![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 15, 2017, 12:21 PM IST
ಶಿವರಾಜಕುಮಾರ್ “ಟಗರು’ ಚಿತ್ರಕ್ಕೆ ಮಾನ್ವಿತಾ ಅಲ್ಲದೇ ಮತ್ತೂಬ್ಬ ನಾಯಕಿ ಇರುತ್ತಾರೆಂದು ಚಿತ್ರತಂಡ ಈ ಹಿಂದೆಯೇ ಹೇಳಿತ್ತು. ಆದರೆ, ಆ ನಾಯಕಿಯ ಯಾರೆಂಬುದು ಚಿತ್ರತಂಡ ಹೇಳಿರಲಿಲ್ಲ. ಈಗ ಅಂತಿಮವಾಗಿ ಆ ನಾಯಕಿಯ ಆಯ್ಕೆ ನಡೆದಿದೆ. ಅದು ಭಾವನಾ. ಯಾವ ಭಾವನಾ ಎಂದರೆ “ಜಾಕಿ’ ಸಿನಿಮಾವನ್ನು ತೋರಿಸಬೇಕು. ಪುನೀತ್ ರಾಜಕುಮಾರ್ ಅವರ “ಜಾಕಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಭಾವನಾ, ಈಗ ಶಿವರಾಜಕುಮಾರ್ ಜೊತೆ ನಟಿಸುತ್ತಿದ್ದಾರೆ.
ಸೂರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಭಾವನಾಗೆ ಮತ್ತೂಮ್ಮೆ ತಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ. ಚಿತ್ರದಲ್ಲಿ ಭಾವನಾ ಪಾತ್ರ ಕೂಡಾ ತುಂಬಾ ಭಿನ್ನವಾಗಿದ್ದು, ಈ ಪಾತ್ರವನ್ನು ಯಾರಿಂದ ಮಾಡಿಸೋದು ಎಂದು ಚಿತ್ರತಂಡ ಆಲೋಚಿಸುತ್ತಿದ್ದಾಗ ಚಿತ್ರತಂಡದ ಕಣ್ಣಮುಂದೆ ಮುಖ ಭಾವನಾ ಅವರದು. ಅದರಂತೆ ಭಾವನಾ ಕೂಡಾ ಶಿವರಾಜಕುಮಾರ್ ಜೊತೆ ನಟಿಸಲು ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಭಾವನಾ “ಟಗರು’ ತಂಡವನ್ನು ಸೇರಿಕೊಳ್ಳಲಿದ್ದಾರೆ. “ಜಾಕಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಭಾವನಾ ಆ ನಂತರ “ವಿಷ್ಣುವರ್ಧನ’, “ರೋಮಿಯೋ’, “ಯಾರೇ ಕೂಗಾಡಲಿ’, “ಬಚ್ಚನ್’, “ಟೋಪಿವಾಲ’ ಚಿತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ ಬಿಡುಗಡೆಗೆ ರೆಡಿಯಾಗಿರುವ “ಚೌಕ’ ಸಿನಿಮಾದಲ್ಲೂ ಭಾವನಾ ನಾಯಕಿಯಾಗಿ ನಟಿಸಿದ್ದು, ಈಗ “ಟಗರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆ.ಪಿ.ಶ್ರೀಕಾಂತ್ ಈ ಸಿನಿಮಾದ ನಿರ್ಮಾಪಕರು. ಶಿವರಾಜಕುಮಾರ್ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದು, ಚಿತ್ರದಲ್ಲಿ ಧನಂಜಯ್ ಹಾಗೂ ವಸಿಷ್ಠ ವಿಲನ್ಗಳಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮತ್ತೂಂದು ಹೈಲೈಟ್ ಎಂದರೆ ದೇವರಾಜ. ಚಿತ್ರದಲ್ಲಿ ದೇವರಾಜ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಮಾರು 21 ವರ್ಷಗಳ ಬಳಿಕ ದೇವರಾಜ್ ಹಾಗೂ ಶಿವರಾಜ ಕುಮಾರ್ ಜೊತೆಯಾಗಿ ನಟಿಸುತ್ತಿದ್ದಾರೆ. “ಸಮರ’ ಚಿತ್ರದ ನಂತರ ಇವರಿಬ್ಬರು ಜೊತೆಯಾಗಿ ನಟಿಸಿರಲಿಲ್ಲ. ಈಗ “ಟಗರು’ನಲ್ಲಿ ಮತ್ತೆ ಜೊತೆಯಾಗಿದ್ದಾರೆ.
ಚಿತ್ರದಲ್ಲಿ ಭಾವನಾ ಪಾತ್ರ ಕೂಡಾ ತುಂಬಾ ಭಿನ್ನವಾಗಿದ್ದು, ಈ ಪಾತ್ರವನ್ನು ಯಾರಿಂದ ಮಾಡಿಸೋದು ಎಂದು ಚಿತ್ರತಂಡ ಆಲೋಚಿಸುತ್ತಿದ್ದಾಗ ಚಿತ್ರತಂಡದ ಕಣ್ಣಮುಂದೆ ಮುಖ ಭಾವನಾ ಅವರದು. ಅದರಂತೆ ಭಾವನಾ ಕೂಡಾ ಶಿವರಾಜಕುಮಾರ್ ಜೊತೆ ನಟಿಸಲು ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಭಾವನಾ “ಟಗರು’ ತಂಡವನ್ನು ಸೇರಿಕೊಳ್ಳಲಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.