ಡಾ|ಎ.ಪಿ.ಜೆ.ಅಬ್ದುಲ್‌ ಕಲಾಂ ಎಕ್ಸಲೆನ್ಸ್‌ ಅವಾರ್ಡ್‌ ಪ್ರದಾನ


Team Udayavani, Oct 25, 2017, 11:30 AM IST

6.jpg

ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್‌ ಹೆಗ್ಡೆ ಅವರಿಗೆ ಪ್ರತಿಷ್ಠಿತ ಡಾ| ಎ.ಪಿ.ಜೆ.ಅಬ್ದುಲ್‌ ಕಲಾಂ ಎಕ್ಸಲೆನ್ಸ್‌ ಅವಾರ್ಡ್‌ ಲಭಿಸಿದೆ.

ಹೊಸದಿಲ್ಲಿಯ ಪ್ರತಿಷ್ಠಿತ ಸಿಟಿಜನ್‌ ಇಂಟಿಗ್ರೇ ಷನ್‌ ಪೀಸ್‌ ಇನ್‌ಸ್ಟಿಟ್ಯೂಟ್‌ ಸಂಸ್ಥೆಯು ಉದ್ಯಮ, ಕೈಗಾರಿಕೆ, ಸಮಾಜ ಸೇವೆ, ಶೈಕ್ಷಣಿಕ ಸೇವೆ, ಕಲೆ-ಸಾಂಸ್ಕೃತಿಕ ಸೇವೆಗೈದ ಸಾಧಕರಿಗೆ ಪ್ರತೀ ವರ್ಷ ಮಾಜಿ ರಾಷ್ಟ್ರಪತಿ ದಿ| ಎ. ಪಿ. ಜೆ. ಅಬ್ದುಲ್‌ ಕಲಾಂ ಅವರ ಸಂಸ್ಮರಣಾರ್ಥಕವಾಗಿ ಜೀವಮಾನ ಸಾಧಕ ಪ್ರಶಸ್ತಿ  ನೀಡುತ್ತಿದ್ದು, 2017 ನೇ ಸಾಲಿನ ಪ್ರಶಸ್ತಿ  ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈಯುತ್ತಿರುವ ಉದ್ಯಮಿ,  ರಂಗಕರ್ಮಿ, ಸಮಾಜ ಸೇವಕ, ಸಾಂಸ್ಕೃತಿಕ ರಾಯಭಾರಿ ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಆಯ್ಕೆಯಾಗಿದ್ದರು.

ಭಾರತರತ್ನ ಡಾ| ಎ. ಪಿ. ಜೆ. ಅಬ್ದುಲ್‌ ಕಲಾಂ ಅವರ 86ನೇ ಹುಟ್ಟುಹಬ್ಬದ ಅಂಗವಾಗಿ ಸಿಟಿಜನ್‌ ಇಂಟಿಗ್ರೇಷನ್‌ ಪೀಸ್‌ ಇನ್‌ಸ್ಟಿಟ್ಯೂಟ್‌ ಸಂಸ್ಥೆಯು ಹೊಸದಿಲ್ಲಿಯ ಲೋಧಿ ಮಾರ್ಗದಲ್ಲಿರುವ ಇಂಡಿಯಾ ಇಂಟರ್‌ನ್ಯಾಶನಲ್‌ ಸೆಂಟರ್‌ನ ಸೆಮಿನಾರ್‌ ಹಾಲ್‌ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ  ಲೋಕಸಭೆಯ ಮಾಜಿ ಸಭಾಪತಿ, ಮಾಜಿ ಕೇಂದ್ರ ಸಚಿವ  ಶಿವರಾಜ್‌ ವಿ. ಪಾಟೀಲ್‌ ಅವರು ಪ್ರಶಸ್ತಿಯನ್ನು ಸುರೇಂದ್ರ ಕುಮಾರ್‌ ಹೆಗ್ಡೆ ಅವರಿಗೆ ಪ್ರದಾನಿಸಿ ಶುಭ ಹಾರೈಸಿದರು.

