಗಿ ಅವರ ಮೇಲೇರಿ ಹೋಗುವ ರೀತಿಯಲ್ಲಿ, ಕೇಳಿದರು. 

ಜಾಧವ್‌ ಭೇಟಿಯಾದ ಬಳಿಕ ಈ ಮಹಿಳೆಯರು, ಅದರ ಮೊದಲಿಗಿಂತಲೂ ಹೆಚ್ಚಿನ ಮಾನಸಿಕ ಖನ್ನತೆ ಮತ್ತು ಕ್ಷೋಭೆಯನ್ನು ಅನುಭವಿಸಿದರು ಎಂದು ಇವರ ಸಂಬಂಧಿಯೋರ್ವರು ಭಾರತೀಯ ಮಾಧ್ಯಮಕ್ಕೆ ಹೇಳಿದ್ದಾರೆ. 

ಜಾಧವ್‌, ಅವರ ತಾಯಿ ಮತ್ತು ಪತ್ನಿಯೊಂದಿಗೆ 22 ತಿಂಗಳ ಬಳಿಕ ನಡೆಸಿದ ಭಾವನಾತ್ಮಕ ಭೇಟಿಯನ್ನು ಪಾಕಿಸ್ಥಾನ ಕೇವಲ ತನ್ನ ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಅತ್ಯಂತ ನೀಚತನವನ್ನು ತೋರಿತು ಎಂದು ಈ ಇಡಿಯ ಪ್ರಹಸನವನ್ನು ಸಂಸತ್ತಿನಲ್ಲಿ ಇಂದು ಗುರುವಾರ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ವಿವರಿಸಿದರು. 

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ

Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.