INDIA ಒಕ್ಕೂಟಕ್ಕೆ ಬಾಹ್ಯ ಬೆಂಬಲವಿದೆ ಆದರೆ ಎಡಪಕ್ಷಗಳು ಹೊರಗಿರಲಿ: ಮಮತಾ
ಕಾರ್ಮಿಕರಿಗೆ ತೊಂದರೆ ಆಗದಿರಲು ಈ ತೀರ್ಮಾನ ಎಂದ ದೀದಿ
Team Udayavani, May 15, 2024, 8:45 PM IST
ಕೋಲ್ಕತಾ: ಇಂಡಿಯಾ ಒಕ್ಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸಲು ತೃಣ ಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷವು ಎಲ್ಲ ರೀತಿಯ ಬಾಹ್ಯ ಬೆಂಬಲ ನೀಡಲು ಸಿದ್ಧವಿದೆ. ಆದರೆ, ಬಂಗಾಳದಲ್ಲಿನ ಕಾಂಗ್ರೆಸ್ ಘಟಕ ಮತ್ತು ಎಡಪಕ್ಷಗಳು ಒಕ್ಕೂಟದ ಭಾಗವಾಗಿರುವಂತಿಲ್ಲ’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೇಶದ ಶೇ.70ರಷ್ಟು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿರುವ ಬೆನ್ನಲ್ಲೇ ಕೇಂದ್ರದಲ್ಲಿ ಸರ್ಕಾರ ರಚನೆ ಕುರಿತಂತೆ ಮಮತಾ ಮಾತನಾಡಿದ್ದು, ಇಂಡಿಯಾ ಒಕ್ಕೂಟ ಸರ್ಕಾರದ ರಚಿಸಲು ಅಗತ್ಯವಾದ ಎಲ್ಲ ರೀತಿಯ ಬಾಹ್ಯ ಬೆಂಬಲವನ್ನೂ ನಾವು ನೀಡಲಿದ್ದೇವೆ. ಪಶ್ಚಿಮ ಬಂಗಾಳದ ನಮ್ಮ ತಾಯಂದಿರು, ಸಹೋದರಿಯರು, 100 ದಿನಗಳ ಉದ್ಯೋಗ ಯೋಜನೆ ಅನ್ವಯ ದುಡಿಯುವ ಕಾರ್ಮಿಕರಿಗೆ ತೊಂದರೆ ಆಗದಿರಲಿ ಎಂಬ ಆಶಯದೊಂದಿಗೆ ಒಕ್ಕೂಟಕ್ಕೆ ಬೆಂಬಲ ನೀಡಲು ಯೋಜಿಸಿದ್ದೇವೆ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಆದರೆ, ನಾವು ಬೆಂಬಲ ನೀಡುವುದು ಬಿಜೆಪಿ ಜತೆಗೆ ಕೈ ಜೋಡಿಸಿರುವ ಬಂಗಾಳದ ಕಾಂಗ್ರೆಸ್ ಮತ್ತು ಸಿಪಿಎಂನಿಂದ ಹೊರಗಿರುವ ಇಂಡಿಯಾ ಒಕ್ಕೂಟಕ್ಕೆ ಮಾತ್ರ ಎಂದಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ತಾಮ್ರ ಗಣಿಯಲ್ಲಿ ಲಿಫ್ಟ್ ಕುಸಿತ: ಹಿರಿಯ ಅಧಿಕಾರಿ ಮೃತ್ಯು, 15 ಮಂದಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.