![Swamijis should talk to High command about CM change: Chaluvarayaswamy](https://www.udayavani.com/wp-content/uploads/2024/06/chaluvata-415x229.jpg)
1983 World Cup ಗೆಲುವಿನ ಸಂಭ್ರಮಾಚರಣೆಯಲ್ಲಿ ರವಿಶಾಸ್ತ್ರಿ
'ಭಾರತೀಯ ಕ್ರಿಕೆಟ್ನ ದಿಕ್ಕನ್ನೇ ಬದಲಿಸಿದ ದಿನ' ಎಂದು ಬಣ್ಣನೆ ...
Team Udayavani, Jun 26, 2024, 9:49 AM IST
![1-asdssads](https://www.udayavani.com/wp-content/uploads/2024/06/1-asdssads-620x415.jpg)
ಹೊಸದಿಲ್ಲಿ: 1983 ಜೂನ್ 25 ಭಾರತ ಕ್ರಿಕೆಟ್ ಪ್ರಪಂಚ ಎಂದೂ ಮರೆಯಲಾರದ ದಿನ. ಭಾರತವು ಕ್ರಿಕೆಟ್ ಪ್ರಪಂಚದಾದ್ಯಂತ ಹೊಸ ಮೆಟ್ಟಿಲನ್ನು ಏರಿತ್ತು. ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಅನ್ನು ಆಘಾತಕಾರಿಯಾಗಿ ಸೋಲಿಸಿ ಚೊಚ್ಚಲ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಲಂಡನ್ನ ಐಕಾನಿಕ್ ಲಾರ್ಡ್ಸ್ ಸ್ಟೇಡಿಯಂನಲ್ಲಿ ತನ್ನದಾಗಿಸಿಕೊಂಡಿತ್ತು.
ಕಪಿಲ್ ದೇವ್ ನಾಯಕತ್ವದಲ್ಲಿ ಐತಿಹಾಸಿಕ ವಿಜಯ ಕ್ರಿಕೆಟ್ ಆಟದ ಶಕ್ತಿಯನ್ನು ಬದಲಾಯಿಸಿ ಹೊಸ ದಿಕ್ಕಿನತ್ತ ಕರೆದೊಯ್ದಿತ್ತು. ಭಾರತವು ಕ್ರಿಕೆಟ್ ಗೀಳಿನ ಸೂಪರ್ ಪವರ್ ಆಗಿ ಹೊರಹೊಮ್ಮಲು ದಾರಿ ಮಾಡಿಕೊಟ್ಟಿತ್ತು.
ಭಾರತ ತಂಡದ ಮಾಜಿ ಆಲ್ರೌಂಡರ್ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಕೆಲವು ಹಳೆಯ, ಯುವ ಕ್ರಿಕೆಟ್ ತಾರೆಯರೊಂದಿಗೆ ಐತಿಹಾಸಿಕ 1983 ಕ್ರಿಕೆಟ್ ವಿಶ್ವಕಪ್ ವಿಜಯೋತ್ಸವದ ಕೆಲವು ಕ್ಷಣಗಳನ್ನು ಬುಧವಾರ ಇನ್ ಸ್ಟಾಗ್ರಾಮ್ ಹಂಚಿಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಸುನಿಲ್ ಗವಾಸ್ಕರ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ ಮ್ಯಾನ್ ರಿಷಭ್ ಪಂತ್, ಭಾರತದ ಮಾಜಿ ಆಲ್ರೌಂಡರ್ ಮತ್ತು ಈಗಿನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ವೇಗಿ ಮೊಹಮ್ಮದ್ ಸಿರಾಜ್ ಮತ್ತು ಇತರ ಕೆಲವು ಕ್ರಿಕೆಟಿಗರು ಈ ಸಂಭ್ರಮಾಚರಣೆ ಭಾಗವಾಗಿದ್ದಾರೆ.
“Time flies. A Day that changed the FACE of Indian Cricket forever. Old is Gold. 41 years – #TDTY #WorldChampions,” ಎಂದು ಶಾಸ್ತ್ರಿ ಪೋಸ್ಟ್ ಮಾಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 54.4(ಅಂದು ಏಕದಿನ ಪಂದ್ಯ 60 ಓವರ್) 183 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ಅನ್ನು 140ಕ್ಕೆ ನಿಯಂತ್ರಿಸಿ 43 ರನ್ ಗಳ ಅಮೋಘ ಜಯ ತನ್ನದಾಗಿಸಿಕೊಂಡಿತ್ತು.
