ವಿಶ್ವದ ಅತಿ ಉದ್ದದ ಗಾಜಿನ ಸ್ಕೈವಾಕ್; ಅಭೂತಪೂರ್ವ ನೋಟ
Team Udayavani, Dec 28, 2022, 7:45 AM IST
ಜಗತ್ತಿನಲ್ಲೇ ಅತಿ ಉದ್ದದ ಗಾಜಿನ ಸ್ಕೈವಾಕ್ನಲ್ಲಿ ನಡೆಯುವ ಅದ್ಭುತ ಅವಕಾಶ ಭಾರತೀಯರಿಗೆ ಸದ್ಯದಲ್ಲೇ ಸಿಗಲಿದೆ. ಮಹಾರಾಷ್ಟ್ರದ ಅಮರಾವತಿಯ ಸಮೀಪದ ಗಿರಿಧಾಮ ಚಿಖಲ್ದಾರಾದಲ್ಲಿ ಬರೋಬ್ಬರಿ 407 ಮೀಟರ್ ಉದ್ದದ ಸ್ಕೈವಾಕ್ ನಿರ್ಮಾಣವಾಗುತ್ತಿದೆ. ಈಗಾಗಲೇ ಶೇ.70ರಷ್ಟು ಕಾಮಗಾರಿ ಮುಗಿದಿದೆ. ಇದು ಪ್ರಸ್ತುತ ಸ್ವಿಜರ್ಲೆಂಡ್ ಮತ್ತು ಚೀನದಲ್ಲಿರುವ ಸ್ಕೈವಾಕ್ಗಿಂತಲೂ ಉದ್ದವಾಗಿರಲಿದೆ.
ಚಿಖಲ್ದಾರಾ ಸ್ಕೈವಾಕ್ನ ಉದ್ದ- 407 ಮೀಟರ್
ಗ್ಲಾಸ್ ಡೆಕ್ನ ಉದ್ದ- 100 ಮೀಟರ್
ಈಗಾಗಲೇ ಪೂರ್ಣಗೊಂಡ ಕಾಮಗಾರಿ- ಶೇ.70
ಲೋಕಾರ್ಪಣೆ ಯಾವಾಗ?- 2023 ಜುಲೈ
ನಿರ್ಮಾಣ ವೆಚ್ಚ- 35 ಕೋಟಿ ರೂ.
ಸ್ವಿಜರ್ಲೆಂಡ್ನ ಸ್ಕೈವಾಕ್ ಉದ್ದ- 397 ಮೀ.
ಚೀನಾದ ಸ್ಕೈವಾಕ್ ಉದ್ದ- 360 ಮೀ.
ಹಲವು ಪ್ರಥಮಗಳ ಕಿರೀಟ
ಜಗತ್ತಿನಲ್ಲೇ ಅತಿ ಉದ್ದನೆಯ ಸ್ಕೈವಾಕ್ ಹಾಗೂ ವಿಶ್ವದ ಮೊದಲ ಸಿಂಗಲ್-ಕೇಬಲ್ ರೋಪ್ ಸಸ್ಪೆನ್ಶನ್ ಸೇತುವೆ ಎಂಬ ಹೆಗ್ಗಳಿಕೆಯನ್ನು ಇದು ಗಳಿಸಲಿದೆ. ಈಗಾಗಲೇ ಚಿಖಲ್ದಾರಾ ಕಣಿವೆಯಲ್ಲಿ ಸ್ಕೈವಾಕ್ಗೆ ಅಗತ್ಯವಿರುವ ಕಂಬಗಳ ಅಳವಡಿಕೆ ಪೂರ್ಣಗೊಂಡಿದೆ. ಈ ವರ್ಷದ ಜನವರಿಯಲ್ಲಿ ಯೋಜನೆಗೆ ರಾಜ್ಯ ಅರಣ್ಯ ಇಲಾಖೆ ಅನುಮತಿ ಸಿಕ್ಕಿತ್ತು. ಪರಿಸರ ಇಲಾಖೆ ಅನುಮತಿ ಸಿಗುವುದು ಬಾಕಿಯಿದೆ ಎಂದು ಸಿಡ್ಕೊà ಕಾರ್ಯಕಾರಿ ಎಂಜಿನಿಯರ್ ದೇವೇಂದ್ರ ಜಮ್ನಿಕರ್ ತಿಳಿಸಿದ್ದಾರೆ.
ಅಭೂತಪೂರ್ವ ನೋಟ
ಸ್ಕೈವಾಕ್ನ ಮಧ್ಯಭಾಗದಲ್ಲಿ 100 ಮೀ. ಉದ್ದದ ಗಾಜಿನ ಅಟ್ಟವನ್ನು ನಿರ್ಮಿಸಲಾಗುತ್ತದೆ. ಈ ಸ್ಕೈವಾಕ್ ಹುಲಿ ರಕ್ಷಿತಾರಣ್ಯದ ಬಫರ್ ವಲಯವನ್ನು ಸಾಗಿ ಹೋಗಲಿದೆ. ಹೀಗಾಗಿ, ಗಾಜಿನ ಸ್ಕೈವಾಕ್ ಮೇಲೆ ನಡೆಯುವಾಗ ಕೆಳಗಿರುವ ರಕ್ಷಿತಾರಣ್ಯ ಮತ್ತು ಪ್ರಾಕೃತಿಕ ಸೌಂದರ್ಯವನ್ನು ಸವಿಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ
Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!
Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ
GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.