13th ODI World Cup Cricket ; ಉದ್ಘಾಟನ ಪಂದ್ಯದಲ್ಲೇ ಕಣಕ್ಕಿಳಿದ ಭಾರತ

ಮೊದಲು ನಡೆದದ್ದೇ ವನಿತಾ ವಿಶ್ವಕಪ್‌!

Team Udayavani, Sep 23, 2023, 6:10 AM IST

world cup 2023

ಭಾರತದ ಆತಿಥ್ಯದಲ್ಲಿ ನಡೆಯುವ 13ನೇ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆರಂಭಕ್ಕೆ ಉಳಿದಿರುವುದು 13 ದಿನ ಮಾತ್ರ. ತಡವಾಗಿಯಾದರೂ ಕ್ರಿಕೆಟ್‌ ಜ್ವರ ಏರಲಾರಂಭಿಸಿದೆ. ಎಲ್ಲರೂ ನಾನಾ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್‌ ಸಾಗಿಬಂದ ಹಾದಿಯತ್ತ ಹಿನ್ನೋಟ ಹರಿಸುವ ಲೇಖನ ಮಾಲಿಕೆ ಇಲ್ಲಿ ಮೂಡಿಬರಲಿದೆ.

1971ರಲ್ಲಿ ಅಚಾನಕ್‌ ಆಗಿ ಜನ್ಮತಾಳಿದ ಏಕದಿನ ಕ್ರಿಕೆಟ್‌ ಪಂದ್ಯ, ಕೇವಲ 4 ವರ್ಷ ಗಳಲ್ಲೇ ಮೊದಲ ವಿಶ್ವಕಪ್‌ ಕಂಡದ್ದು ಕ್ರಿಕೆಟಿನ ಅಚ್ಚರಿಗಳಲ್ಲೊಂದು. ಇಂಗ್ಲೆಂಡ್‌ 1975ರ ಜೂನ್‌ನಲ್ಲಿ ಮೊದಲ ವಿಶ್ವಕಪ್‌ ಆಯೋಜಿಸುವ ಮುನ್ನ ನಡೆದ ಏಕದಿನ ಪಂದ್ಯಗಳ ಸಂಖ್ಯೆ ಕೇವಲ 18.

ಜೂ. 7ರಂದು ಐತಿಹಾಸಿಕ ಲಾರ್ಡ್ಸ್‌ನಲ್ಲಿ ನಡೆದ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಜತೆ ಕಣಕ್ಕಿಳಿಯುವ ಅದೃಷ್ಟ ಎಸ್‌. ವೆಂಕಟರಾಘವನ್‌ ನೇತೃತ್ವದ ಭಾರತದ್ದಾಗಿತ್ತು. ಕೇವಲ 2 ಪಂದ್ಯಗಳ ಅನುಭವಿಯಾಗಿದ್ದ ಭಾರತ 202 ರನ್ನುಗಳ ದಾಖಲೆ ಅಂತರದ ಸೋಲನ್ನು ಹೊತ್ತುಕೊಂಡಿತು. ಆರಂಭಕಾರ ಡೆನ್ನಿಸ್‌ ಅಮಿಸ್‌ ಅವರ 137 ರನ್‌ ಪರಾಕ್ರಮದಿಂದ ಇಂಗ್ಲೆಂಡ್‌ 4 ವಿಕೆಟಿಗೆ 334 ರನ್‌ ಪೇರಿಸಿ ಸವಾಲೊಡ್ಡಿದರೆ, ಟೆಸ್ಟ್‌ ಗುಂಗಿನಿಂದ ಹೊರಬಾರದ ಭಾರತ 3 ವಿಕೆಟಿಗೆ 132 ರನ್‌ ಮಾಡಿ ಶರಣಾಯಿತು. ಆರಂಭಕಾರ ಸುನೀಲ್‌ ಗಾವಸ್ಕರ್‌ ಅವರಂತೂ 60 ಓವರ್‌ಗಳ ಈ ಮುಖಾಮುಖೀಯಲ್ಲಿ ಕೊನೆಯ ತನಕ ಬ್ಯಾಟಿಂಗ್‌ ನಡೆಸಿ 36 ರನ್‌ ಮಾಡಿ ಅಜೇಯರಾಗಿ ಉಳಿದಿದ್ದರು. ಅವರು 174 ಎಸೆತಗಳನ್ನು ಎದುರಿಸಿ ನಿಂತಿದ್ದರು. ಹೊಡೆದದ್ದು ಒಂದೇ ಬೌಂಡರಿ.