ಟಾಪ್ ನ್ಯೂಸ್
![Swamijis should talk to High command about CM change: Chaluvarayaswamy](https://www.udayavani.com/wp-content/uploads/2024/06/chaluvata-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![INDWvsSAW: ತಪ್ಪಿತು ರಿಚಾ ಶತಕ; ವಿಶ್ವದಾಖಲೆಯ ಮೊತ್ತ ಕಲೆ ಹಾಕಿದ ಭಾರತ](https://www.udayavani.com/wp-content/uploads/2024/06/ind-w-150x83.jpg)
INDWvsSAW: ತಪ್ಪಿತು ರಿಚಾ ಶತಕ; ವಿಶ್ವದಾಖಲೆಯ ಮೊತ್ತ ಕಲೆ ಹಾಕಿದ ಭಾರತ
![1-sadsd](https://www.udayavani.com/wp-content/uploads/2024/06/1-sadsd-150x84.jpg)
T20 WC; ಭಾರತ-ದಕ್ಷಿಣ ಆಫ್ರಿಕಾ: ಸೋಲಿಲ್ಲದ ಸರದಾರರ ಫೈನಲ್ ಸಮರ
![ಶಫಾಲಿ ದ್ವಿಶತಕ, ಸ್ಮೃತಿ ಶತಕ: ಹರಿಣಗಳನ್ನು ಹೈರಾಣಿಗಿಸಿದ ಭಾರತೀಯ ಜೋಡಿ](https://www.udayavani.com/wp-content/uploads/2024/06/smri-150x83.jpg)
INDWvsSAW; ಶಫಾಲಿ ದ್ವಿಶತಕ, ಸ್ಮೃತಿ ಶತಕ: ಹರಿಣಗಳನ್ನು ಹೈರಾಣಾಗಿಸಿದ ಭಾರತೀಯ ಜೋಡಿ
![T20 World Cup: ಬಾಬರ್ ಅಜಂ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ](https://www.udayavani.com/wp-content/uploads/2024/06/rohit-2-150x83.jpg)
T20 World Cup: ಬಾಬರ್ ಅಜಂ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
![Sri Lanka Team: ಟಿ20 ವಿಶ್ವಕಪ್ನಲ್ಲಿ ಕಳಪೆಯಾಟ; ಲಂಕಾ ಕೋಚ್ ಸಿಲ್ವರ್ವುಡ್ ರಾಜೀನಾಮೆ](https://www.udayavani.com/wp-content/uploads/2024/06/23-3-150x90.jpg)
Sri Lanka Team: ಟಿ20 ವಿಶ್ವಕಪ್ನಲ್ಲಿ ಕಳಪೆಯಾಟ; ಲಂಕಾ ಕೋಚ್ ಸಿಲ್ವರ್ವುಡ್ ರಾಜೀನಾಮೆ
MUST WATCH
ಹೊಸ ಸೇರ್ಪಡೆ
![No problem anyone comes in front of Martin…: Producer Uday Mehta](https://www.udayavani.com/wp-content/uploads/2024/06/martin-150x83.jpg)
Martin ಮುಂದೆ ಯಾರೇ ಬರಲಿ ನೋ ಪ್ರಾಬ್ಲಂ…: ನಿರ್ಮಾಪಕ ಉದಯ್ ಮೆಹ್ತಾ
![Swamijis should talk to High command about CM change: Chaluvarayaswamy](https://www.udayavani.com/wp-content/uploads/2024/06/chaluvata-150x83.jpg)
CM ಬದಲಾವಣೆ ಬಗ್ಗೆ ಸ್ವಾಮೀಜಿಗಳು ಬೇಕಾದರೆ ವರಿಷ್ಠರ ಜತೆ ಮಾತನಾಡಲಿ: ಚಲುವರಾಯಸ್ವಾಮಿ
![10](https://www.udayavani.com/wp-content/uploads/2024/06/10-20-150x90.jpg)
ಸ್ತನ ಕ್ಯಾನ್ಸರ್ ಕಾಡಿದ ಚಿತ್ರರಂಗದ ಸುಂದರಿಯರಿವರು.. ಕಾಯಿಲೆಯನ್ನೇ ಗೆದ್ದ ದಿಟ್ಟೆಯರು..
![12-thekkatte](https://www.udayavani.com/wp-content/uploads/2024/06/12-thekkatte-150x90.jpg)
ಯಡಾಡಿ ಮತ್ಯಾಡಿ(ಗುಡ್ಡೆಅಂಗಡಿ)ಸರಕಾರಿ ಹಿ.ಪ್ರಾ.ಶಾಲೆ:ನೂತನ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮ
![](https://www.udayavani.com/wp-content/uploads/2024/06/ravi-150x83.jpg)
BJP Protest; ರೈತರಿಗೆ ಬರೆ ಹಾಕುವ ಸರಕಾರದ ನೀತಿ ನಿರ್ಧಾರ ಬದಲಿಸಲಿ: ಎನ್.ರವಿಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.