![Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ](https://www.udayavani.com/wp-content/uploads/2025/01/hospital-1-415x252.jpg)
ಕರ್ನಾಟಕ ಸುಗಮ ಸಂಗೀತ ಪರಿಷತ್ ಮಹಾರಾಷ್ಟ್ರ ಘಟಕ ಉದ್ಘಾಟನೆ
Team Udayavani, Apr 24, 2018, 2:23 PM IST
![2204mum07.jpg](https://www.udayavani.com/wp-content/uploads/2018/04/24/2204mum07.jpg)
ಮುಂಬಯಿ: ಕರ್ನಾಟಕ ಸುಗಮ ಸಂಗೀತ ಪರಿಷತ್, ಬೆಂಗಳೂರು ಇದರ ಮಹಾರಾಷ್ಟ್ರ ಘಟಕ ಉದ್ಘಾಟನೆ ಮತ್ತು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಎ. 22 ರಂದು ಅಪರಾಹ್ನ 3 ರಿಂದ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಸಂಗೀತ-ನೃತ್ಯ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಕರ್ನಾಟಕ ವಿಧಾನ ಪರಿಷತ್ತು ಬೆಂಗಳೂರು ಸಭಾಪತಿ ಡಿ. ಎಚ್. ಶಂಕರಮೂರ್ತಿ ಇವರು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ಘಟಕಕ್ಕೆ ದೀಪಪ್ರಜ್ವಲಿಸಿ ಚಾಲನೆ ನೀಡಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್ತು ಇದರ ಸ್ಥಾಪಕ ಅಧ್ಯಕ್ಷ ವೈ. ಕೆ. ಮುದ್ದುಕೃಷ್ಣ, ಅಧ್ಯಕ್ಷ ಡಾ| ಕಿಕ್ಕೇರಿ ಕೃಷ್ಣಮೂರ್ತಿ ಅವರು ಅತಿಥಿಗಳಾಗಿ ಆಗಮಿಸಿದ್ದರು.
ವೈ. ಕೆ. ಮುದ್ದುಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎ. ಕೆ. ಎಂ. ಆಶ್ರಫ್, ಪ್ರಭಾಕರ ಕಲ್ಲೂರಾಯ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಕಾರ್ಯದರ್ಶಿ ಶ್ರೀನಿವಾಸ ಉಡುಪ, ಕೋಶಾಧಿಕಾರಿ ಧಾರವಾಡ ರವಿ, ಉದ್ಯಮಿ, ಕಲಾಪೋಷಕ ಕಾಪು ವಿಶ್ವನಾಥ ಶೆಟ್ಟಿ, ಝೆಡ್. ಎ. ಕಯ್ನಾರು, ಶಾರದಾ ಶಾಲೆಯ ಪ್ರಾಂಶುಪಾಲೆ ವನಿತಾ ಕುಮಾರ್, ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಭಾಸ್ಕರ ಸರಪಾಡಿ ಸಸಿಹಿತ್ಲು, ಕರ್ನಾಟಕ ಸಂಘ ಅಂಧೇರಿ ಗೌರವಾಧ್ಯಕ್ಷ ವಿ. ಧನಂಜಯ ಶೆಟ್ಟಿ, ಅಧ್ಯಕ್ಷ ಹ್ಯಾರಿ ಸಿಕ್ವೇರಾ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಬಾಲ ಕಲಾವಿದೆಯರುಗಳಾದ ಲಾವಣ್ಯಾ ಸಂತೋಷಿ ರಾವ್, ಭಾವಿಕಾ ಸುವರ್ಣ ಇವರಿಂದ ನೃತ್ಯ ವೈವಿಧ್ಯ, ಆಶೀಷ್ ದೇವಾಡಿಗ ಇವರಿಂದ ಕೊಳಲು ವಾದನ, ಹರೀಶ್ ಪೂಜಾರಿ ಇವರಿಂದ ಸ್ಯಾಕೊÕಫೋನ್, ಶೌರ್ಯ ಸನಿಲ್ ಇವರಿಂದ ಕೀಬೋರ್ಡ್ ವಾದನ ನಡೆಯಿತು. ಪವಿತ್ರಾ ಆರ್ಟ್ಸ್ ವಿಜ್ಯುವಲ್ ಇನ್ಸ್ಟಿಟ್ಯೂಟ್ ಡೊಂಬಿವಲಿ ಕಲಾವಿದರಿಂದ ವಿಶೇಷ ನೃತ್ಯ ಪ್ರದರ್ಶನ ಜರಗಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮಹಾರಾಷ್ಟÅ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಮುಂಬಯಿ ಘಟಕದ ಅಧ್ಯಕ್ಷ ದಿನೇಶ್ ಶೇರುಗಾರ್, ಸಂಸ್ಥೆಯ ಸಂಚಾಲಕ ರಾಜ್ಕುಮಾರ್ ಕಾರ್ನಾಡ್, ಕೃಷ್ಣ ಶೆಟ್ಟಿ, ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ, ಕೋಶಾಧಿಕಾರಿ ಮೋಹನ್ದಾಸ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಪ್ರಭಾಕರ ನಾಯಕ್, ಸೌಭಾಗ್ಯ ಗೌಡ, ಪ್ರತಿಮಾ ಎಸ್. ಹೆಗ್ಡೆ, ಪುಷ್ಪಾ ಗೌಡ, ರಾಜೇಂದ್ರ ರಾವ್, ನಂದಾ ಸುವರ್ಣ, ಶಾಲಿತಾ ಎನ್. ಕೋತ್ವಾಲ್ ಇವರು ಉಪಸ್ಥಿತರಿದ್ದರು.
ನಗರ ಮತ್ತು ಉಪ ನಗರಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಂಗೀತ, ಕಲಾ ಸಂಘಟನೆಗಳ ಪದಾಧಿಕಾರಿಗಳು, ಸಂಗೀತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಚಿತ್ರ-ವರದಿ : ಸುಭಾಶ್ ಶಿರಿಯಾ
ಟಾಪ್ ನ್ಯೂಸ್
![Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ](https://www.udayavani.com/wp-content/uploads/2025/01/hospital-1-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು](https://www.udayavani.com/wp-content/uploads/2024/12/Balloon1-150x100.jpg)
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
![ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ](https://www.udayavani.com/wp-content/uploads/2024/12/Hindu1-150x97.jpg)
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
![ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!](https://www.udayavani.com/wp-content/uploads/2024/12/Gokarna-150x60.jpg)
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
![ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ](https://www.udayavani.com/wp-content/uploads/2024/12/Center-150x78.jpg)
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
![ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ](https://www.udayavani.com/wp-content/uploads/2024/12/Cricket-1-1-150x74.jpg)
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.