![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 18, 2024, 11:48 PM IST
ಮುಂಬಯಿ: ವಾಣಿಜ್ಯ ನಗರಿ ಮುಂಬಯಿಯಲ್ಲಿ ಹಾಡು ಹಗಲೇ ಪ್ರಿಯಕರನೊಬ್ಬ ತನ್ನ ಮಾಜಿ ಪ್ರೇಯಸಿ ಯನ್ನು ಸ್ಪ್ಯಾನ ರ್ನಿಂದ 15 ಬಾರಿ ಹೊಡೆದು ಭೀಕರವಾಗಿ ಕೊಂದಿ ದ್ದಾನೆ. ವಸೈ ಪ್ರದೇಶದಲ್ಲಿ ಘಟನೆ ನಡೆದಿದ್ದು, ರಾಹುಲ್ ಯಾದವ್ ಎಂಬಾತ ತನ್ನ ಮಾಜಿ ಪ್ರೇಯಸಿ ಆರತಿ ಯಾದವ್ ಬೇರೆ ಯವರ ಜತೆ ಸಂಬಂಧ ಬೆಳೆಸಿದ್ದಾಳೆಂದು ಈ ಕೃತ್ಯವೆಸಗಿದ್ದಾನೆ.
ಏನಾಯಿತು?: ವಸೈನ ಚಿಂಚಪಾಡ ಪ್ರದೇಶದಲ್ಲಿ ಬೆಳಗ್ಗೆ 8:30 ಗಂಟೆಗೆ ಆರತಿ ಕೆಲಸಕ್ಕೆ ಹೋಗುತ್ತಿದ್ದಳು. ಹಿಂದಿ ನಿಂದ ಬಂದ ರೋಹಿತ್ ಸ್ಪ್ಯಾನರ್ನಿಂದ ನೇರ ಆಕೆಯ ತಲೆ, ಎದೆಗೆ ಹೊಡೆದಿದ್ದಾನೆ. ಕೂಡಲೇ ಆರತಿ ಕೆಳಗೆ ಬಿದ್ದಿದ್ದು, ರೋಹಿತ್ ಬರೊಬ್ಬರಿ 15 ಬಾರಿ ಆಕೆಯ ತಲೆಗೆ ನಿರಂತ ರವಾಗಿ ಹೊಡೆದ ಪರಿಣಾಮ, ಸ್ಥಳದಲ್ಲೇ ಆರತಿ ಮೃತಪಟ್ಟಿದ್ದಾಳೆ. ಅವಳ ಶವದ ಮುಂದೆಯೇ “ಏಕೆ ಹೀಗೆ ಮಾಡಿದೆ?’ ಎಂದು ರೋಹಿತ್ ಕಿರುಚಾಡಿದ್ದಾನೆ.
6 ವರ್ಷ ಕಾಲ ಪ್ರೀತಿಸಿದ ಅನಂತರ ತನ್ನನ್ನು ಬಿಟ್ಟು ಆರತಿ ಬೇರೆಯ ವರೊಂದಿಗೆ ಸಂಬಂಧ ಹೊಂದಿದಕ್ಕೆ ರೋಹಿತ್ ಈ ಕೃತ್ಯವೆಸಗಿರುವುದಾಗಿ ತಿಳಿದುಬಂದಿದೆ. ಪೊಲೀಸರು ರೋಹಿತ್ನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.