![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 21, 2023, 12:31 AM IST
ಬೆಲ್ಗ್ರೇಡ್: ಹಾಲಿ ವಿಶ್ವ ಚಾಂಪಿಯನ್, ಅಮೆರಿಕದ ಒಲಿವಿಯ ಡೊಮಿನಿಕ್ ಪಾರಿಶ್ ಅವರನ್ನು ಮೊದಲ ಸುತ್ತಿನಲ್ಲೇ ಕೆಡವಿದ ಭಾರತದ ಅಂತಿಮ್ ಪಂಘಲ್, “ವಿಶ್ವ ಕುಸ್ತಿ ಚಾಂಪಿಯನ್ಶಿಪ್’ನಲ್ಲಿ ಅಮೋಘ ಪರಾಕ್ರಮಗೈದು ಸೆಮಿಫೈನಲ್ ಪ್ರವೇಶಿಸಿದರೂ ಇಲ್ಲಿ ಪರಾಭವಗೊಂಡರು.
ವನಿತೆಯರ 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಪಾರಿಶ್ ವಿರುದ್ಧ 19 ವರ್ಷದ ಅಂತಿಮ್ ಪಂಘಲ್ 0-2 ಹಿನ್ನಡೆಯಲ್ಲಿದ್ದರು. ಬಳಿಕ ಅಮೆರಿಕನ್ ರೆಸ್ಲರ್ಗೆ ಭರ್ಜರಿ ತಿರುಗೇಟು ನೀಡಿ 3-2 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಪಾರಿಶ್ ಅವರನ್ನು ಪರಾಭವಗೊಳಿಸಿದ ಬಳಿಕ ಅಂತಿಮ್ ಪಂಘಲ್ ಪೋಲೆಂಡ್ನ ರೊಕ್ಸಾನಾ ಮಾರ್ತಾ ಝಸಿನಾ ಅವರನ್ನೂ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಇಲ್ಲಿ ರಷ್ಯಾದ ನತಾಲಿಯಾ ಮಲಿಶೇವಾ ವಿರುದ್ಧ 9-6 ಅಂತರದ ಗೆಲುವು ಸಾಧಿಸಿದರು. ಆರಂಭದಲ್ಲಿ ಪಂಘಲ್ 6-0 ಮುನ್ನಡೆಯಲ್ಲಿದ್ದರು. ಬಳಿಕ ರಷ್ಯನ್ ಎದುರಾಳಿಯ ಪಟ್ಟು ಬಿಗಿಗೊಂಡಿತು. ಸ್ಪರ್ಧೆ 6-6 ಸಮಬಲಕ್ಕೆ ಬಂತು. ಅಂತಿಮವಾಗಿ ಪಂಘಲ್ 9-6 ಅಂಕಗಳ ಮೇಲುಗೈ ಸಾಧಿಸಿ ಗೆದ್ದು ಬಂದರು.
ಸೆಮಿಫೈನಲ್ನಲ್ಲಿ ಬೆಲರೂಸ್ನ ವನೇಸಾ ಕಲಝಿಸ್ಕಾವಾ ವಿರುದ್ಧ 4-5ರಿಂದ ಸೋತ ಅಂತಿಮ್, ದೊಡ್ಡ ಪದಕದಿಂದ ವಂಚಿತರಾದರು. ಕಂಚಿನ ಪದಕ ಜಯಿಸಿದರೆ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಲಭಿಸಲಿದೆ.
ಭಾರತದ ಉಳಿದ ಕುಸ್ತಿಪಟುಗಳಾದ ಮನೀಷಾ (62 ಕೆಜಿ), ಪ್ರಿಯಾಂಕಾ (68 ಕೆಜಿ) ಮತ್ತು ಜ್ಯೋತಿ ಬ್ರೆವಾಲ್ (72 ಕೆಜಿ) ಬೇಗನೇ ಪರಾಭವಗೊಂಡರು. ಪುರುಷರ ಫ್ರೀ-ಸ್ಟೈಲ್ ವಿಭಾಗದಲ್ಲಿ ಭಾರತದ ಎಲ್ಲ 10 ಸ್ಪರ್ಧಿಗಳು ಈಗಾಗಲೇ ಕೂಟದಿಂದ ನಿರ್ಗಮಿಸಿದ್ದಾರೆ. ಇವರ್ಯಾರಿಗೂ ಒಲಿಂಪಿಕ್ಸ್ ಕೋಟಾವಾಗಲಿ, ಪದಕವಾಗಲಿ ಒಲಿಯಲಿಲ್ಲ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.