![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 14, 2023, 6:20 AM IST
ಬೆಂಗಳೂರು: ಇತ್ತೀಚೆ ಗಷ್ಟೇ ಜಪಾನ್ನಲ್ಲಿ ನಡೆದ ವನಿತಾ ಜೂನಿಯರ್ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ತಂಡ ಮಂಗಳವಾರ ಬೆಂಗಳೂರಿನ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ವೇಳೆ ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಆಟಗಾರ್ತಿಯರನ್ನು ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿದ್ದ ಇತರ ಜನರು ಆಟಗಾರ್ತಿಯರ ಸುತ್ತ ನೆರೆದು ಸೆಲ್ಫಿ ತೆಗೆದುಕೊಂಡರು.
ಈ ಸ್ವಾಗತ ನೋಡಿ ಆಟಗಾರ್ತಿ ಯರು ಸಂಭ್ರಮಗೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ನಾಯಕಿ ಪ್ರೀತಿ, “ಈ ಸ್ವಾಗತ ನೋಡಿ ನಾವೆಲ್ಲ ಬಹಳ ಸಂತಸಗೊಂಡಿದ್ದೇವೆ. ಇಡೀ ಕೂಟದಲ್ಲಿ ನಮಗೆ ಬಹಳ ಪ್ರೀತಿ, ಬೆಂಬಲ ಸಿಕ್ಕಿತ್ತು. ಇಂಥದ್ದೊಂದು ಸ್ವಾಗತವನ್ನು ನಾವು ಊಹಿಸಿಯೂ ಇರಲಿಲ್ಲ. ವಿಮಾನ ನಿಲ್ದಾಣದಿಂದ ಹಿಡಿದು ಹೋದ ಕಡೆಯಲ್ಲೆಲ್ಲ ನಮ್ಮ ಸಾಧನೆಗೆ ಬಹಳ ಮೆಚ್ಚುಗೆ ದೊರಕಿದೆ’ ಎಂದರು.
ಸಮ್ಮಾನ, ಅಭಿಮಾನ
ಬಳಿಕ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಹಾಕಿ ಸಾಧಕಿ ಯರನ್ನು ಸಮ್ಮಾನಿಸಲಾ ಯಿತು. ಇವರಲ್ಲಿ 17 ಮಂದಿ ಖೇಲೋ ಇಂಡಿಯಾ ಕ್ರೀಡಾಪಟು ಗಳಾಗಿದ್ದರು. ಎಲ್ಲರೂ ವಿವಿಧ ಸಾಯ್ ನ್ಯಾಶನಲ್ ಸೆಂಟರ್ ಆಫ್ ಎಕ್ಸಲೆನ್ಸ್ನ ಭಾಗವಾ ಗಿದ್ದರು. ಆಯ್ಕೆ ಸಿದ್ಧತೆ, ತರಬೇತಿಯೆಲ್ಲ ಬೆಂಗಳೂರಿನಲ್ಲೇ ನಡೆದಿತ್ತು. ಈ ತಂಡ ವೀಗ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಬೆಂಗ ಳೂರಿನ ಪಾಲಿಗೂ ಹೆಮ್ಮೆಯ ಸಂಗತಿಯಾಗಿದೆ.
“ನಮ್ಮ ಸಮಸ್ಯೆಗಳೇನೇ ಇದ್ದರೂ ಬೆಂಗಳೂರಿನ ಸಾಯ್ ಕೇಂದ್ರಕ್ಕೆ ಒಂದು ಕರೆ ಮಾಡಿದರೆ ಸಾಕಿತ್ತು, ಸಮಸ್ಯೆ ಕೂಡಲೇ ಬಗೆಹರಿಯುತ್ತಿತ್ತು. ನಮ್ಮ ನೆರವಿಗೆ ನಿಂತ ಬೆಂಗಳೂರಿನ ಸಾಯ್ ಕೇಂದ್ರದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂಬುದಾಗಿ ನಾಯಕಿ ಪ್ರೀತಿ ಹೇಳಿದರು.
ಭಾರತ ಈ ಪಂದ್ಯಾವಳಿಯನ್ನು ಅಜೇಯವಾಗಿ ಮುಗಿಸಿತ್ತು. ಆಡಿದ 6 ಪಂದ್ಯಗಳಲ್ಲಿ ಐದನ್ನು ಜಯಿಸಿತ್ತು. ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಸಾಧಿಸಿತ್ತು. ಬಳಿಕ ಫೈನಲ್ನಲ್ಲಿ 4 ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾವನ್ನೇ ಮಣಿಸಿ ಇತಿಹಾಸ ನಿರ್ಮಿಸಿತು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.