ಈ ಅವಮಾನದಿಂದ ಪಾರಾಗಬಹುದಿತ್ತು ಎಂದು ಗಾವಸ್ಕರ್‌ ಅನಂತರದ ಸಂದರ್ಶನ ವೊಂದರಲ್ಲಿ ಹೇಳಿದ್ದರು. ಏಕೆಂದರೆ, ಜೆಫ್ ಅರ್ನಾಲ್ಡ್‌ ಅವರ 2ನೇ ಎಸೆತದಲ್ಲೇ ಗಾವಸ್ಕರ್‌ ಔಟ್‌ ಆಗಿದ್ದರು! ಬ್ಯಾಟ್‌ಗೆ ಸವರಿದ ಚೆಂಡು ಕೀಪರ್‌ ಅಲನ್‌ ನಾಟ್‌ ಕೈಸೇರಿತ್ತು. ಆದರೆ ಇದಕ್ಕೆ ಯಾರೂ ಅಪೀಲು ಮಾಡಲಿಲ್ಲ. ಔಟ್‌ ಎಂದು ತಿಳಿದಿತ್ತಾದರೂ ಗಾವಸ್ಕರ್‌ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಲಿಲ್ಲ. ಆಗ ಕ್ರೀಸ್‌ ತೊರೆದದ್ದೇ ಆದರೆ ತಾನು ಈ ಅವಮಾನಕ್ಕೆ ಸಿಲುಕುತ್ತಿರಲಿಲ್ಲ ಎಂದಿದ್ದರು.

ಭಾರತದ ಮೊದಲ ಜಯ
ಇದು ಕೇವಲ 8 ತಂಡಗಳ ನಡುವಿನ ಪಂದ್ಯಾವಳಿಯಾಗಿತ್ತು. ಎರಡೇ ವಾರಗಳಲ್ಲಿ ಮುಗಿದಿತ್ತು. ಭಾರತ ಗೆದ್ದದ್ದು ಈಸ್ಟ್‌ ಆಫ್ರಿಕಾ ಎಂಬ ಅಪರಿಚಿತ ತಂಡದ ವಿರುದ್ಧ ಮಾತ್ರ. ಅಂತರ 10 ವಿಕೆಟ್‌. ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ಒಲಿದ ಈ ಗೆಲುವು ಭಾರತದ ಪ್ರಪ್ರಥಮ ಏಕದಿನ ಗೆಲುವು ಕೂಡ ಆಗಿತ್ತು.

ಇಂಗ್ಲೆಂಡ್‌-ಆಸ್ಟ್ರೇಲಿಯ ಮತ್ತು ವೆಸ್ಟ್‌ ಇಂಡೀಸ್‌-ನ್ಯೂಜಿಲ್ಯಾಂಡ್‌ ಸೆಮಿಫೈನಲ್‌ನಲ್ಲಿ ಎದುರಾದವು. ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು 17 ರನ್ನುಗಳಿಂದ ಮಣಿಸಿದ ಕ್ಲೈವ್‌ ಲಾಯ್ಡ ನೇತೃತ್ವದ ವೆಸ್ಟ್‌ ಇಂಡೀಸ್‌ ಮೊದಲ ವಿಶ್ವಕಪ್‌ ಎತ್ತಿ ಸಂಭ್ರಮಿಸಿತು.
ಸ್ಕೋರ್‌: ವೆಸ್ಟ್‌ ಇಂಡೀಸ್‌ 8ಕ್ಕೆ 291. ಆಸ್ಟ್ರೇಲಿಯ-58.4 ಓವರ್‌ಗಳಲ್ಲಿ 274.

