YSRCP; ಜಗನ್‌ ಕಚೇರಿಗೆ 42 ಎಕ್ರೆ ಭೂಮಿ,33 ವರ್ಷದ ಭೋಗ್ಯಕ್ಕೆ ಕೇವಲ 1 ಸಾವಿರ!

42 ಎಕ್ರೆ ಭೂಮಿ ಮಾರುಕಟ್ಟೆ ಬೆಲೆ 600 ಕೋಟಿ ರೂ.: ಸಿಎಂ ನಾಯ್ಡು ಪುತ್ರ, ಸಚಿವ ನಾರಾ ಲೋಕೇಶ್‌

Team Udayavani, Jun 24, 2024, 6:45 AM IST

Jagan mohan

ಅಮರಾವತಿ: ಋಷಿಕೊಂಡ ಬೆಟ್ಟದ ಅರಮನೆ, ವೈಎಸ್‌ಆರ್‌ಸಿಪಿ ಅಕ್ರಮ ಕಚೇರಿ ನೆಲಸಮ ವಿವಾದದ ಬೆನ್ನಲ್ಲೇ ಆಂಧ್ರಪ್ರದೇಶ ಮಾಜಿ ಸಿಎಂ ಜಗನ್‌ ಸರಕಾರದ ಅವಧಿಯ ಮತ್ತೂಂದು ಹಗರಣವನ್ನು ಆಡಳಿತಾರೂಢ ಟಿಡಿಪಿ ಬಯಲಿಗೆ ಎಳೆದಿರುವುದಾಗಿ ಹೇಳಿಕೊಂಡಿದೆ. ಜಗನ್‌ ತಮ್ಮ ಪಕ್ಷದ ಕಚೇರಿಗಳನ್ನು ನಿರ್ಮಿಸಲು 26 ಜಿಲ್ಲೆಗಳಲ್ಲಿ 42 ಎಕ್ರೆ ಭೂಮಿ ಹಂಚಿಕೆ ಮಾಡಿದ್ದು, ಪ್ರತೀ ಎಕ್ರೆ ಭೂಮಿಯನ್ನು 33 ವರ್ಷಕ್ಕೆ ಕೇವಲ 1 ಸಾವಿರ ರೂ.ಗಳಿಗೆ ಲೀಸ್‌ಗೆ ನೀಡಿದ್ದಾರೆಂದು ಆರೋಪಿಸಿದೆ.

ಆಂಧ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ನಾರಾ ಲೋಕೇಶ್‌ ಈ ಆರೋಪ ಮಾಡಿದ್ದಾರೆ. “ಜಗನ್‌ ಅವರೇ, 26 ಜಿಲ್ಲೆಗಳಲ್ಲಿ 42 ಎಕ್ರೆ ಭೂಮಿಯನ್ನು ನೀವು ನಿಮ್ಮ ವೈಎಸ್‌ಆರ್‌ಸಿಪಿ ಕಚೇರಿಗಳ ನಿರ್ಮಾಣಕ್ಕೆಂದು ಭೋಗ್ಯಕ್ಕೆ ನೀಡಿದ್ದೀರಿ. ಅದೂ 33 ವರ್ಷಗಳ ಅವಧಿಯ ಭೋಗ್ಯಕ್ಕೆ ಪ್ರತೀ ಎಕ್ರೆ ಭೂಮಿಗೆ ನೀವು ವಿಧಿಸಿರುವ ಬೆಲೆ ಬರೀ 1,000 ರೂ.!’ ಎಂದಿದ್ದಾರೆ. 12ಕ್ಕೂ ಅಧಿಕ ವೈಎಸ್‌ಆರ್‌ಸಿಪಿ ಕಚೇರಿಗಳ ಫೋಟೋವನ್ನೂ ಹಂಚಿ ಕೊಂಡಿದ್ದಾರೆ. ಜತೆಗೆ ನೀವು ಗುತ್ತಿಗೆ ನೀಡಿರುವ 42 ಎಕ್ರೆ ಭೂಮಿಯ ಮೌಲ್ಯ ಬರೋಬ್ಬರಿ 600 ಕೋಟಿ ರೂ.ಆಗಿದ್ದು, ಈ ಹಣದಲ್ಲಿ 4,200 ಬಡವರಿಗೆ ಪ್ರತಿಯೊಬ್ಬ ರಿಗೂ ಒಂದು ಸೆಂಟ್‌ (435.56 ಚದರ ಅಡಿ)ವಂತೆ ಭೂಮಿ ಕೊಡಬಹುದಿತ್ತು. ರಿಷಿಕೊಂಡ ಅರಮನೆಗೆ ಮಾಡಿರುವ ವೆಚ್ಚದಲ್ಲಿ 25,000 ಜನರಿಗೆ ಮನೆ ಕಟ್ಟಿಸಿಕೊಡಬಹುದಿತ್ತು ಎಂದಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವೈಎಸ್ಸಾರ್‌ಸಿಪಿ ತಿರುಗೇಟು
ಟಿಡಿಪಿ ಆರೋಪಕ್ಕೆ ಎಕ್ಸ್‌ನಲ್ಲಿ ವೈಎಸ್‌ಆರ್‌ಸಿಪಿ ತಿರುಗೇಟು ನೀಡಿದ್ದು, 2014ರಿಂದ 2019ರ ಅವಧಿಯಲ್ಲಿ ಟಿಡಿಪಿ ಸರಕಾರವು ಸಾವಿರಾರು ಕೋ. ರೂ. ಮೌಲ್ಯದ ಭೂಮಿಯನ್ನು ಅತ್ಯಲ್ಪ ಮೊತ್ತಕ್ಕೆ ಹಂಚಿಕೆ ಮಾಡಿತ್ತು ಎಂದಿದೆ.

