ಮೈಸೂರು ಅಸೋಸಿಯೇಶನ್‌ ಮತ್ತುಕರ್ನಾಟಕ ಸಂಘದಿಂದ ಶ್ರದ್ಧಾಂಜಲಿ ಸಭೆ


Team Udayavani, May 9, 2019, 12:33 PM IST

Udayavani Kannada Newspaper

ಮುಂಬಯಿ: ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಕವಿ ನಾಡೋಜ ಡಾ| ಬಿ. ಎ. ಸನದಿ, ರಂಗಕರ್ಮಿ ಶ್ರೀಪತಿ ಬಲ್ಲಾಳ ಹಾಗೂ ಕತೆಗಾರ್ತಿ ತುಳಸಿ ವೇಣುಗೋಪಾಲ್‌ ಅವರು ಇತ್ತೀಚೆಗೆ ವಿಧಿವಶರಾಗಿದ್ದು ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಎ. 28ರಂದು ಮೈಸೂರು ಅಸೋಸಿಯೇಶನ್‌ನಲ್ಲಿ ಜರಗಿತು.

ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ, ಮೈಸೂರು ಅಸೋಸಿ ಯೇಶನ್‌ ಮತ್ತು ಕರ್ನಾಟಕ ಸಂಘ ಮುಂಬಯಿ ವತಿಯಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು. ಆರಂಭದಲ್ಲಿ ವಿದುಷಿ ಶ್ಯಾಮಲಾ ರಾಧೇಶ್‌ ಸನದಿಯವರ ಎರಡು ಕವನಗಳನ್ನು ಹಾಡಿದರು. ಮುಂಬಯಿಯ ಹಿರಿಯ ಸಾಹಿತಿ ಡಾ| ಸುನೀತಾ ಶೆಟ್ಟಿಯವರು ನುಡಿ ನಮನ ಸಲ್ಲಿಸಿ, ನಾವು ಮನುಷ್ಯರನ್ನು ಗುರುತಿಸುವುದು ಹೃದಯದ ಬೆಸುಗೆಯಿಂದ, ಮಾತುಗಳಿಂದಲ್ಲ, ಸೇವೆಯಿಂದ. ಸನದಿಯವರು ಕನ್ನಡ ನಾಡು ನುಡಿಯ ಸೇವೆ ಮಾಡಿದ ಮಹತ್ವದ ಸಾಹಿತಿ. ಕನ್ನಡದ ಜನ ನನಗೆ ಬೇಕಾದವರು ಎಂದು ನಂಬಿದವರು. ಶ್ರೀಪತಿ ಬಲ್ಲಾಳರು ಮುಂಬಯಿಯ ನಾಟಕ ಕ್ಷೇತ್ರವನ್ನು ಬೆಳೆಸಿದರು. ಕರ್ನಾಟಕ ಸಂಘವನ್ನು ಚಟುವಟಿಕೆಯ ಕೇಂದ್ರವಾಗಿ ಬೆಳೆಸಿದರು. ತುಳಸಿಯವರು ಕನ್ನಡದ ಸೃಜನಶೀಲ ಕತೆಗಾರ್ತಿ ಎಂದರು.

ಹಿರಿಯ ರಂಗ ಕರ್ಮಿ, ಸಂಘಟಕ ಕೆ. ಮಂಜುನಾಥಯ್ಯ ಅವರು ಮಾತನಾಡಿ, ಶ್ರೀಪತಿ ಬಲ್ಲಾಳರವರದ್ದು ಬಹುಮುಖ ವ್ಯಕ್ತಿತ್ವ. ಛಲದಿಂದ ನಾಟಕ ಆಡುತ್ತಿದ್ದರು. ತನ್ನ ಇಡಿ ಸಂಸಾರವನ್ನು ನಾಟಕರಂಗದಲ್ಲಿ ತೊಡಗಿಸಿಕೊಂಡವರು. ಸಂಘದ ಪ್ರಮುಖ ಮುಖವಾಗಿದ್ದರು. ಸನದಿಯವರು ಮುಂಬಯಿಯ ಎಲ್ಲ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಎಲ್ಲರಿಗೆ ಪ್ರೀತಿ ಹಂಚಿದರು. ಎನ್‌. ಕೆ. ಇ. ಎಸ್‌. ಶಿಕ್ಷಣ ಸಂಸ್ಥೆಯಲ್ಲಿಯೂ ಸೇವೆ ಮಾಡಿದರು. ಮುಂಬಯಿಯ ಕನ್ನಡಿಗರು ಹೆಮ್ಮೆ ಪಡುವ ಸಾಹಿತಿ ಎಂದು ನುಡಿ ನಮನ ಅರ್ಪಿಸಿದರು.