ಮಾಜಿ ರಾಜ್ಯಪಾಲ, ಕೇಂದ್ರ ಸಚಿವ ಡಾ| ಭೀಷ್ಮ ನರೇನ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ನಡೆದ  ಸಮಾರಂಭವನ್ನು ಮಾರಿಷಸ್‌ನ ಹೈಕಮಿಷನರ್‌ ಜೆ. ಗೋವರ್ಧನ್‌ ಅವರು ಉದ್ಘಾಟಿಸಿದರು. ನೇಪಾಲ-ಭಾರತ ರಾಯಭಾರಿ ದೀಪ್‌ ಕುಮಾರ್‌ ಉಪಾಧ್ಯಾಯ ಅವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದು, ಸುರೇಂದ್ರ ಕುಮಾರ್‌ ಹೆಗ್ಡೆ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

ವಿವಿಧ ಕ್ಷೇತ್ರಗಳ ಸಾಧಕ ನಾಟಕ, ಯಕ್ಷಗಾನ ಕಲಾವಿದರಾಗಿ, ಕ್ರೀಡಾ ಕ್ಷೇತ್ರದ ಮಿನುಗು ತಾರೆಯಾಗಿ, ವಾಗ್ಮಿ ಯಾಗಿ, ಶ್ರೇಷ್ಠ ಸಂಘಟಕರಾಗಿ, ಪ್ರಭಾವಿ ಉದ್ಯಮಿ ಯಾಗಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಿಂಚಿರುವ ಸುರೇಂದ್ರ ಕುಮಾರ್‌ ಹೆಗ್ಡೆ ಅವರು,  ವೃತ್ತಿಯಲ್ಲಿ ವಾಣಿಜ್ಯೋದ್ಯಮಿಯಾಗಿ, ಪ್ರವೃತ್ತಿಯಲ್ಲಿ ಕಲಾಕಾರರಾಗಿ, ವ್ಯಾವಹಾರಿಕವಾಗಿ ಉತ್ತಮ ಆಡಳಿತಗಾರರಾಗಿ, ಸಾರ್ವಜನಿಕ ರಂಗದ ಮೇಧಾವಿಯಾಗಿ, ಸಾಮಾಜಿಕವಾಗಿ ಸದಾ ಕಾರ್ಯಶೀಲರಾಗಿ, ಸಾಮೂಹಿಕವಾಗಿ ಯಾವತ್ತೂ ಲವಲವಿಕೆಯವರಾಗಿ, ಸಂಘಟಕರಾಗಿ ಸಂಪೂರ್ಣ ತನ್ಮಯರಾಗಿ ಸಾರ್ವತ್ರಿಕ ಗುಣ ಸಂಪನ್ನರಾಗಿದ್ದಾರೆ.

ರಾಷ್ಟ್ರೀಯ ಮನ್ನಣೆಯ ಕಲಾವಿದ ರಾಷ್ಟ್ರೀಯ ಮಟ್ಟದ ಹಲವಾರು ಹಿಂದಿ, 
ಮರಾಠಿ, ತುಳು ಸಿನೆಮಾಗಳಲ್ಲಿ, ಅಮೆರಿಕದ ಫಿಲಡೆಲ್ಫಿಯಾ  ತಂಡದವರ ಸಿನೆಮಾದಲ್ಲಿ, ಡಿ. ಡಿ. ರಾಷ್ಟ್ರೀಯ ನೆಟ್‌ವರ್ಕ್‌ ಸೀರಿಯಲ್‌ಗ‌ಳಲ್ಲಿ ಕಲಾವಿದರಾಗಿ ಭಾಗವಹಿಸಿದ್ದಾರೆ. ಸಂಗೀತ, ತಬಲಾ, ಕೊಳಲು, ನೃತ್ಯ ಅವರ ಆಸಕ್ತಿಯ ಇತರ ಕಲಾಪ್ರಕಾರಗಳಾಗಿವೆ.  ಯಕ್ಷಗಾನ, ನಾಟಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಹೊಂದಿರುವ  ಅವರು ಔದ್ಯೋಗಿಕ ಕ್ಷೇತ್ರದಲ್ಲೂ ಸಾಧನೆಯ ಸರದಾರರಾಗಿದ್ದಾರೆ. ರಾಕ್‌ಫೋರ್ಡ್‌ ರಬ್ಬರ್‌ ಟೆಕ್ಸ್‌ ಇಂಡಿಯಾ ಲಿಮಿಟೆಡ್‌ನ‌ ಕಾರ್ಯಾಧ್ಯಕ್ಷರಾಗಿರುವ ಇವರು, ಹಲವಾರು ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಗಳ ನಿರ್ದೇಶಕರಾಗಿ ವೃತ್ತಿಪರ ಸಾಧನೆ ಸಾಧಿಸಿದ ಹಿರಿಮೆಯನ್ನು ಹೊಂದಿದ್ದಾರೆ.

