Video: ಒಂದೇ ಓವರ್ ನಲ್ಲಿ ಬಂತು 39 ರನ್: ಯುವರಾಜ್‌,ಪೂರನ್..ದಾಖಲೆಗಳನ್ನು ಮುರಿದ 28ರ ಆಟಗಾರ


Team Udayavani, Aug 20, 2024, 12:48 PM IST

Video: ಒಂದೇ ಓವರ್ ನಲ್ಲಿ ಬಂತು 39 ರನ್: ಯುವರಾಜ್‌,ಪೂರನ್..ದಾಖಲೆಗಳನ್ನು ಮುರಿದ 28ರ ಆಟಗಾರ

ನವದೆಹಲಿ: ಕ್ರೀಡಾ ಲೋಕದಲ್ಲಿ ಇಂದು ಮಾಡಿದ ದಾಖಲೆ ನಾಳೆಯ ದಿನ ಯಾವುದೋ ಒಬ್ಬ ಹೊಸ ಆಟಗಾರ ಬಂದು ಬ್ರೇಕ್‌ ಮಾಡಬಹುದು. ಅದೇ ರೀತಿಯ ಒಂದು ವಿಶಿಷ್ಟ ದಾಖಲೆ ಕ್ರಿಕೆಟ್‌ನಲ್ಲಿ ಸೃಷ್ಟಿಯಾಗಿದೆ.

ಸಮೋವಾದ (Samoa) 28 ವರ್ಷದ ಡೇರಿಯಸ್ ವಿಸ್ಸರ್ (Darius Visser)  T20Iಯಲ್ಲಿ ಯಾರೂ ಮಾಡದ ದಾಖಲೆಯೊಂದನ್ನು ಮಾಡಿ, ಈ ಹಿಂದಿನ ಎಲ್ಲಾ ರೆಕಾರ್ಡ್ಸ್‌ಗಳನ್ನು ಬ್ರೇಕ್‌ ಮಾಡಿದ್ದಾರೆ.

ಮಂಗಳವಾರ(ಆ.20ರಂದು) ನಡೆದ ಪಂದ್ಯದಲ್ಲಿ ಸಮೋವಾದ ಡೇರಿಯಸ್ ವಿಸ್ಸರ್  ಒಂದೇ ಓವರ್‌ನಲ್ಲಿ 39ರನ್‌ ಗಳನ್ನು ಸಿಡಿಸಿ  ದಿಗ್ಗಜ ಯುವರಾಜ್ ಸಿಂಗ್(2007), ಕೀರಾನ್ ಪೊಲಾರ್ಡ್ (2021), ದೀಪೇಂದ್ರ ಸಿಂಗ್ ಐರಿ (2024) ಮತ್ತು ನಿಕೋಲಸ್ ಪೂರನ್ (2024) ಅವರ ದಾಖಲೆ ಒಂದೇ ಓವರ್‌ನಲ್ಲಿ 36 ರನ್‌ ಗಳನ್ನು ಸಿಡಿಸಿದ ದಾಖಲೆಯನ್ನು ಮುರಿದಿದ್ದಾರೆ.

2026ರ T20 ವಿಶ್ವಕಪ್ ಪ್ರಾದೇಶಿಕ ಅರ್ಹತಾ (2026 World Cup regional qualifier) ಸುತ್ತಿನ ವನುವಾಟು (Vanuatu) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವಿಸ್ಸರ್‌ ಈ ದಾಖಲೆಯನ್ನು ಬರೆದಿದ್ದಾರೆ.

ವಿಸ್ಸರ್ ಅವರು T20Iಯಲ್ಲಿ ಸಮೋವಾದ ಪರ ಶತಕ ಗಳಿಸಿದ ಮೊದಲ ಆಟಗಾರನಾಗಿ ಮೂಡಿಬಂದಿದ್ದಾರೆ. ವಿಸ್ಸರ್ ಅವರ 62 ಎಸೆತಗಳಲ್ಲಿ 132 ರನ್‌ಗಳಿಸಿದ್ದರು. ಸಮೋವಾ ತಂಡವು ವನುವಾಟು ವಿರುದ್ಧ 10 ರನ್‌ಗಳ ಜಯ ಸಾಧಿಸಿದೆ.

