ಐಪಿಎಲ್‌ ಆರಂಭಕ್ಕೆ 5 ದಿನಾಂಕ

ಎ. 15, ಎ. 21, ಎ. 25, ಮೇ 1 ಮತ್ತು ಮೇ 5

Team Udayavani, Mar 16, 2020, 1:19 AM IST

ಐಪಿಎಲ್‌ ಆರಂಭಕ್ಕೆ 5 ದಿನಾಂಕ

ಮುಂಬಯಿ: ಹದಿಮೂರನೇ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ತೂಗುಯ್ನಾಲೆಯಲ್ಲಿದೆ. ಇದು ನಡೆಯುತ್ತದೋ, ಇಲ್ಲವೋ ಅಥವಾ ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸಿ ಆಡಲಾಗುವುದೋ ಎಂಬ ಯಾವುದೇ ಪ್ರಶ್ನೆಗೆ ಶನಿವಾರದ ಸಭೆಯಲ್ಲಿ ಉತ್ತರ ಲಭಿಸಿಲ್ಲ. ಈ ನಡುವೆಯೇ ಐಪಿಎಲ್‌ ಫ್ರಾಂಚೈಸಿಗಳು ಕೂಟದ ಆರಂಭಕ್ಕೆ 5 ನೂತನ ದಿನಾಂಕಗಳನ್ನು ಸೂಚಿಸಿರುವುದು ತಿಳಿದು ಬಂದಿದೆ.

ಬಿಸಿಸಿಐ, ಐಪಿಎಲ್‌ ತಂಡಗಳ ಮಾಲಕರ ಸಭೆಯಲ್ಲಿ ಐಪಿಎಲ್‌ ಅಧ್ಯಕ್ಷ ಬೃಜೇಶ್‌ ಪಟೇಲ್‌ ಸಹಿತ ಉನ್ನತ ಅಧಿಕಾರಿಗಳೆಲ್ಲ ಪಾಲ್ಗೊಂಡಿದ್ದರು. ಆದರೆ ಯಾರಿಗೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಈ ನಡುವೆ ಫ್ರಾಂಚೈಸಿಗಳ ಮಾಲಕರು ಕೂಟದ ಆರಂಭಕ್ಕೆ ಕೆಲವು ದಿನಾಂಕಗಳನ್ನು ಸೂಚಿಸಿದ್ದಾಗಿ ವರದಿಯಾಗಿದೆ. ಮಾ. 19ಕ್ಕೆ ಆರಂಭವಾಗಬೇಕಿದ್ದ ಈ ಪಂದ್ಯಾವಳಿಯನ್ನು ಎ. 15, ಎ. 21, ಎ. 25, ಮೇ 1 ಅಥವಾ ಮೇ 5ರಿಂದ ಆರಂಭಿಸಬಹುದು ಎಂದು ಸೂಚಿಸಲಾಗಿದೆ.

ಆಗ ಸುದೀರ್ಘ‌ ಐಪಿಎಲ್‌ ಪಂದ್ಯಾವಳಿಗೆ ಕನಿಷ್ಠ 15ರಿಂದ 30 ದಿನಗಳ ನಷ್ಟವಾಗಲಿದೆ. ಆಗ ಈ ಕೂಟದ ಮಾದರಿಯನ್ನು ಪರಿವರ್ತಿಸುವುದು ಅನಿವಾರ್ಯವಾಗುತ್ತದೆ. ಪರ್ಯಾಯ ಮಾರ್ಗಗಳ ಬಗ್ಗೆ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಚರ್ಚೆ ನಡೆಯಬೇಕಾಗುತ್ತದೆ.

ಐಪಿಎಲ್‌ ಮುಂದಿರುವ ಅವಕಾಶಗಳು
– ಪೂರ್ಣ ಮಟ್ಟದಲ್ಲೇ ಪಂದ್ಯಾವಳಿ

ಎ. 15ರ ಅನಂತರ ಪೂರ್ಣ ಮಟ್ಟದಲ್ಲೇ ಪಂದ್ಯಾವಳಿಯನ್ನು ನಡೆಸುವುದು. ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಿ ಪಂದ್ಯಗಳನ್ನು ಆಡಿಸುವುದು. ಆದರೆ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಆಟಗಾರರಲ್ಲಿ ಯಾವ ಉತ್ಸಾಹವೂ ಇರದು. ಹಾಗೆಯೇ ಬಿಸಿಸಿಐಗೆ ಟಿಕೆಟ್‌ ಹಣವೂ ದಕ್ಕುವುದಿಲ್ಲ. ಇವೆರಡೂ ಈ ಹಂತದಲ್ಲಿ ಬಹಳ ಮಹತ್ವದ್ದಲ್ಲವಾದ್ದರಿಂದ ಫ್ರಾಂಚೈಸಿಗಳು ಅದಕ್ಕೆ ಸಿದ್ಧವಿವೆ. ಇದರಿಂದ ಒಂದು ಹಂತದ ಲಾಭ ಸಾಧ್ಯವಿದೆ.

