![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 22, 2023, 5:43 AM IST
ಪೋರ್ಟ್ ಆಫ್ ಸ್ಪೇನ್: ಆರಂಭಿಕ ಆಟಗಾರರಾದ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕದ ಬಳಿಕ ವಿರಾಟ್ ಕೊಹ್ಲಿ ಅವರ ಅಮೋಘ ಶತಕದಿಂದಾಗಿ ಭಾರತ ತಂಡವು ವೆಸ್ಟ್ಇಂಡೀಸ್ ತಂಡದೆದುರಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸುಭದ್ರ ಸ್ಥಿತಿಯಲ್ಲಿದೆ. ದ್ವಿತೀಯ ದಿನದ ಊಟದ ವಿರಾಮದ ವೇಳೆಗೆ ಭಾರತ ಆರು ವಿಕೆಟ್ ಕಳೆದುಕೊಂಡಿದ್ದು 373 ರನ್ ಗಳಿಸಿದೆ. ಇಶಾನ್ ಕಿಶನ್ 18 ಮತ್ತು ಆರ್. ಅಶ್ವಿನ್ 6 ರನ್ನುಗಳೊಂದಿಗೆ ಆಡುತ್ತಿದ್ದಾರೆ.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ ನಾಲ್ಕು ವಿಕೆಟ್ ಕಳೆದುಕೊಂಡಿದ್ದು 288 ರನ್ ಗಳಿಸಿತ್ತು. 87 ರನ್ನುಗಳಿಂದ ಎರಡನೇ ದಿನದಾಟ ಆರಂಭಿಸಿದ್ದ ಕೊಹ್ಲಿ ಉತ್ತಮವಾಗಿ ಶತಕ ಪೂರ್ತಿಗೊಳಿಸಿದರು. 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಕೊಹ್ಲಿ ಕ್ರಿಕೆಟ್ ಬಾಳ್ವೆಯಲ್ಲಿ 76ನೇ ಶತಕ ಬಾರಿಸಿ ಸ್ಮರಣೀಯಗೊಳಿಸಿದರು. ವಿದೇಶದ ಟೆಸ್ಟ್ ಸರಣಿಯಲ್ಲಿ 2018ರ ಡಿಸೆಂಬರ್ ಬಳಿಕ ಇದು ಅವರು ದಾಖಲಿಸಿದ ಮೊದಲ ಶತಕ ಆಗಿದೆ.
ಆರಂಭಿಕರಾದ ಜೈಸ್ವಾಲ್ ಮತ್ತು ರೋಹಿತ್ ಅವರು ಮೊದಲ ವಿಕೆಟಿಗೆ 139 ರನ್ ಪೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಜೈಸ್ವಾಲ್ 57 ರನ್ ಹೊಡೆದರೆ ರೋಹಿತ್ 80 ರನ್ ಗಳಿಸಿ ಔಟಾದರು. ಆಬಳಿಕ ಕೊಹ್ಲಿ ಅವರ ಅಮೋಘ ಆಟದಿಂದ ತಂಡ ಸುಸ್ಥಿತಿಗೆ ತಲುಪಿತು. ಅಜಿಂಕ್ಯ ರಹಾನೆ ಬೇಗನೇ ಔಟಾದ ಬಳಿಕ ಕೊಹ್ಲಿ ಅವರನ್ನು ಸೇರಿಕೊಂಡ ರವೀಂದ್ರ ಜಡೇಜ ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡರು.
ಅಂತಿಮ ಅವಧಿಯ ಆಟದಲ್ಲಿ ಕೆಲವೊಂದು ಆಕರ್ಷಕ ಹೊಡೆತಗಳಿಂದ ಗಮನ ಸೆಳೆದ ಕೊಹ್ಲಿ ಮತ್ತು ಜಡೇಜ ದಿನದಾಟ ಅಂತ್ಯಗೊಂಡಾಗ ಮುರಿಯದ ಐದನೇ ವಿಕೆಟಿಗೆ 106 ರನ್ ಪೇರಿಸಿದ್ದರು. 20 ಎಸೆತ ಎದುರಿಸಿದ ಬಳಿಕ ರನ್ ಖಾತೆ ತೆರೆದಿದ್ದ ಕೊಹ್ಲಿ ಆಬಳಿಕ ಭರ್ಜರಿಯಾಗಿ ಆಡಿ ರಂಜಿಸಿದರು. ಒಟ್ಟಾರೆ 206 ಎಸೆತ ಎದುರಿಸಿದ ಅವರು 121 ರನ್ ಗಳಿಸಿ ಔಟಾದರು. 11 ಬೌಂಡರಿ ಹೊಡೆದಿದ್ದ ಅವರು ಐದನೇ ವಿಕೆಟಿಗೆ ಜಡೇಜ ಅವರ ಜತೆ 159 ರನ್ ಪೇರಿಸಿದ್ದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.