![5-belagavi](https://www.udayavani.com/wp-content/uploads/2024/12/5-belagavi-415x249.jpg)
ಜಿಎಸ್ಬಿ ಬಾಲಾಜಿ ಮಂದಿರ: ಚೂಡಿಪೂಜೆ
Team Udayavani, Aug 28, 2018, 4:47 PM IST
![2608mum02.jpg](https://www.udayavani.com/wp-content/uploads/2018/08/28/2608mum02-620x275.jpg)
ಮುಂಬಯಿ: ವಸಾಯಿ ರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್ಬಿ ಸಮಾಜದವರ ಬಾಲಾಜಿ ಸೇವಾ ಸಮಿತಿಯ ಜಯ ಅಮ್ಮ ಅನ್ನಪೂರ್ಣ ಸಭಾಗೃಹದಲ್ಲಿ ಮಹಿಳಾ ವಿಭಾಗದವರಿಂದ ಶ್ರಾವಣ ಮಾಸದ ಅಂಗವಾಗಿ ಸಾಮೂಹಿಕ ಚೂಡಿ ಪೂಜೆಯು ಆ. 19ರಂದು ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ನಡೆಯಿತು.
ಮಹಿಳಾ ವಿಭಾಗದ ಕಾರ್ಯದರ್ಶಿ ಸ್ಮಿತಾ ಗಣೇಶ್ ಪೈ ಅವರ ಮಾರ್ಗದರ್ಶನದಲ್ಲಿ ವಿಜಯಾ ತಾರಾನಾಥ ಪೈ, ಮನಿಷಾ ಕಮಲಾಕ್ಷ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರ ವೇರಿದವು. ಡಾ| ಅನಿಕಾ ಅರವಿಂದ ಪೈ, ಭವ್ಯ ಭದ್ರಕುಮಾರ್ ಕಾಮತ್ ಮತ್ತು ಸುಜಾತಾ ಸಂತೋಷ್ ಪೈ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಆನಂತರ ತುಳಸಿ ಮಾತೆಗೆ ಮಹಾಮಂಗಳಾತಿ ನಡೆಯಿತು.
ಕಿರಿಯರು ಹಿರಿಯರಿಗೆ ಪೂಜಿಸಿದ ಚೂಡಿಯನ್ನಿತ್ತು ಆಶೀರ್ವಾದ ಪಡೆದರು. ಮಹಿಳಾ ವಿಭಾಗದವರಿಂದ ಭಜನ ಕಾರ್ಯಕ್ರಮ ನೆರವೇರಿತು. ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ್ ಪೈ, ತಬಲಾದಲ್ಲಿ ಗಣೇಶ್ ಪೈ ಸಹಕರಿಸಿದರು. ಶ್ರೀ ವೆಂಕಟರಮಣ ಮತ್ತು ಇತರ ಪರಿವಾರ ದೇವರಿಗೆ ದೇವದಾಸ್ ಭಟ್ ಅವರಿಂದ ಮಹಾಮಂಗಳಾರತಿ ನಡೆಯಿತು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ಮಹಿಳಾ ವಿಭಾಗದ ವತಿಯಿಂದ ಜರಗಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಪೈ, ಕಾರ್ಯದರ್ಶಿ ಸ್ಮಿತಾ ಪೈ, ಕೋಶಾಧಿಕಾರಿ ಅಶ್ವಿನಿ ಭಕ್ತ, ಇತರ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯೆಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮಹಿಳೆಯರು ಉಪಸ್ಥಿತರಿದ್ದು ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
![5-belagavi](https://www.udayavani.com/wp-content/uploads/2024/12/5-belagavi-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ](https://www.udayavani.com/wp-content/uploads/2024/12/ASU1-150x100.jpg)
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
![Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ](https://www.udayavani.com/wp-content/uploads/2024/12/Bay1-150x85.jpg)
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
![ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ](https://www.udayavani.com/wp-content/uploads/2024/12/Land1-150x83.jpg)
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
![Baharain1](https://www.udayavani.com/wp-content/uploads/2024/12/Baharain1-150x95.jpg)
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
![ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ](https://www.udayavani.com/wp-content/uploads/2024/12/Cali1-150x71.jpg)
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
![5-belagavi](https://www.udayavani.com/wp-content/uploads/2024/12/5-belagavi-150x90.jpg)
KSDL ಲಾಭಾಂಶ ₹108 ಕೋಟಿ ಸರ್ಕಾರಕ್ಕೆ ಹಸ್ತಾಂತರ
![Food](https://www.udayavani.com/wp-content/uploads/2024/12/Food-150x90.jpg)
2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?
![4-panaji](https://www.udayavani.com/wp-content/uploads/2024/12/4-panaji-150x90.jpg)
Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ
![3-winter-foods](https://www.udayavani.com/wp-content/uploads/2024/12/3-winter-foods-150x90.jpg)
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
![Priyana-Bag-Poli](https://www.udayavani.com/wp-content/uploads/2024/12/Priyana-Bag-Poli-150x90.jpg)
Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.