ಐಪಿಎಲ್‌ ರದ್ದಾದರೆ ಕನಿಷ್ಠ 3,500 ಕೋಟಿ ರೂ. ನಷ್ಟ

ಬಿಸಿಸಿಐಗೆ 2,000 ಕೋ.ರೂ., ಫ್ರಾಂಚೈಸಿಗಳಿಗೆ ತಲಾ 240 ಕೋ.ರೂ. ಅಂದಾಜು ನಷ್ಟ

Team Udayavani, Mar 14, 2020, 11:48 PM IST

ಐಪಿಎಲ್‌ ರದ್ದಾದರೆ ಕನಿಷ್ಠ 3,500 ಕೋಟಿ ರೂ. ನಷ್ಟ

ಹೊಸದಿಲ್ಲಿ: ಪ್ರೇಕ್ಷಕರ ಗೈರಿನಲ್ಲಿ ಐಪಿಎಲ್‌ ನಡೆಸುವುದು ಬಿಸಿಸಿಐಗೆ ಈಗಿರುವ ಅತ್ಯುತ್ತಮ ಅವಕಾಶ. ಹೀಗಾದರೆ ಟಿಕೆಟ್‌ ಹಣದಲ್ಲಿ ಬರುವ ಹತ್ತಿರ ಹತ್ತಿರ 224ರಿಂದ 300 ಕೋಟಿ ರೂ. ಕೈಬಿಟ್ಟು ಹೋಗಬಹುದು. ವರ್ಚಸ್ಸು ಒಂದಷ್ಟು ತಗ್ಗಬಹುದು. ಆದರೆ ಕೂಟವನ್ನು ಪೂರ್ಣ ರದ್ದು ಮಾಡಿದರೆ ಆಗುವ ನಷ್ಟವೆಷ್ಟು ಗೊತ್ತೇ? ಬಿಸಿಸಿಐ, 8 ಫ್ರಾಂಚೈಸಿಗಳು, ನೇರಪ್ರಸಾರ ಮಾಡುವ ಸ್ಟಾರ್‌ ನ್ಪೋರ್ಟ್ಸ್ಗೆ ಒಟ್ಟು ಸೇರಿ ಕನಿಷ್ಠ 3,000ದಿಂದ 3,500 ಕೋಟಿ ರೂ. ನಷ್ಟವಾಗುತ್ತದೆ.

ಐಪಿಎಲ್‌ ಎಂದರೆ ಕೇವಲ ಆಟ ಎಂದು ಬಹು ತೇಕರು ಅಂದುಕೊಂಡಿದ್ದಾರೆ. ಆದರೆ ಇದು ದೊಡ್ಡ ಉದ್ಯಮ. ಇದನ್ನು ನಂಬಿಕೊಂಡು ಸಾವಿರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಈ ಒಂದು ವರ್ಷ ಹಲವರ ಜೀವನ ಅಭದ್ರಗೊಳ್ಳುತ್ತದೆ.

ಪ್ರಾಯೋಜಕತ್ವದ ಆದಾಯ ಖೋತಾ ಹಾಗೆಯೇ ಪ್ರಾಯೋಜಕರಿಂದ ಪ್ರತೀ ತಂಡವೂ ವರ್ಷಕ್ಕೆ 35ರಿಂದ 75 ಕೋಟಿ ರೂ. ಗಳಿಸುತ್ತವೆ. ಇದು ಒಂದು ತಂಡಕ್ಕೆ ಎಷ್ಟು ಪ್ರಾಯೋಜಕರಿದ್ದಾರೆ ಎನ್ನುವುದನ್ನು ಅವಲಂಬಿ ಸಿದೆ. ಟಿಕೆಟ್‌ ಸಂಗ್ರಹದಿಂದ 28ರಿಂದ 45 ಕೋಟಿ ರೂ.ಗಳ ವರೆಗೆ ನಷ್ಟವಾಗುತ್ತದೆ.