ಟಿಡಿಪಿಯಿಂದ 4 ಸುದ್ದಿ ವಾಹಿನಿಗಳ ಪ್ರಸಾರಕ್ಕೆ ತಡೆ: ಜಗನ್‌ ಪಕ್ಷ ಆರೋಪ
ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ವಿಪಕ್ಷ ವೈಎಸ್‌ಆರ್‌ಸಿಪಿ ನಡುವಿನ ಸಮರ ಈಗ ಚಾನೆಲ್‌ಗ‌ಳ ಮೇಲೆ ನಿಷೇಧ ಹೇರುವ ಹಂತಕ್ಕೆ ತಲುಪಿದೆಯೇ?ಮಾಜಿ ಸಿಎಂ ಜಗನ್‌ರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷ ಇಂಥದ್ದೊಂದು ಆರೋಪ ಮಾಡಿದೆ. ಟಿವಿ9, ಎನ್‌ಟಿವಿ, 10ಟಿವಿ ಮತ್ತು ಸಾಕ್ಷಿ ಟಿವಿಗಳನ್ನು ಪ್ರಸಾರ ಮಾಡಬಾರದು ಎಂದು ಕೇಬಲ್‌ ಆಪರೇಟರ್‌ಗಳಿಗೆ ಮೌಖಿಕವಾಗಿ ಸಂದೇಶ ರವಾನೆಯಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಮೈತ್ರಿಕೂಟದ ಸರಕಾರವೇ ಕಾರಣ ಎಂದು ವೈಎಸ್‌ಆರ್‌ಸಿಪಿ ರಾಜ್ಯಸಭಾ ಸದಸ್ಯ ಎಸ್‌.ನಿರಂಜನ ರೆಡ್ಡಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ (ಟ್ರಾಯ್‌)ಕ್ಕೆ ದೂರು ನೀಡಿದ್ದಾರೆ.

ಅಸೆಂಬ್ಲಿ, ಲೋಕಸಭೆ ಚುನಾವಣೆ ಬಳಿಕ ಈ ರೀತಿ ನಡೆದಿದೆ ಎಂದೂ ಅವರು ಆರೋಪಿಸಿದ್ದಾರೆ. ಇದೇ ವೇಳೆ ಕೇಬಲ್‌ ಆಪರೇಟರ್‌ಗಳು ಕೂಡ ಮಾಜಿ ಸಿಎಂ ಜಗನ್ಮೋಹನ ರೆಡ್ಡಿಯವರ ವೈಎಸ್‌ಆರ್‌ಸಿಪಿಗೆ ಬೆಂಬಲ ನೀಡುವ 4 ಚಾನೆಲ್‌ಗ‌ಳನ್ನು ಪ್ರಸಾರ ಮಾಡಬಾರದು ಎಂಬ ಸೂಚನೆ ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

1-jha

Bihar, ಬಳಿಕ ಝಾರ್ಖಂಡ್‌ನ‌ಲ್ಲಿ ಸೇತುವೆಯೊಂದರ ಗರ್ಡರ್‌ ಕುಸಿತ

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

Manipal ಗಸ್ತು ನಿರತ ಪೊಲೀಸ್‌ ಸಿಬಂದಿಗೆ ಸ್ಕೂಟರ್‌ ಢಿಕ್ಕಿ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jha

Bihar, ಬಳಿಕ ಝಾರ್ಖಂಡ್‌ನ‌ಲ್ಲಿ ಸೇತುವೆಯೊಂದರ ಗರ್ಡರ್‌ ಕುಸಿತ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

6

ಯೂಟ್ಯೂಬ್‌ನಲ್ಲಿ IAS ಪಾಠ ಮಾಡಿ, 21ರ ಹರೆಯದಲ್ಲೇ 10 ಲಕ್ಷ ರೂ. ಕಾರು ಖರೀದಿಸಿದ ವಿದ್ಯಾರ್ಥಿ

1-qwewqewq

West Bengal; ನಡು ಬೀದಿಯಲ್ಲೇ ಮಹಿಳೆಗೆ ನಿರ್ದಯವಾಗಿ ಥಳಿತ:ವಿಡಿಯೋ ವೈರಲ್

ARMY,-Navy-Chiefs

Indian Army: ಆಗ ಸಹಪಾಠಿಗಳು, ಈಗ ಭೂ ಸೇನೆ, ನೌಕಪಡೆ ಮುಖ್ಯಸ್ಥರು!

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

1-jha

Bihar, ಬಳಿಕ ಝಾರ್ಖಂಡ್‌ನ‌ಲ್ಲಿ ಸೇತುವೆಯೊಂದರ ಗರ್ಡರ್‌ ಕುಸಿತ

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

Manipal ಗಸ್ತು ನಿರತ ಪೊಲೀಸ್‌ ಸಿಬಂದಿಗೆ ಸ್ಕೂಟರ್‌ ಢಿಕ್ಕಿ

pragyananda

Superbet Chess; 4ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲುವು

1-dsdsadasdas

Olympics ಆ್ಯತ್ಲೀಟ್ಸ್‌  ಸಿದ್ಧ:  ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.