![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 1, 2017, 5:00 PM IST
ಪುಣೆ: ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಫೆ. 24ರಂದು ಶಿವರಾತ್ರಿ ಉತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ಶ್ರೀ ಈಶ್ವರ ದೇವರಿಗೆ ರುದ್ರಾಭಿಷೇಕ ಮತ್ತು ವೈವಿಧ್ಯಮಯ ಪೂಜೆಗಳು ಮಂದಿರದ ಪ್ರಧಾನ ಅರ್ಚಕ ಹರೀಶ್ ಭಟ್ ಅವರ ನೇತೃತ್ವದಲ್ಲಿ ಜರಗಿತು. ರಾತ್ರಿ 8ರಿಂದ ವಿಶೇಷ ದಿನದ ಸಲುವಾಗಿ ದೇವರಿಗೆ ರಂಗಪೂಜೆ, ಮಹಾಮಂಗಳಾರತಿ ನೆರವೇರಿತು.
ಶಿವರಾತ್ರಿ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಅಪರಾಹ್ನ 3ರಿಂದ ಮೊದಲ್ಗೊಂಡು ಮಧ್ಯ ರಾತ್ರಿ 12ರವರೆಗೆ ನಗರದ ವಿವಿದ ಭಜನಾ ಮಂಡಳಿಯವರಿಂದ ಭಜನ ಕಾರ್ಯಕ್ರಮ ಜರಗಿತು. ಭಜನ ಕಾರ್ಯಕ್ರಮದಲ್ಲಿ ಅಯ್ಯಪ್ಪ ಮಂದಿರದ ಭಜನ ಮಂಡಳಿ, ಬಿಲ್ಲವ ಸಮಾಜ ಸೇವಾ ಸಂಘ ಭಜನ ಮಂಡಳಿ, ದೇವಾಡಿಗ ಸೇವಾ ಸಂಘ ಭಜನ ಮಂಡಳಿ, ಅಯ್ಯಪ್ಪ ಯಕ್ಷಗಾನ ಭಜನ ಮಂಡಳಿ, ಕಾಪಿ ಹೌಸ್ ಭಜನ ಮಂಡಳಿ, ರಾಜ್ಮಹಲ್ ಭಜನ ಮಂಡಳಿಯವರು ಪಾಲ್ಗೊಂಡಿದ್ದರು.
ಅನಂತರ ಅಯ್ಯಪ್ಪ ಭಜನ ಮಂಡಳಿಯವರೊಂದಿಗೆ ವಿವಿಧ
ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಕುಣಿತ ಭಜನೆಯು ಸೇರಿದ ಭಕ್ತಾದಿಗಳನ್ನು ರಂಜಿಸಿತು. ಅಯ್ಯಪ್ಪ ಭಜನ ಮಂಡಳಿಯ ಮುಖ್ಯಸ್ಥ ಭಾಸ್ಕರ್ ಕೊಟ್ಟಾರಿ ಅವರ ಮುಂದಾಳತ್ವದಲ್ಲಿ ರಾತ್ರಿ 12ರಿಂದ ಜರಗಿದ ಈ ಭಜನ ಕಾರ್ಯಕ್ರಮವು ಸೇರಿದ ಎಲ್ಲರ ಮಂಗಳ ಹಾಡಿನ ಮೂಲಕ ಮುಕ್ತಾಯಗೊಂಡಿತು. ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಬೆಳಗ್ಗಿನಿಂದ ರಾತ್ರಿಯವರೆಗೆ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂದಿರದಲ್ಲಿ ಉಪಾಹಾರ ಮತ್ತು ಅನ್ನದಾನ ನಡೆಯಿತು.
ಶ್ರೀ ಅಯ್ಯಪ್ಪ ಮಂದಿರ ಕಾತ್ರಜ್ ಇದರ ವಿಶ್ವಸ್ತ ಮಂಡಳಿಯ ಅಧ್ಯಕ್ಷ ಸುಭಾಷ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಮುಖ್ಯಸ್ಥರು, ಸದಸ್ಯರು, ಮಹಿಳಾ ಸಮಿತಿಯ ಮುಖ್ಯಸ್ಥರು ಮತ್ತು ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದು ಉತ್ಸವದ ಯಶಸ್ಸಿಗೆ ಸಹಕರಿಸಿದರು. ಚಿತ್ರ-ವರದಿ:
ಹರೀಶ್ ಮೂಡಬಿದ್ರೆ ಪುಣೆ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.