ವಿಶ್ವಕಪ್‌ವೈಭವ: ಮೊದಲು ನಡೆದದ್ದೇ ವನಿತಾ ವಿಶ್ವಕಪ್‌!
ಪುರುಷರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೂ ಮೊದಲೇ ವನಿತೆಯರ ಏಕದಿನ ವಿಶ್ವಕಪ್‌ ನಡೆದಿತ್ತು ಎಂಬುದು ಕ್ರಿಕೆಟಿನ ಸ್ವಾರಸ್ಯಗಳಲ್ಲೊಂದು. ಇದು ನಡೆದದ್ದು 1973ರಲ್ಲಿ. ಆತಿಥೇಯ ರಾಷ್ಟ್ರ ಇಂಗ್ಲೆಂಡ್‌. ಜೂ. 20ರಿಂದ 28ರ ತನಕ ಒಂದು ವಾರ ಕಾಲ ನಡೆದ ಈ ಪಂದ್ಯಾವಳಿಯನ್ನು ಆಯೋಜಿಸಿದ್ದು ಸರ್‌ ಜಾಕ್‌ ಹೇವಾರ್ಡ್‌ ಎಂಬ ಉದ್ಯಮಿ ಹಾಗೂ ಕ್ರಿಕೆಟ್‌ ಅಭಿಮಾನಿ. ಇದಕ್ಕಾಗಿ ಅವರು 40 ಸಾವಿರ ಪೌಂಡ್‌ ನೀಡಿದ್ದರು.

ಟಾಪ್ ನ್ಯೂಸ್

Lap

Governmnet Encourage: ಎಸೆಸೆಲ್ಸಿ ಸಾಧಕರಿಗೆ ಲ್ಯಾಪ್‌ಟಾಪ್‌

Accident-Logo

Sulya: ನಗರದ ಜ್ಯೋತಿ ವೃತ್ತದ ಬಳಿ ರಿಕ್ಷಾ ಢಿಕ್ಕಿ: ಬಾಲಕಿಗೆ ಗಾಯ

Accident-Logo

Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ

Police

Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು

police

Kumbale: ವಂಚನೆ: ಸಚಿತಾ ಮನೆಗೆ ಪೊಲೀಸ್‌ ದಾಳಿ

LiQer

Dakshina Kannada: ಅಬಕಾರಿ ಕಾರ್ಯಾಚರಣೆ; ಮದ್ಯ, ಗಾಂಜಾ ವಶ

High-Court

Mangaladevi Temple: ಹೈಕೋರ್ಟ್‌ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PKL 11: Hattrick defeat for Bengaluru Bulls

PKL 11: ಬುಲ್ಸ್‌ ಗೆ ಹ್ಯಾಟ್ರಿಕ್‌ ಸೋಲು

Prithvi Shaw out of the Ranji team too; Is Mumbai player’s cricket life over

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?

Shakib Fans: ಶಕೀಬ್‌ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ

Shakib Fans: ಶಕೀಬ್‌ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ

Glasgow: ಕಾಮನ್ವೆಲ್ತ್‌ ಗೇಮ್ಸ್‌: ಹಾಕಿಗೆ ಕತ್ತರಿ?

Glasgow: ಕಾಮನ್ವೆಲ್ತ್‌ ಗೇಮ್ಸ್‌: ಹಾಕಿಗೆ ಕತ್ತರಿ?

Cricket: ದೇಶಿ ಕ್ರಿಕೆಟ್‌ನಲ್ಲಿ ಆಡಲು ಮೊಹಮ್ಮದ್‌ ಶಮಿ ನಿರ್ಧಾರ

Cricket: ದೇಶಿ ಕ್ರಿಕೆಟ್‌ನಲ್ಲಿ ಆಡಲು ಮೊಹಮ್ಮದ್‌ ಶಮಿ ನಿರ್ಧಾರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Lap

Governmnet Encourage: ಎಸೆಸೆಲ್ಸಿ ಸಾಧಕರಿಗೆ ಲ್ಯಾಪ್‌ಟಾಪ್‌

Accident-Logo

Sulya: ನಗರದ ಜ್ಯೋತಿ ವೃತ್ತದ ಬಳಿ ರಿಕ್ಷಾ ಢಿಕ್ಕಿ: ಬಾಲಕಿಗೆ ಗಾಯ

Accident-Logo

Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ

Police

Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು

police

Kumbale: ವಂಚನೆ: ಸಚಿತಾ ಮನೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.