ಹೊಟೇಲ್‌, ವಿಮಾನ ಸಂಸ್ಥೆಗಳಿಗೂ ನಷ್ಟ
ಐಪಿಎಲ್‌ ಮೂಲಕ ಪ್ರತೀ ವರ್ಷ, ಹೊಟೇಲ್‌ಗ‌ಳು, ವಿಮಾನಯಾನ ಸಂಸ್ಥೆಗಳಿಗೆ 50 ಕೋಟಿ ರೂ. ಹಣ ಬರುತ್ತಿತ್ತು. ಕೂಟ ರದ್ದಾದರೆ ಆ ಹಣ ಇಲ್ಲವಾಗುತ್ತದೆ. ಎಲ್ಲ ಫ್ರಾಂಚೈಸಿಗಳು ಒಟ್ಟಾಗಿ 600 ವ್ಯಕ್ತಿಗಳನ್ನು ನಿಭಾಯಿಸುತ್ತವೆ. ಇದರಲ್ಲಿ ಗುತ್ತಿಗೆ ವ್ಯವಸ್ಥೆಗೆ ಬರದ ವ್ಯಕ್ತಿಗಳೂ ಇರುತ್ತಾರೆ. ಕೆಲವರು ಸಂಬಳಕ್ಕಾಗಿ ನಿಯುಕ್ತರಾಗಿರುತ್ತಾರೆ. ಕೂಟ ನಡೆಯದಿದ್ದರೆ ಈ ವ್ಯಕ್ತಿಗಳ ಕೆಲಸಕ್ಕೆ ಧಕ್ಕೆಯಾಗುತ್ತದೆ. ಹೀಗೆ 10 ಕೋಟಿ ರೂ. ಕೈಬಿಟ್ಟು ಹೋಗುತ್ತದೆ!

ಜನಸಾಮಾನ್ಯರಿಗೂ ಕಷ್ಟ
ಐಪಿಎಲ್‌ ನಂಬಿಕೊಂಡು ಜನಸಾಮಾನ್ಯರೂ ಇರುತ್ತಾರೆ. ಧ್ವಜ ಮಾರುವವರು, ಟೀ ಶರ್ಟ್‌ ಮಾರುವವರು, ಪಂದ್ಯದ ವೇಳೆ ಮುಖಕ್ಕೆ ಬಣ್ಣ ಹಾಕುವವರು, ಚೆಂಡು, ಬ್ಯಾಟ್‌ ಕಂಪೆನಿಗಳು ಇರುತ್ತವೆ. ಐಪಿಎಲ್‌ ರದ್ದಾದ ಕೂಡಲೇ ಅವರ ಜೀವನವೂ ಅತಂತ್ರಕ್ಕೆ ಸಿಲುಕುತ್ತದೆ. ಇವರಲ್ಲಿ ಬಹುತೇಕರು ಐಪಿಎಲ್‌ ಅನ್ನೇ ಗುರಿ ಮಾಡಿಕೊಂಡಿರುತ್ತಾರೆ. ಅವರ ಜೀವನೋಪಾಯ ದೊಡ್ಡ ಪ್ರಶ್ನೆ.

ಹಾಗೆಯೇ ಬೆಟ್ಟಿಂಗ್‌ ನಡೆಸುವವರಿಗೂ ಭಾರೀ ನಷ್ಟ ಎಂಬುದನ್ನು ಮರೆಯುವಂತಿಲ್ಲ.

ಬಿಸಿಸಿಐಗೆ ದೊಡ್ಡ ಲಾಸ್‌
ಬರೀ ಬಿಸಿಸಿಐಗೆ 2,000 ಕೋಟಿ ರೂ. ನಷ್ಟವಾಗುತ್ತದೆ. ಪ್ರತೀ ವರ್ಷ ಬಿಸಿಸಿಐಗೆ ಸ್ಟಾರ್‌ ನ್ಪೋರ್ಟ್ಸ್ನಿಂದ ಐಪಿಎಲ್‌ ನೇರಪ್ರಸಾರಕ್ಕಾಗಿ 3,000 ಕೋಟಿ ರೂ. ನೀಡಲ್ಪಡುತ್ತದೆ. ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ವಿವೋ 500 ಕೋಟಿ ರೂ. ನೀಡುತ್ತದೆ. ಇದರಲ್ಲಿ ಅರ್ಧದಷ್ಟನ್ನು ಬಿಸಿಸಿಐ ಫ್ರಾಂಚೈಸಿಗಳಿಗೆ ಹಂಚುತ್ತದೆ. ಕೂಟ ರದ್ದಾದರೆ ಈ ಹಣ ಬಿಸಿಸಿಐ ಕೈಸೇರುವುದಿಲ್ಲ. ನೇರಪ್ರಸಾರದಿಂದ ಬಿಸಿಸಿಐಗೆ ಬರುವ ಆದಾಯದಲ್ಲಿ, ತಲಾ 100 ಕೋಟಿ ರೂ.ಗಳನ್ನು ಎಂಟೂ ಫ್ರಾಂಚೈಸಿಗಳಿಗೆ ಹಂಚುತ್ತದೆ. ಹಾಗೆ ಪ್ರತೀ ಫ್ರಾಂಚೈಸಿಗೆ 100 ಕೋಟಿ ರೂ. ನಷ್ಟವಾಗುತ್ತದೆ. ಇನ್ನು ಬೇರೆ ಬೇರೆ ನಷ್ಟಗಳ ಲೆಕ್ಕಾಚಾರ ಬೇರೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.