ವಿಸ್ಸರ್, 46 ರನ್ ಗಳಿಸಿದ್ದಾಗ ವನುವಾಟು ತಂಡದ ನಲಿನ್ ನಿಪಿಕೊ 15ನೇ ಓವರ್ ಬೌಲ್ ಮಾಡಲು ಮುಂದಾದರು. ಇದರಲ್ಲಿ ಸಮೋವಾ ಬ್ಯಾಟರ್ ಆರು ಸಿಕ್ಸರ್‌ ಗಳನ್ನು ಸಿಡಿಸಿದರು. ಮೂರು ನೋಬಾಲ್‌ಗಳನ್ನು ಎದುರಿಸಿದರು. ನಿಪಿಕೊ ಓವರ್‌ನ ಐದನೇ ಎಸೆತಕ್ಕೆ ಡಾಟ್ ಬಾಲ್ ಬೌಲ್ ಮಾಡಿದರು. ಒಟ್ಟು ಸಿಕ್ಸರ್‌ ಹಾಗೂ ನೋಬಾಲ್‌ ನೊಂದಿಗೆ ಒಂದೇ ಓವರ್‌ನಲ್ಲಿ 39 ರನ್‌ ಗಳಿಸುವ ಮೂಲಕ ಟಿ-20 ಇತಿಹಾಸದಲ್ಲಿ ಹೊಸ ದಾಖಲೆ ಮಾಡಿದ್ದಾರೆ.

ತನ್ನ ಇನ್ನಿಂಗ್ಸ್‌ ನಲ್ಲಿ ವಿಸ್ಸರ್‌ 14 ಸಿಕ್ಸ್‌ ಹಾಗೂ 5 ಬೌಂಡರಿ ಸಿಡಿಸಿದರು.

ಯುವರಾಜ್ 2007ರ T20 ವಿಶ್ವ ಕಪ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳಿಗೆ ಸಿಡಿಸಿದ್ದರು. ಪೊಲಾರ್ಡ್ 2021 ರಲ್ಲಿ ಶ್ರೀಲಂಕಾದ ಅಕಿಲಾ ಧನಂಜಯ ಅವರ ಓವರ್‌ ನಲ್ಲಿ ಇದೇ ರೀತಿಯ ಆಟವನ್ನಾಡಿದ್ದರು. ನೇಪಾಳದ ದೀಪೇಂದ್ರ ಐರಿ ಇದೇ ವರ್ಷದ ಏಪ್ರಿಲ್‌ನಲ್ಲಿ ಒಂದೇ ಓವರ್‌ನಲ್ಲಿ 36 ರನ್‌ ಸಿಡಿಸಿದ್ದರು.

ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಮತ್ತು ಯುಎಸ್ ಬ್ಯಾಟರ್ ಜಸ್ಕರನ್ ಮಲ್ಹೋತ್ರಾ 36 ರನ್ ಗಳಿಸಿದ್ದಾರೆ.

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

China Open Badminton: Priyanshu Rajawat out

China Open Badminton: ಪ್ರಿಯಾಂಶು ರಾಜಾವತ್‌ ಹೊರಕ್ಕೆ

FIH: Harman, Sreejesh in award competition

FIH: ಪ್ರಶಸ್ತಿ ಸ್ಪರ್ಧೆಯಲ್ಲಿ ಹರ್ಮನ್‌, ಶ್ರೀಜೇಶ್‌

Asian Champions Trophy 2024: ಚೀನಾವನ್ನು ಮಣಿಸಿ ಟ್ರೋಫಿ ಗೆದ್ದ ಭಾರತ ಹಾಕಿ ತಂಡ

Asian Champions Trophy 2024: ಚೀನಾವನ್ನು ಮಣಿಸಿ ಟ್ರೋಫಿ ಗೆದ್ದ ಭಾರತ ಹಾಕಿ ತಂಡ

1-ccrr

Cricket ದಾಖಲೆಯ ಹೊಸ್ತಿಲಲ್ಲಿ ಭಾರತ-ಬಾಂಗ್ಲಾ ಸರಣಿ

K L RAhul

KL Rahul ಮತ್ತೆ ಆರ್‌ಸಿಬಿಗೆ ? ವೀಡಿಯೊ ವೈರಲ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.