ನ್ಯೂ ಜೆರ್ಸಿ:ಕ್ರೈಸ್ತ ದೇವಾಲಯವೀಗ ಕಡಗೋಲು ಕೃಷ್ಣನ ಮಂದಿರ!


Team Udayavani, Jun 9, 2017, 1:48 PM IST

7.jpg

ನ್ಯೂ ಜೆರ್ಸಿ: ಇಲ್ಲಿನ ಚರ್ಚ್‌ ಪರಿವರ್ತಿತ ದೇವಾಲಯದಲ್ಲಿ ಸಾಲಿಗ್ರಾಮ ಶಿಲೆಯ ಶ್ರೀ ಕೃಷ್ಣನ ವಿಗ್ರಹವನ್ನು ಪುತ್ತಿಗೆ ಮಠದ ಸ್ವಾಮಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ  ಸುಂದರವಾಗಿ ನಿರ್ಮಿಸಲಾದ ಗರ್ಭಗುಡಿಯಲ್ಲಿ  ಪ್ರತಿಷ್ಠಾಪನೆ ಮಾಡಲಾಗಿದೆ.  

ಮೇ 28 ರಿಂದ ವಿವಿಧ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಗಳು ಆರಂಭಗೊಂಡಿದ್ದು ಜೂನ್‌ 7 ರಂದು ಬ್ರಹ್ಮಕಲಶೋತ್ಸವ ನಡೆಯಿತು. ಆಕರ್ಷಕ ಕೃಷ್ಣ ವಿಗ್ರಹ  ಅಮೆರಿಕದ  ಅನೇಕ ಭಕ್ತರ ಮನೆಗಳಲ್ಲಿ  ಸ್ವಾಗತಗೊಂಡು, ಭಕ್ತಿಯಿಂದ ಪೂಜಿಸಲ್ಪಟ್ಟು ಈಗ ಸ್ವಾಮೀಜಿ ಯವರು ಪ್ರತಿಷ್ಠಾಪಿಸಿದ್ದಾರೆ. ಜೂನ್‌ 15 ರ ವರೆಗೆ ಸ್ವಾಮೀಜಿಯವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 

ಕರ್ನಾಟಕದ ಕಾರ್ಕಳದಿಂದ ತರಲಾದ ಕಪ್ಪು ಶಿಲೆಯಿಂದ ಪೀಠ ತಯಾರಿಸಲಾಗಿದ್ದು  ಅದರ ಮೇಲೆ ಬರ್ಮಾತೇಗದ ಮರದಲ್ಲಿ ಶ್ರೀ ಕೃಷ್ಣನ ಅವತಾರಲೀಲೆಯನ್ನು ಬಹು ಸುಂದರವಾಗಿ, ಸೂಕ್ಷ್ಮವಾಗಿ ಬೇಲೂರು ಹಳೆಬೀಡಿನ ಶಿಲ್ಪಕಲೆಯ ಮಾದರಿಯಲ್ಲಿ ಕೆತ್ತಲಾಗಿದೆ. ಮುಂದೆ ವಿಶಾಲವಾದ ಹೆಬ್ಬಾಗಿಲು, 40 ಅಡಿ ಎತ್ತರವಿರುವ ಈ ಗರ್ಭಗುಡಿ ಸಂಪೂರ್ಣ ಮರದಿಂದ  ನಿರ್ಮಾಣವಾಗಿರುವುದು ಒಂದು ವಿಶೇಷ. ಭಾರತದಲ್ಲಿ ಹಾಗು ವಿದೇಶದಲ್ಲಿ ಇಂತಹ ಕೆತ್ತನೆಯ ಗರ್ಭಗುಡಿ ಕಾಣಸಿಗುವುದು ಅಪರೂಪವೆನ್ನಬಹುದು.

 ಮಧ್ಯದಲ್ಲಿ ಕಂಡುಬರುವ ತಾಮ್ರದ ಹೊದಿಕೆ ಮತ್ತಷ್ಟು ಆಕರ್ಷಕವಾಗಿದ್ದು ಸ್ವಲ್ಪ ಮಟ್ಟಿಗೆ ಉಡುಪಿಯ ಬ್ರಹ್ಮರಥವನ್ನು ಹೋಲುವಂತೆ ಕಾಣುತ್ತದೆ. ಸ್ವಾಮೀಜಿಯವರ ಸಂಕಲ್ಪದಂತೆಯೇ ಈ ಗರ್ಭಗುಡಿಯ ವಿನ್ಯಾಸವನ್ನು ಮಾಡಲಾಗಿದೆ.
      