– ದಿನಕ್ಕೆ ಎರಡು ಪಂದ್ಯಗಳು
ಎ. 15ರ ಬಳಿಕ ದಿನಕ್ಕೆರಡು ಪಂದ್ಯಗಳನ್ನು ನಡೆಸಿ, ಬೇಗ ಕೂಟ ಮುಗಿಸಿಬಿಡುವುದು.

ಐಪಿಎಲ್‌ನಲ್ಲಿ ಒಟ್ಟು 60 ಪಂದ್ಯಗಳು ನಡೆಯುತ್ತವೆ. ಸದ್ಯ ಬಿಸಿಸಿಐಗೆ 40 ದಿನಗಳ ಸಮಯಾವಕಾಶವಿದೆ. ದಿನಕ್ಕೆರಡು ಪಂದ್ಯಗಳನ್ನು ನಡೆಸಿದರೆ, 40 ದಿನದಲ್ಲಿ ಕೂಟ ಮುಗಿಸಬಹುದು. ಆದರೆ ಟಿವಿ ವೀಕ್ಷಕರಿಗೆ ಇದು ಬೋರ್‌ ಹೊಡೆಸುವ ಸಾಧ್ಯತೆಯಿದೆ.

– ಜ 8 ತಂಡಗಳ 2 ವಿಭಾಗ
8 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಿಯೂ ಆಡಬಹುದು. ಒಟ್ಟು 4 ಅಗ್ರ ತಂಡಗಳನ್ನು ಪ್ಲೇ ಆಫ್ಗೇರಿಸಲು ಅವಕಾಶ ನೀಡುವುದು.

ಇದುವರೆಗೆ ಐಪಿಎಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲೇ ನಡೆಯುತ್ತಿತ್ತು. ಇಲ್ಲಿ ಪ್ರತೀ ತಂಡ ಇನ್ನೊಂದು ತಂಡದ ವಿರುದ್ಧ 2 ಪಂದ್ಯಗಳನ್ನು ಆಡುತ್ತಿತ್ತು. ಈಗ 2 ಗುಂಪು ಮಾಡುವುದರಿಂದ ಪಂದ್ಯಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗುತ್ತದೆ. ಕೂಟವನ್ನು ಅತ್ಯಂತ ಬೇಗ ಮುಗಿಸಬಹುದು. ಬಹುಶಃ 20 ದಿನಗಳಲ್ಲೇ ಐಪಿಎಲ್‌ ಮುಗಿಯಲೂಬಹುದು. ಕೂಟದಲ್ಲೂ ಹೆಚ್ಚಿನ ರೋಚಕತೆ ಇರುತ್ತದೆ. ಆದರೆ ನೇರಪ್ರಸಾರ ಮಾಡುವ ಸ್ಟಾರ್‌ನ್ಪೋರ್ಟ್ಸ್ಗೆ ನಷ್ಟವಾಗಲಿದೆ.

– ಸೀಮಿತ ತಾಣಗಳಲ್ಲಿ ಪಂದ್ಯಗಳು
ಕೂಟದ ಎಲ್ಲ ಪಂದ್ಯಗಳನ್ನು 2 ಅಥವಾ 3 ತಾಣಗಳಲ್ಲಿ ಆಡಿಸುವುದು. ಇದರಿಂದ ಆಟಗಾರರ ಪ್ರವಾಸದ ಅವಧಿ ಸಾಕಷ್ಟು ಕಡಿಮೆಯಾಗುತ್ತದೆ. ಸದ್ಯ ಪ್ರೇಕ್ಷಕರಿಗೆ ಅವಕಾಶ ಇಲ್ಲದಿರುವುದರಿಂದ ಇದೊಂದು ಪ್ರಶಸ್ತ ಮಾರ್ಗವಾದೀತು. ಆದರೆ ಇದರಿಂದ ಮೈದಾನದ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.