ಅಮೆರಿಕ ಕ್ರಿಕೆಟ್ ತಂಡಕ್ಕೆ ಭಾರತೀಯ ಸೌರಭ್ ನಾಯಕ
Team Udayavani, Mar 1, 2019, 12:30 AM IST
ನ್ಯೂಯಾರ್ಕ್: ಅಮೆರಿಕ ಕ್ರಿಕೆಟ್ ತಂಡ ತನ್ನ ಇತಿಹಾಸದಲ್ಲೇ ಮೊದಲ ಬಾರಿ ಅಂತಾರಾಷ್ಟ್ರೀಯ ಟಿ20ಸರಣಿಯಲ್ಲಿ ಆಡಲು ಸಿದ್ಧವಾಗಿದೆ. ಯುಎಇ ವಿರುದ್ಧ ಮಾ. 15ರಿಂದ 2 ಟಿ20, ಒಂದು ಏಕದಿನ ಪಂದ್ಯವಾಡಲು ಅಮೆರಿಕ ತಂಡವನ್ನು ಪ್ರಕಟಿಸಲಾಗಿದೆ. ವಿಶೇಷವೆಂದರೆ, ಭಾರತೀಯ ಮೂಲದ ಸೌರಭ್ ನೇತ್ರಾವಲ್ಕರ್ ಈ ತಂಡದ ನಾಯಕರಾಗಿರುವುದು!ಈ ತಂಡದಲ್ಲಿ ಕನ್ನಡಿಗ ನಾಸ್ತುಷ್ ಕೆಂಜಿಗೆ ಕೂಡ ಸ್ಥಾನ ಪಡೆದಿದ್ದಾರೆ. ಇನ್ನೂ ವಿಶೇಷವೆಂದರೆ, ಈ ತಂಡದಲ್ಲಿರುವ ಶೇ.ಅರ್ಧದಷ್ಟು ಮಂದಿ ಆಟಗಾರರು ಭಾರತೀಯ ಮೂಲದವರಾಗಿರುವುದು!
ಮುಂಬಯಿ ಮೂಲದ ಸೌರಭ್
ಅಮೆರಿಕ ತಂಡದ ನಾಯಕ ಸೌರಭ್ ನೇತ್ರಾವಲ್ಕರ್, ಮುಂಬಯಿಯವರು. 27 ವರ್ಷ. 2010ರಲ್ಲಿ ಭಾರತದ ಪರ ಅಂಡರ್-19 ವಿಶ್ವಕಪ್ ಆಡಿದ್ದಾರೆ! 2013-14ರ ಅವಧಿಯಲ್ಲಿ ಮುಂಬಯಿ ಪರ ರಣಜಿಯನ್ನೂ ಆಡಿದ್ದಾರೆ. ಎಡಗೈ ವೇಗದ ಬೌಲರ್ ಆಗಿರುವ ಅವರು ಪ್ರಾರಂಭದಲ್ಲಿ ಯಶಸ್ಸು ಕಂಡರೂ, ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ ಎಂದು ಭಾಸವಾಯಿತು. ಆದ್ದರಿಂದ 2015ರಲ್ಲಿ ಕ್ರಿಕೆಟನ್ನು ಬಿಟ್ಟು ಅಮೆರಿಕಕ್ಕೆ ಓದಲು ತೆರಳಿದರು. ಅಲ್ಲಿನ ಕಾರ್ನೆಲ್ ವಿವಿಯಲ್ಲಿ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಈ ಹಂತದಲ್ಲಿ ಕ್ರಿಕೆಟ್ ಬಗೆಗಿನ ಅವರ ಸೆಳೆತ ಕಡಿಮೆಯಾಗಿರಲಿಲ್ಲ. ಪರಿಣಾಮ 2018ರಲ್ಲಿ ಅವರು ಅಮೆರಿಕ ತಂಡದ ನಾಯಕರಾದರು.
ಮೂಡಿಗೆರೆಯ ಹುಡುಗ ನಾಸ್ತುಷ್
ಕರ್ನಾಟಕದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಸಹವರ್ತಿ ಪ್ರದೀಪ್ ಕೆಂಜಿಗೆ ಅವರ ಪುತ್ರ ನಾಸ್ತುಷ್ ಕೆಂಜಿಗೆ. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರು. ತಂದೆ ಪ್ರದೀಪ್ ಅಮೆರಿಕದ ಟಸ್ಕೆಗೀ ವಿಶ್ವವಿದ್ಯಾಲಯದಲ್ಲಿ ಕೃಷಿ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿದ್ದರು. ನಾಸ್ತುಷ್, ಅಲಬಾಮಾದಲ್ಲಿ ಜನಿಸಿದ ಒಂದೇ ವರ್ಷಕ್ಕೆ ಪ್ರದೀಪ್ ಕುಟುಂಬ ಸಮೇತ ಭಾರತಕ್ಕೆ ಹಿಂತಿರುಗಿದರು. ಆರಂಭಿಕ ಹಂತದಲ್ಲಿ ನಾಸ್ತುಷ್ ಬೆಂಗಳೂರು ವಿವಿ ಮಟ್ಟದಲ್ಲಿ ಕ್ರಿಕೆಟ್ ಆಡಿದರು. ಮುಂದೆ 2015ರಲ್ಲಿ ಮತ್ತೆ ಅಮೆರಿಕಕ್ಕೆ ತೆರಳಿದರು. ಎಂಟೆಕ್ ಬಳಿಕ ಅವರು ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಎಂಜಿನಿಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು. ಕೆಲ ತಿಂಗಳ ಹಿಂದೆ ವೃತ್ತಿಗೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಜತೆಗೆ ಎಡಗೈ ಸ್ಪಿನ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.