ಔದ್ಯೋಗಿಕ ರಂಗದ ವಿಶೇಷ ಸಾಧಕ
ಹೊಸ ದಿ ಲ್ಲಿಯ ಭಾರತೀಯ ಕೈಗಾರಿಕೆ ಹಾಗೂ ವ್ಯಾಪಾರದ ಅಂತಾರಾಷ್ಟ್ರೀಯ ಸಂಸ್ಥೆ 1997ರಲ್ಲಿ ಅವರನ್ನು ವರ್ಷದ ವ್ಯಕ್ತಿಯಾಗಿ ಗುರುತಿಸಿ “ರಾಷ್ಟ್ರೀಯ ಉದ್ಯೋಗ ರತ್ನ’ ಬಿರುದನ್ನು ನೀಡಿ ಸಮ್ಮಾನಿಸಿದೆ. ಹೊಸ ದಿ ಲ್ಲಿಯ ಭಾರತೀಯ ಆರ್ಥಿಕ ಅಭಿವೃದ್ಧಿ ಹಾಗೂ ಸಂಶೋಧನಾ ಸಂಘಟನೆಯು ವಾಣಿಜ್ಯ ಲೋಕಕ್ಕೆ ಹೆಗ್ಡೆ ಅವರು ನೀಡಿದ ಕೊಡುಗೆ ಹಾಗೂ ಅವರ ವೃತ್ತಿಪರ ಸಾಧನೆಗಳನ್ನು ಗುರುತಿಸಿ, 1998ರ ಸಾಲಿನ “ರಾಷ್ಟ್ರೀಯ ಔದ್ಯೋಗಿಕ ಉತ್ಕೃಷ್ಟತಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

ದೇಶಾದ್ಯಂತ ಹಲವೆಡೆ ಸೆಮಿನಾರ್‌, ಸಮ್ಮೇಳನ ಹಾಗೂ ವೃತ್ತಿಪರ ಗೋಷ್ಠಿಗಳಲ್ಲಿ ಪಾಲ್ಗೊಂಡು ಭಾಷಣ, ಲೇಖನ ಹಾಗೂ ಪ್ರಬಂಧ ಮಂಡಿಸಿದ್ದಾರೆ. 

ತಾತ್ವಿಕ, ಧಾರ್ಮಿಕ, ಸಂವಾದಗಳಲ್ಲಿ ಭಾಗವಹಿಸಿದ್ದಾರೆ. ಕಲಾಜಗತ್ತು ಚಿಣ್ಣರ ಬಿಂಬದ ಸ್ಥಾಪಕ ರೂವಾರಿಗಳಲ್ಲಿ ಓರ್ವರಾದ ಅವರು, ಮುಂಬಯಿಯಲ್ಲಿ ಸಾವಿರಾರು ಮಕ್ಕಳಿಗೆ ನಮ್ಮ ತುಳು-ಕನ್ನಡದ ಸಂಸ್ಕೃತಿಯನ್ನು ಕಲಿಸಿ ಅವರನ್ನು ಸಂಸ್ಕಾರವಂತರನ್ನಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ. ಲೇಖಕರೂ ಆಗಿರುವ ಅವರ ಲೇಖನ, ಕಥೆ, ಕವನ, ವಾಣಿಜ್ಯ ವ್ಯವಹಾರಗಳ ಬರೆಹಗಳು 
ಹಲವಾರು ದೈನಿಕಗಳಲ್ಲಿ ಸರಮಾಲೆಯೋಪಾದಿ ಯಲ್ಲಿ ಪ್ರಕಟಗೊಂಡಿವೆ.

