ಧರ್ಮಾಚರಣೆಯಿಂದ ಸ್ವರಕ್ಷಣೆ ಸಾಧ್ಯ:ಸ್ವರ್ಣವಲ್ಲಿ ಶ್ರೀ
Team Udayavani, Mar 7, 2017, 4:36 PM IST
ಮುಂಬಯಿ: ಆಧುನಿಕ ಯುಗದಲ್ಲಿ ದಿನಬಳಕೆಯಲ್ಲಿರುವ ವಸ್ತುಗಳನ್ನು ರೆಫ್ರಿಜರೇಟರ್ನಲ್ಲಿಟ್ಟು ಕೆಡದಂತೆ ಹೇಗೆ ನಾವು ಕಾಪಾಡುತ್ತೇವೆಯೋ ಅದೇ ರೀತಿ ಧರ್ಮಾಚರಣೆಯಿಂದ ನಮ್ಮನ್ನು ನಾವೂ ರಕ್ಷಿಸಿಕೊಳ್ಳಬಹುದು. ರೆಫ್ರಿಜರೇಟರ್ಗೆ ಹೇಗೆ ವಿದ್ಯುತ್ ಶಕ್ತಿ ಅವಶ್ಯವೋ ಅದೇ ರೀತಿ ನಿತ್ಯಾನುಷ್ಠಾನವೂ ನಮ್ಮ ದೇಹಕ್ಕೆ ನಾವು ಪೂರೈಸುವ ವಿದ್ಯುತ್ ಆಗಿದೆ. ಆದರೆ ಕೆಲವೊಮ್ಮೆ ವಿದ್ಯುತ್ ಪೂರೈಕೆ ಕಡಿತವಾದಾಗ ಜನರೇಟರ್ಗಳನ್ನು ನಾವೂ ಬಳಸುತ್ತೇವೆ. ಅದೇ ರೀತಿ ಧರ್ಮಾಚರಣೆಯಲ್ಲಿ ಏರುಪೇರಾಗದಂತೆ ಕಾಪಾಡಲು ಯತಿಗಳು, ಸನ್ಯಾಸಿಗಳು ಶಿಷ್ಯರ ಜೀವನದಲ್ಲಿ ವಿದ್ಯುತ್ ಪೂರೈಸಲು ಸಂಚಾರವನ್ನು ಕೈಗೊಳ್ಳುತ್ತಾರೆ. ಇದೇ ಇಂದಿನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸೋಂದಾಶ್ರೀ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾಶ್ರೀ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀಮದ್ ಜಗದ್ಗುರು ಶಂಕರಾ
ಚಾರ್ಯ ಗಂಗಾಧರೇಂದ್ರ ಸ್ವಾಮೀಜಿ ಅವರು ಮಾ. 4ರಂದು ಸಂಜೆ ಮುಂಬಯಿಗೆ ಆಗಮಿಸಿ ಮಾಟುಂಗಾ ಪೂರ್ವದ ಶ್ರೀ ಶಂಕರ ಮಠದಲ್ಲಿ ನೆರೆದ ಸದ್ಭಕ್ತರು ಹಾಗೂ ಶಿಷ್ಯರನ್ನು ಅನುಗ್ರಹಿಸಿದರು.
ಶ್ರೀಗಳು ನಗರಪ್ರವೇಶ ಮಾಡುತ್ತಿದ್ದಂತೆಯೇ ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿ ಹಾಗೂ ಶ್ರೀ ಶಂಕರ ಮಠದ ಪದಾಧಿಕಾರಿ ಮತ್ತು ಸದಸ್ಯರು, ಶಿಷ್ಯವೃಂದ, ಮಹಿಳೆಯರು, ಮುಂಬಯಿವಾಸಿ ಭಕ್ತರು ಶಾಸ್ತ್ರೋಕ್ತವಾಗಿ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು. ವಿ. ಎನ್. ಹೆಗಡೆ ಮತ್ತು ಗಂಗಾ ಹೆಗಡೆ ದಂಪತಿ ಪಾದಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿ. ಎನ್. ಹೆಗಡೆ, ತನುಜಾ ಹೆಗಡೆ, ಡಾ| ಎನ್. ಜಿ. ಭಟ್ ಚಾರ್ಕೋಪ್, ಜಿ. ವಿ. ಹೆಗಡೆ, ಶಿವಾನಂದ ಭಟ್, ಕೆ. ಸಿ. ಹೆಗಡೆ, ಅನಂತ ಭಟ್, ರಾಜರಾಮ ಹೆಗಡೆ, ಚಂದ್ರಶೇಖರ ಭಟ್, ಆರ್. ಜಿ. ಹೆಗಡೆ, ಎಸ್. ಎಸ್. ಜೋಶಿ, ವಸಂತ ಭಟ್, ಸುರೇಶ್ ಹೆಗಡೆ, ಡಾ| ಎಸ್. ಆರ್. ನಾಯ್ಕ, ಮಧುಕರ ನಾಯ್ಕ, ಅಶೋಕ ನಾಯ್ಕ ಸೇರಿದಂತೆ ಅನೇಕ ರಾಮಕ್ಷತ್ರಿಯ ಹಾಗೂ ಹವ್ಯಕ ಬಂಧು ಭಕ್ತರು ಉಪಸ್ಥಿತರಿದ್ದರು.
ಮಾ. 11ರವರೆಗೆ ನಗರದಲ್ಲಿ ಮೊಕ್ಕಾಂ ಹೂಡಲಿರುವ ಶ್ರೀಗಳು ನಗರದ ವಿವಿಧೆಡೆಗಳಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ. ಪ್ರತಿದಿನ ಮುಂಜಾನೆ ಶ್ರೀಗಳಿಂದ ಕುಂಕುಮಾ
ರ್ಚನೆ ಪಾದಪೂಜೆ ಹಾಗೂ ಮಾ. 8ರಂದು ಏಕಾದಶಿ ಹೊರತುಪಡಿಸಿ ಮಧ್ಯಾಹ್ನ ಭಿûಾ
ಸೇವೆ ನಡೆಯಲಿದೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಾನಗರದ ಭಕ್ತಾದಿ ಗಳು ಪಾಲ್ಗೊಂಡು ಸಹಕರಿಸುಂತೆ ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿಯ ಪದಾಧಿಕಾರಿಗಳು ಇದೇ ಸಂದರ್ಭ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ
Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು
Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ
Desi Swara: ಮಸ್ಕತ್- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ
Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.