![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 31, 2023, 11:14 PM IST
ಪಲ್ಲೆಕೆಲೆ: ಆಲ್ರೌಂಡ್ ಆಟದ ಪ್ರದರ್ಶನ ನೀಡಿದ ಶ್ರೀಲಂಕಾ ತಂಡವು ಗುರುವಾರ ನಡೆದ ಏಷ್ಯಾ ಕಪ್ ಕ್ರಿಕೆಟ್ ಕೂಟದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 5 ವಿಕೆಟ್ಗಳಿಂದ ಸೋಲಿಸಿದೆ.
ಗೆಲ್ಲಲು 165 ರನ್ ತೆಗೆಯುವ ಸುಲಭ ಸವಾಲು ಪಡೆದ ಶ್ರೀಲಂಕಾ ಆರಂಭದಲ್ಲಿ ಎಡವಿತು. 43 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಸದೀರ ಸಮರವಿಕ್ರಮ ಮತ್ತು ಚರಿತ ಅಸಲಂಕ ಅವರ ಜವಾಬ್ದಾರಿಯ ಆಟದಿಂದಾಗಿ ಶ್ರೀಲಂಕಾ ತಂಡವು ಚೇತರಿಸಿ ಕೊಂಡಿತಲ್ಲದೇ ಅಂತಿಮವಾಗಿ 39 ಓವರ್ಗಳಲ್ಲಿ 5 ವಿಕೆಟಿಗೆ 165 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಮೊದಲು ಬಾಂಗ್ಲಾದೇಶ 42.4 ಓವರ್ಗಳಲ್ಲಿ 164 ರನ್ ಗಳಿಸಿತ್ತು.
ಸಮರವಿಕ್ರಮ ಮತ್ತು ಅಸಲಂಕ ಅವರು ನಾಲ್ಕನೇ ವಿಕೆಟಿಗೆ 78 ರನ್ ಪೇರಿಸಿದ್ದರಿಂದ ಶ್ರೀಲಂಕಾ ಸುಲಭವಾಗಿ ಗೆಲುವಿನತ್ತ ಹೊರಟಿತು. ಆದರೆ ಸಮರವಿಕ್ರಮ 54 ರನ್ ಗಳಿಸಿದ ವೇಳೆ ಔಟಾದರು. ಆಬಳಿಕ ಅಸಲಂಕ ಮತ್ತು ದಾಸುನ್ ಶಣಕ ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡು ತಂಡದ ಗೆಲುವು ಸಾರಿದರು. ಅಸಲಂಕ ಕೊನೆಗೂ 62 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ಮೊದಲು ಶ್ರೀಲಂಕಾ ಬೌಲರ್ಗಳ ಬಿಗು ದಾಳಿಯೆದುರು ರನ್ ಗಳಿಸಲು ಒದ್ದಾಡಿದ ಬಾಂಗ್ಲಾ ಆಟಗಾರರು ಆಗಾಗ್ಗೆ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದರು. ಅಗ್ರಕ್ರಮಾಂಕದ ನಜ್ಮುಲ್ ಹೊಸೈನ್ ಶಂಟೂ ಅವರ ತಾಳ್ಮೆಯ ಆಟದಿಂದಾಗಿ ಬಾಂಗ್ಲಾ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುವಂತಾಯಿತು. 122 ಎಸೆತ ಎದುರಿಸಿದ ಅವರು 89 ರನ್ ಗಲಿಸಿ ತಂಡವನ್ನು ಭಾರೀ ಕುಸಿತದಿಂದ ಪಾರು ಮಾಡಿದರು.
ಶಂಟೂ ಅವರನ್ನು ಹೊರತುಪಡಿಸಿದರೆ 20 ರನ್ ಗಳಿಸಿದ ತೌಹಿದ್ ಹೃದಯ್ ತಂಡದ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಆರಂಭಿಕ ಮೊಹಮ್ಮದ್ ನೈಮ್ ಮತ್ತು ಮುಶ್ಫಿಕರ್ ರಹೀಮ್ ಎರಡಂಕೆಯ ಮೊತ್ತ ಗಳಿಸಿದ ಇನ್ನಿಬ್ಬರು ಆಟಗಾರರಾಗಿದ್ದಾರೆ.
ಈ ವರ್ಷ ನಡೆದ ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ಪರ ಗರಿಷ್ಠ ವಿಕೆಟ್ ಪಡೆದಿರುವ ತೀಕ್ಷಣ 19 ರನ್ನಿಗೆ 2 ವಿಕೆಟ್ ಪಡೆದರೆ ಮತೀಷ ಪತಿರಣ 32 ರನ್ನಿಗೆ 4 ವಿಕೆಟ್ ಹಾರಿಸಿದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.