ಪ್ರತಿಷ್ಠಿತ ಪ್ರಶಸ್ತಿಗಳ ಸರದಾರ
ಅಲಹಾಬಾದ್‌ನಲ್ಲಿ ನಡೆದ ಅಖೀಲ ಭಾರತ ನಾಟಕ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಸಿಡೆನ್ಸಿ ಪ್ರಶಸ್ತಿ, ಕಲಾಜಗತ್ತು ವಿಜಯಕುಮಾರ್‌ ಶೆಟ್ಟಿ ಅವರು ಬರೆದು ನಿರ್ದೇಶಿದ ಶರಶಯೆÂ ನಾಟಕದಲ್ಲಿ ಅವರ ಭೀಷ್ಮಾಚಾರ್ಯ ಪಾತ್ರದ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ, ಅಂತಾರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ, ಚಂದನ ವಾಹಿ ನಿ ಯ ಚಂದನಶ್ರೀ ಪ್ರಶಸ್ತಿ, ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನ ಮುಂಬಯಿ ಅವರಿಂದ ಅಭಿನಯ ವಿಚಕ್ಷಣ ಪ್ರಶಸ್ತಿ-ಬಿರುದು, ಕಲಾಭಿಮಾನಿ ಬಳಗ ಮೀರಾರೋಡ್‌ ಅವರಿಂದ ಜೀವನಶೈಲಿಯ ಸಾರ್ವಭೌಮ ಪ್ರಶಸ್ತಿ, ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಪುತ್ತಿಗೆ ಮಠ ಉಡುಪಿ ಇದರ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರಿಂದ ಸಮಾಜ ಸೇವಾ ದುರಂಧರ ಪ್ರಶಸ್ತಿ, ದಕ್ಷಿಣ ಭಾರತದ ಸಾಂಸ್ಕೃತಿಕ ಏಕೀಕರಣ ಸಮಿತಿ ಮುಂಬಯಿ ಇದರ ಸಮಾಜ ರತ್ನ ಪ್ರಶಸ್ತಿ, ರಂಗಚಾವಡಿ ಮುಂಬಯಿ ಅವರಿಂದ ಅಭಿನಯ ಕಲಾಶ್ರೀ ಪ್ರಶಸ್ತಿಗಳು ಸೇರಿದಂತೆ ನೂರಾರು ಸಂಘ-ಸಂಸ್ಥೆಗಳ ಸಮ್ಮಾನ-ಗೌರವಗಳು ಲಭಿಸಿವೆ.

ಸಾಮಾಜಿಕ ರಂಗ 
ಸಾಂಸ್ಕೃತಿಕ, ಔದ್ಯೋಗಿಕ, ಧಾರ್ಮಿಕ ಹೀಗೆ ನಾನಾ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಸುರೇಂದ್ರ ಕುಮಾರ್‌ ಹೆಗ್ಡೆ ಅವರು, ವಿಶ್ವ ಮಾನವ ಏಕತಾ ಸಂಸ್ಥೆ ಮಹಾರಾಷ್ಟ್ರ ವಲಯದ ಗೌರವ ಕಾರ್ಯದರ್ಶಿಯಾಗಿ, ಗೋಜು-ರಿಯು-ಕರಾಟೆ ಫೆಡರೇಷನ್‌ ಆಫ್‌ ಇಂಡಿಯಾದ ಉಪಾಧ್ಯಕ್ಷರಾಗಿ, ಕಲಾಜಗತ್ತು ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ, ಸನಾತನ ವೇದಿಕೆಯ ಕಾರ್ಯಾಧ್ಯಕ್ಷರಾಗಿ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಗೌರವಾಧ್ಯಕ್ಷರಾಗಿ, ಕಲಾಜಗತ್ತು ಅಮ್ಮ ಚಾವಡಿಯ ವಿಶ್ವಸ್ತರಾಗಿ ಹೀಗೆ ಹತ್ತು-ಹಲವು ಸಂಘ-ಸಂಸ್ಥೆಗಳ ಮುಖಾಂತರ ನಾಡಿನ ಸಂಸ್ಕೃತಿ, ಕಲೆಯನ್ನು ಉಳಿಸಿ-ಬೆಳೆಸಲು ಕಾರ್ಯೋನ್ಮುಖರಾಗಿದ್ದಾರೆ.

ಟಾಪ್ ನ್ಯೂಸ್

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

bjp-congress

BJP vs Congress ; ಕೇಸ್‌ ಮೇಲೆ ಕೇಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Iceland Gerua:ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

Iceland Gerua: ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.