World champion ವಿರುದ್ಧ ಜಯ : ಪ್ರಜ್ಞಾನಂದ ಭಾರತದ ನಂ.1 ಚೆಸ್ಪಟು
ವಿಶ್ವನಾಥನ್ ಆನಂದ್ ಅವರನ್ನು ಪಟ್ಟದಿಂದ ಕೆಳಗಿಳಿಸಿದ 18 ರ ಸ್ಟಾರ್
Team Udayavani, Jan 17, 2024, 10:02 PM IST
ವಿಕ್ ಆ್ಯನ್ ಝೀ (ನೆದರ್ಲೆಂಡ್ಸ್): ಟೀನೇಜ್ಡ್ ಸೂಪರ್ಸ್ಟಾರ್ ಆರ್. ಪ್ರಜ್ಞಾನಂದ ಭಾರತದ ನಂಬರ್ ವನ್ ಚೆಸ್ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಲೆಜೆಂಡ್ರಿ ಚೆಸ್ಪಟು ವಿಶ್ವನಾಥನ್ ಆನಂದ್ ಅವರನ್ನು ಈ ಪಟ್ಟದಿಂದ ಕೆಳಗಿಳಿಸಿದ್ದಾರೆ.
ನೆದರ್ಲೆಂಡ್ಸ್ನಲ್ಲಿ ನಡೆಯುತ್ತಿರುವ “ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್’ನಲ್ಲಿ ವಿಶ್ವ ಚಾಂಪಿಯನ್ ಆಟಗಾರ, ಚೀನದ ಡಿಂಗ್ ಲಿರೆನ್ ಅವರಿಗೆ 4ನೇ ಸುತ್ತಿನಲ್ಲಿ ಆಘಾತವಿಕ್ಕುವ ಮೂಲಕ ಆರ್. ಪ್ರಜ್ಞಾನಂದ ಅಗ್ರಸ್ಥಾನದ ಗೌರವ ಸಂಪಾದಿಸಿದರು. ಇವರ ಒಟ್ಟು ಫಿಡೆ ರೇಟಿಂಗ್ ಅಂಕವೀಗ 2748.3ಕ್ಕೆ ಏರಿದೆ. 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಹೊಂದಿರುವ ಅಂಕ 2748.
62 ನಡೆಗಳಲ್ಲಿ ಜಯ
ಡಿಂಗ್ ಲಿರೆನ್ ವಿರುದ್ಧ ಕಪ್ಪು ಕಾಯಿಗಳೊಂದಿಗೆ ಆಡಲಿಳಿದ ಆರ್. ಪ್ರಜ್ಞಾನಂದ 62 ನಡೆಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಹಾಲಿ ವಿಶ್ವ ಚಾಂಪಿಯನ್ ಆಟಗಾರ ನನ್ನು ಮಣಿಸಿದ ಭಾರತದ 2ನೇ ಚೆಸ್ ಆಟಗಾರನೆನಿಸಿದರು. ವಿಶ್ವನಾಥನ್ ಆನಂದ್ ಮೊದಲಿಗ. ಪ್ರಜ್ಞಾನಂದ 2023ರ ಟಾಟಾ ಸ್ಟೀಲ್ ಟೂರ್ನಿಯಲ್ಲೂ ಲಿರೆನ್ ವಿರುದ್ಧ ಜಯ ಸಾಧಿಸಿದ್ದರು.
13 ಸುತ್ತುಗಳ ಪಂದ್ಯಾವಳಿ
“ಇದೊಂದು ಸಂತೋಷದ ಸಂಗತಿ. ಆದರೆ ನನ್ನ ವೈಯಕ್ತಿಕ ಗುರಿ ಏನಿದ್ದರೂ ಅತ್ಯುತ್ತಮ ಪ್ರದರ್ಶನ ನೀಡುವುದು. ಇದು ಅತ್ಯಂತ ಕಠಿನ ಪಂದ್ಯಾವಳಿ. ಉಳಿದೆಲ್ಲ ಟೂರ್ನಿಗಳು 9 ಸುತ್ತುಗಳನ್ನು ಹೊಂದಿದ್ದರೆ ಇಲ್ಲಿ 13 ಸುತ್ತುಗಳಿವೆ. ಅಂದರೆ, ಒಂದು ಹೆಚ್ಚುವರಿ ಕೂಟವನ್ನು ಆಡಿದ ಅನುಭವವಾಗು ತ್ತದೆ’ ಎಂಬುದಾಗಿ ಪ್ರಜ್ಞಾನಂದ ಹೇಳಿದರು. ಮಾಸ್ಟರ್ ರೌಂಡ್ನಲ್ಲಿ ಪ್ರಜ್ಞಾನಂದ 2.5 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಗುರುವಾರದ 5ನೇ ಸುತ್ತಿನ ಪಂದ್ಯದಲ್ಲಿ ಆರ್. ಪ್ರಜ್ಞಾನಂದ ಅಗ್ರಸ್ಥಾನಿಯಾಗಿರುವ, ಆತಿಥೇಯ ದೇಶದ ಅನಿಶ್ ಗಿರಿ ವಿರುದ್ಧ ಆಡಲಿದ್ದಾರೆ. ಭಾರತದ ಡಿ. ಗುಕೇಶ್ ಅವರನ್ನು ಮಣಿಸಿರುವ ಅನಿಶ್ ಗಿರಿ 3.5 ಅಂಕ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.