ರಂಗ ನಿರ್ದೇಶಕ ಡಾ| ಬಿ. ಆರ್‌. ಮಂಜುನಾಥ್‌ ಅವರು ಬಲ್ಲಾಳರ ರಂಗ ಚಟುವಟಿಕೆಗಳನ್ನು ನೆನಪಿಸುತ್ತಾ, ಆ ಕಾಲದಲ್ಲಿ ನಾಟಕದ ಗುಣಮಟ್ಟದಲ್ಲಿ ನಮ್ಮಲ್ಲಿ ಆರೋಗ್ಯಕರ ಸ್ಪರ್ಧೆ ಇರುತ್ತಿತ್ತು. ಬಲ್ಲಾಳರು ಉತ್ತಮ ನಟ, ನಿರ್ದೇಶಕ ಹಾಗೂ ಗಾಯಕರಾಗಿದ್ದರು. 60, 70 ಹಾಗೂ 80 ರ ದಶಕದಲ್ಲಿ ಮುಂಬಯಿಯಲ್ಲಿ ಚಿನ್ನದ ದಶಕವಾಗಿತ್ತು. ಎಲ್ಲರೂ ಕನ್ನಡತನವನ್ನು ಹೆಚ್ಚಿಸಬೇಕೆಂದು ದುಡಿಯುತ್ತಿದ್ದರು. ಅವರ ತಂಡದಲ್ಲಿ ಸಾಂಸಾರಿಕ ಒಳಗೊಳ್ಳುವಿಕೆಯಿತ್ತು ಎಂದು ಸನದಿಯವರನ್ನು ನೆನಪಿಸುತ್ತಾ ಅವರ ಭುವಿ ಬಾನಂಗಳ ನಡುವಿನ ಬಯಲಿಗೆ ಎಂಬ ಕವಿತೆ ಹಾಡಿದರು.

ಕನ್ನಡ ಕಲಾಕ್ಷೇತ್ರದ ಅಧ್ಯಕ್ಷರಾದ ಬಿ. ಬಾಲಚಂದ್ರರಾವ್‌ ಅವರು ಮಾತನಾಡಿ, ಸನದಿಯವರು ಇತ್ತೀಚೆಗೆ ಸಮ್ಮಾನಿಸಿಕೊಂಡ ಸಂದರ್ಭವನ್ನು ನೆನಪಿಸಿಕೊಂಡರು. ಶ್ರೀಪತಿ ಬಲ್ಲಾಳರು ಉತ್ತಮ ನಿರ್ದೇಶಕರು. ಅವರ ನಾಟಕಗಳಲ್ಲಿ ಅಭಿನಯಿಸಿದ್ದು ನನ್ನ ಭಾಗ್ಯ. ಅವರು ಉತ್ತಮ ಮನುಷ್ಯರಾಗಿ ಮಾರ್ಗದರ್ಶಕರಾಗಿದ್ದರು ಎಂದು ನುಡಿದರು.

ಶಿಕ್ಷಣ ತಜ್ಞ ಡಾ| ಎಸ್‌. ಕೆ. ಭವಾನಿ ಮಾತನಾಡಿ, ಬಿ. ಎ. ಸನದಿಯವರು ಮಾನವೀಯತೆಯ ಬಗ್ಗೆ ಬರೆದ ಮಹತ್ವದ ಕವಿ ಎಂದು ಅವರ ಸಾಧನೆಗಳ ಬಗ್ಗೆ ಮೆಲುಕು ಹಾಕಿದರು. ಕವಿ ವಿ. ಎಸ್‌. ಶ್ಯಾನ್‌ಭಾಗ ಅವರು ಮಾತನಾಡಿ, ಸನದಿಯವರು ಮುಂಬಯಿಯ ಮಾಸ್ತಿ ಇದ್ದ ಹಾಗೆ ಅವರ ನಿಜವಾದವ್ಯಕ್ತಿತ್ವ ಇರುವುದು ಹುರಿದುಂಬಿಸುವಿಕೆಯಲ್ಲಿ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಎಂ. ಎಂ. ಕೋರಿಯವರು ಮಾತನಾಡಿ, ಬಸವೇಶ್ವರ ಫಿಲಾಸಿಪಿಕಲ್‌ ಸೊಸೈಟಿ ಮತ್ತು ಕರ್ನಾಟಕ ಸಂಘದಲ್ಲಿರುವಾಗ ಸನದಿಯವರ ಒಡನಾಟವನ್ನು ನೆನಪಿಸಿಕೊಂಡರು. ರಂಗ ಕಲಾವಿದ ಮೋಹನ್‌ ಮಾರ್ನಾಡ್‌ ಅವರು ತನಗೆ ಸನದಿಯವರು ನೀಡಿದ ಪ್ರೋತ್ಸಾಹ ಅನನ್ಯವಾದದ್ದು. ಅವರು ನೀಡಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಲ್ಲದೆ ಬಲ್ಲಾಳರು ನನ್ನಂತಹ ಕಲಾವಿದರನ್ನು ಪ್ರೋತ್ಸಾಹಿಸಿದ್ದರಿಂದ ನಾನು ಈ ಮಟ್ಟಿಗೆ ಬೆಳೆಯಲು ಸಾಧ್ಯವಾಯಿತು ಎಂದು ಸನದಿಯವರ ಕವನ ವಾಚಿಸಿದರು.

ಅರವಿಂದ ಬಲ್ಲಾಳರು ಮಾತನಾಡಿ, ತನ್ನ ಚಿಕ್ಕಪ್ಪನ ಜತೆಗಿನ ಕೌಟುಂಬಿಕ ಹಾಗೂ ರಂಗಭೂಮಿಯ ಒಡನಾಟವನ್ನು ವಿವರಿಸಿದರು. ಕತೆಗಾರ ರಾಜೀವ ನಾಯಕ ಅವರು ಸನದಿಯವರ ತುಳಸಿಕಟ್ಟೆ ಕವನದ ಮೂಲಕ ಸನದಿಯವರ ಸಾಹಿತ್ಯದ ಮಾನವೀಯ ಮುಖವನ್ನು ಪರಿಚಯಿಸಿದರು. ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ| ಭರತ್‌ ಕುಮಾರ್‌ ಪೊಲಿಪು ಕಾರ್ಯಕ್ರಮ ನಿರೂಪಿಸಿದರು. ಮೌನಾಚರಣೆಯ ಮೂಲಕ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಟಾಪ್ ನ್ಯೂಸ್

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.