![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Oct 21, 2023, 7:25 PM IST
ಬಹರೇನ್ : ಸಂಪೂರ್ಣವಾಗಿ ಬಹರೇನ್ ದ್ವೀಪರಾಷ್ಟ್ರದಲ್ಲಿ ಚಿತ್ರೀಕರಣಗೊಂಡಿರುವ ಕಿರು ಚಲನ ಚಿತ್ರ “ಎಲ್ಲಾದರೂ ಇರು ಎಂತಾದರೂ ಇರು ” ಅಕ್ಟೋಬರ್ 27ರಂದು ತೆರೆಗೆ ಬರಲಿದೆ.
ಕನ್ನಡಿಗ ಚರಣ್ ಅಕ್ಷಯ್ ರವರು ಸಾಹಸಕ್ಕೆ ಕೈ ಹಾಕಿದ್ದು, ಚಿತ್ರವು ಅಕ್ಟೋಬರ್ 27ರಂದು ಇಲ್ಲಿನ ಮನಾಮದಲ್ಲಿರುವ ಅಲ್ ಹಮ್ರಾ ಚಿತ್ರ ಮಂದಿರದಲ್ಲಿ ಮಧ್ಯಾಹ್ನ 2.30ಕ್ಕೆ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ಸ್ನೇಹಿತರ ಗಾಢ ಸ್ನೇಹದ ಜೊತೆಗೆ ಕನ್ನಡ ನಾಡು,ನುಡಿಯ ಬಗ್ಗೆ ಇರುವ ಕಾಳಜಿಯ ಎಳೆಯೊಂದನ್ನು ಇಟ್ಟುಕೊಂಡು ಮಾಡಿರುವ ಚಿತ್ರವನ್ನು ಚರಣ್ ಅಕ್ಷಯ್ ರವರು ನಿರ್ಮಿಸಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಭಿಷೇಕ್ ಕಲ್ಲಡ್ಕ,ಸಂಪತ್ ಜತ್ತನ್ನ ,ಪುಷ್ಪರಾಜ್ ಶೆಟ್ಟಿ ,ವಿಶಾಲ್ ಶೆಟ್ಟಿ , ಖುಷಿ ,ಸುಹಾನಿ ,ಸುಜಯ ಲಕ್ಷ್ಮೀಶ್,ಫೆರಿಲ್ ರೊಡ್ರಿಗಸ್ ಮುಖ್ಯ ತಾರಾಗಣದಲ್ಲಿದ್ದು ಉಳಿದಂತೆ ಇದರಲ್ಲಿ ದ್ವೀಪದ ಕಲಾವಿದರೇ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು “ಕ್ಷಮಿಸು ನಿಮ್ಮ ಖಾತೆಯಲ್ಲಿ ಹಣವಿಲ್ಲ ” ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗದಲ್ಲಿ ಭರವಸೆ ಮೂಡಿಸರುವ ಯುವ ನಿರ್ದೇಶಕ ವಿನಾಯಕ ಗೋಡ್ಸೆರೆ ನಿರ್ದೇಶನ ಮಾಡಿದ್ದು ,ಖ್ಯಾತ ಛಾಯಾಗ್ರಾಹಕ ವಿನೀತ್ ಸುವರ್ಣ ರವರು ಬಹರೇನ್ ದ್ವೀಪದ ಸುಂದರ ತಾಣಗಳನ್ನು ತಮ್ಮ ಕೆಮರಾ ಕಣ್ಣುಗಳಿಂದ ಸೆರೆಹಿಡಿದಿದ್ದಾರೆ.
“ಸರ್ಕಸ್ “, “ಗಿರ್ಗಿಟ್ ” ಚಿತ್ರಗಳ ಖ್ಯಾತಿಯ ಸಂಕಲನಕಾರ ರಾಹುಲ್ ಅವರ ಸಂಕಲನ ಈ ಚಿತ್ರಕ್ಕಿದೆ .ನಿರ್ಮಾಣದ ಮೇಲ್ವಿಚಾರಕರಾಗಿ ಪ್ರಕಾಶ್ ಹಾಗು ಕಿರಣ್ ಸುವರ್ಣ ರವರು ಕಾರ್ಯನಿರ್ವಹಿಸಿದ್ದಾರೆ . ಚಿತ್ರದಲ್ಲಿ ಕನ್ನಡ ಹಿರಿಮೆ ಗರಿಮೆಗಳನ್ನು ಸಾರುವ ಒಂದು ಹಾಡು ಅದ್ಭುತವಾಗಿ ಮೂಡಿಬಂದಿದ್ದು ಇದನ್ನು ಖ್ಯಾತ ಹಿನ್ನೆಲೆ ಗಾಯಕ ಕೀರ್ತನ್ ಹೊಳ್ಳರವರು ಹಾಡಿದ್ದಾರೆ ,ರೋಹಿತ್ ಪೂಜಾರಿಯವರ ಸಂಗೀತ ಈ ಚಿತ್ರಕ್ಕಿದೆ.
ಈ ಚಿತ್ರವು ಗುಣಮಟ್ಟದಲ್ಲಿ ಯಾವುದೇ ರಾಜಿಮಾಡಿಕೊಳ್ಳದೆ ವೃತ್ತಿಪರ ತಂತ್ರಜ್ಞರು ದ್ವೀಪದಲ್ಲಿ ಮಾಡಿರುವ ಪ್ರಪ್ರಥಮ ಕನ್ನಡ ಚಲನಚಿತ್ರ ವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ಈ ಚಿತ್ರದ ಬಗ್ಗೆ ಈಗಾಗಲೇ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು ಚಿತ್ರದ ಯಶಸ್ಸಿಗೆ ಕನ್ನಡ ಚಲನಚಿತ್ರರಂಗದ ನಟ ,ನಟಿಯರು ,ಗಾಯಕ ಗಾಯಕಿಯರು ,ಸಂಗೀತ ನಿರ್ದೇಶಕರು ಶುಭ ಹಾರೈಸಿದ್ದಾರೆ . 435 ಆಸನಗಳಿರುವ “ಮನಮಾ”ದಲ್ಲಿರುವ ಬ್ರಹತ್ ಚಿತ್ರ ಮಂದಿರದಲ್ಲಿ ಈ ಚಿತ್ರ ತೆರೆಕಾಣಲಿದ್ದು ಪ್ರೀಮಿಯರ್ ಪ್ರದರ್ಶನದ ಬಹುತೇಕ ಟಿಕೇಟುಗಳು ಇದಾಗಲೇ ಮುಂಗಡವಾಗಿ ಮಾರಾಟವಾಗಿದೆ . ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಚಿತ್ರ ನಿರ್ಮಾಪಕ ಚರಣ್ ಅಕ್ಷಯ್ ರವರನ್ನು ದೂರವಾಣಿ ಸಂಖ್ಯೆ 00973 38006315 ಮೂಲಕ ಸಂಪರ್ಕಿಸಬಹುದು.
ವರದಿ: ಕಮಲಾಕ್ಷ ಅಮೀನ್
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.