![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 22, 2019, 4:07 PM IST
ಮುಂಬಯಿ: ಬಸವೇಶ್ವರ ತಾತ್ವಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಮುಂಬಯಿ ಮೇ 26ರಂದು ಸಂಜೆ 5.30ಕ್ಕೆ 887ನೇ ಬಸವ ಜಯಂತಿಯನ್ನು ಸಂಸ್ಥೆಯ ಬಸವೇಶ್ವರ ಭವನ, ಕಂಪೌಂಡ್ನಲ್ಲಿ ಆಚರಿಸಲಿದೆ. ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಶ್ರೀ| ಮಾ. ಪ್ರಾ. ಸಿರಿ. ಪೂಜ್ಯ ಮಾತೆ ಬಸವೇಶ್ವರಿ ಇವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮವು ಜರಗಲಿದೆ.
ಮಹಾರಾಷ್ಟ್ರ ರಾಜ್ಯದ ಅಬಾಸಾಹೇಬ್ ಕಾಕಡೆ ಕಾಲೇಜ್ ಆಫ್ ಫಾರ್ಮಸಿ, ಬೋಡೆಗಾಂವ್ ಇದರ ಪ್ರಾಂಶುಪಾಲ ಡಾ| ಶಶಿಕಾಂತ ಪಟ್ಟಣ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ 10ನೇ, 12ನೇ, ಪದವೀಧರ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಸುತ್ತೂರು ಶಿವರಾತ್ರೇಶ್ವರ ವಿದ್ಯಾರ್ಥಿ ವೇತನ ನೀಡಲಾಗುವುದು. ಸದಸ್ಯ ಬಾಂಧವರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಸ್ಥೆಯ ಗೌರವ ಅಧ್ಯಕ್ಷರಾದ ಬಿ. ಜಿ. ಬಿರಾದರ, ಗೌರವ ಕಾರ್ಯದರ್ಶಿ ಎನ್. ಬಿ. ಸವಾಲಸಂಗ, ಗೌರವ ಕೋಶಾಧಿಕಾರಿ ಆರ್. ಎಸ್. ಹಿರೇಮಠ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.