ಇನ್ನು  ಈ ಜಾಗದ ಬಗ್ಗೆ ಹೇಳುವುದಾದರೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಧರ್ಮೀಯರೇ ನೆಲೆಸಿರುವ  ಈ ದೇಶದಲ್ಲಿ ಹಿಂದೂ ದೇವಾಲಯಗಳ ಸಂಖ್ಯೆ ಕಡಿಮೆ. ಸೂಕ್ತವಾದ ಜಾಗ ಸಿಗುವುದು ಬಹಳ ಕಷ್ಟ. ಆದರೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಕ್ರೈಸ್ತ ದೇವಾಲಯವನ್ನು ಖರೀದಿಸಿ ಶ್ರೀ ಕೃಷ್ಣನ ದೇವಾಲಯವಾಗಿ ಪರಿವರ್ತನೆ ಮಾಡಿರುವುದು ಒಂದು ಸಾಹಸವೇ ಸರಿ. ಚರ್ಚಿನ ಕಟ್ಟಡಕ್ಕೆ ಯಾವುದೇ ತೊಂದರೆಯಾಗದಂತೆ, ಇರುವ ಸೌಕರ್ಯಗಳನ್ನು ಬಳಸಿ ಬಹಳ ಜಾಣ್ಮೆಯಿಂದ ಶ್ರೀ ಕೃಷ್ಣನ ದೇವಾಲಯವಾಗಿ ಪರಿವರ್ತನೆ ಮಾಡಿರುವುದು ಇಲ್ಲಿನ ಜನಕ್ಕೇ ಆಶ್ಚರ್ಯ ತರುವ ಸಂಗತಿ ಎನ್ನಬಹುದು. ದೇವಾಲಯದ ನೆಲಕ್ಕೆ ಹಾಕಿರುವ ಬಿಳಿ ಬಣ್ಣದ ಹಾಸುಗಲ್ಲುಗಳು, ಗೋಡೆಯ ಬಿಳಿಯ ಬಣ್ಣ ಮತ್ತು ಅಲ್ಲಿ ಅಳವಡಿಸಿಲಾದ ದೊಡ್ಡ, ದೊಡ್ಡ ತೂಗುದೀಪಗಳು ಒಳಾಂಗಣವನ್ನು ಆಕರ್ಷಣೀಯವಾಗಿ ಮಾಡಿವೆ.

 ಕ್ರೈಸ್ತ ದೇವಾಲಯವೊಂದು ಸುಂದರವಾದ ಶ್ರೀ ಕೃಷ್ಣನ ದೇವಾಲಯವಾಗಿ ಪರಿವರ್ತನೆಯಾಗಿರುವ ವಿಸ್ಮಯ ಕಾರ್ಯ ನಡೆದಿರುವುದು ವಿಶ್ವದಲ್ಲೇ ಮೊದಲು ಎನ್ನಬಹುದು. 

ದೇವಾಲಯದ ಪ್ರದೇಶ 4.5 ಎಕರೆಯಾಗಿದ್ದು, 600 ಕಾರು ನಿಲ್ಲಲು ಅವಕಾಶವಿದ್ದು , ದೇವಾಲಯದ ಒಳಗೆ ಏಕಕಾಲದಲ್ಲಿ 1000 ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. 

ಇಲ್ಲಿನ ಹಿಂದೂಗಳಿಗೆ ಇದು ಬಹಳ ಸಂತೋಷದ ಸಂಗತಿಯಾಗಿದ್ದು, 30- 40 ವರ್ಷಗಳಿಂದ ಇಲ್ಲೇ ನೆಲೆಸಿರುವ ಭಾರತೀಯರಲ್ಲಿ ಹೆಚ್ಚಿನ ಸಂತಸವನ್ನು ಮೂಡಿಸಿದೆ. ಉಡುಪಿಯ ಕೃಷ್ಣ ತಮ್ಮ ಊರಿಗೆ ಬಂದಿದ್ದಾನೆ ಎಂಬ ಉತ್ಸಾಹದಲ್ಲಿ ದೇವಸ್ಥಾನದ ಉದ್ಘಾಟನೆಗೆ ಓಡಾಡಿದರು. 

 ಶ್ರೀ ಕೃಷ್ಣನಿಗೆ 2 ಕೆ.ಜಿ ಗೂ ಹೆಚ್ಚು ತೂಕದ ಬೆಳ್ಳಿಯ ಕವಚವನ್ನು ರೂಪ ಐಯರ್ ಸಮರ್ಪಿಸಿದ್ದಾರೆ. 35 ವರ್ಷಗಳಿಂದ ಇಲ್ಲಿ ನೆಲೆಸಿರುವ ಜನಾರ್ಧನ್ ರಾವ್ ಅವರು ಶ್ರೀ ಕೃಷ್ಣನಿಗೆ ಚಿನ್ನದ ಕಣ್ಣು, ನಾಮದ ಆಭರಣಗಳನ್ನು ಅರ್ಪಿಸಿದ್ದಾರಲ್ಲದೇ ತಮ್ಮ ಭಕ್ತಿಯ ಸಂತಸಕ್ಕೆ ಪಾರವೇ ಇಲ್ಲ ಎನ್ನುತ್ತಾರೆ. 

ಅನೇಕ ಸ್ವಯಂ ಸೇವಕರು ದೇವಸ್ಥಾನವನ್ನು ಸುಂದರವಾಗಿ ಸಿಂಗರಿಸುವಲ್ಲಿ ತೊಡಗಿಕೊಂಡ ದೃಶ್ಯ  ಇಲ್ಲಿ ಎಲ್ಲ ಕಡೆ ಕಂಡುಬಂದಿತು.  ದೇವಸ್ಥಾನದ ಉದ್ಘಾಟನೆಗೆ 1000 ಕ್ಕೂ ಹೆಚ್ಚು ಭಕ್ತಾದಿಗಳು  ಸಾಕ್ಷಿಯಾದರು. 

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.