![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 19, 2023, 8:00 AM IST
ಹ್ಯಾಂಗ್ಝೂ: ಏಷ್ಯನ್ ಗೇಮ್ಸ್ ಅಧಿಕೃತವಾಗಿ ಆರಂಭವಾಗ ದಿದ್ದರೂ ಫುಟ್ ಬಾಲ್ ಸ್ಪರ್ಧೆಯ ಬಣ ಪಂದ್ಯಗಳು ಮಂಗಳವಾರದಿಂದ ಆರಂಭವಾಗಲಿದೆ.
ಕೊನೆ ಕ್ಷಣದಲ್ಲಿ ತಂಡವನ್ನು ಪ್ರಕಟಿಸಿದ ಬಳಿಕ ಯಾವುದೇ ವಿಶ್ರಾಂತಿ ಮತ್ತು ತರಬೇತಿ ಪಡೆಯದ ಭಾರತೀಯ ಫುಟ್ ಬಾಲ್ ತಂಡವು ಮೊದಲ ಪಂದ್ಯದಲ್ಲಿ ಚೀನ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 5 ಗಂಟೆಗೆ ಆರಂಭವಾಗಲಿದೆ.
ಕಳೆದ ಶುಕ್ರವಾರವಷ್ಟೇ ಭಾರತ ತಂಡ ಅಂತಿಮ ತಂಡವನ್ನು ಪ್ರಕಟಿಸಿತ್ತು ಮತ್ತು ರವಿವಾರ ಚೀನಕ್ಕೆ ಪ್ರಯಾಣಿಸಿತ್ತು. ಹೀಗಾಗಿ ಪಂದ್ಯದ ಮೊದಲು ಆಟಗಾರರಿಗೆ ಅಭ್ಯಾಸ ಮಾಡಲು ಯಾವುದೇ ಸಮಯ ಸಿಕ್ಕಿಲ್ಲ. ಇದರ ಜತೆ ಡಿಫೆಂಡರ್ಗಳಾದ ಕೊನ್ಸಮ್ ಚಿಂಗ್ಲೆನ್ಸನ ಸಿಂಗ್ ಮತ್ತು ಲಾಲ್ಚುಂಗ್ನುಂಗ ಅವರ ಪ್ರಯಾಣದ ವೀಸಾ ಸಿದ್ಧಗೊಳ್ಳದ ಕಾರಣ ತಂಡವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಒಂದು ವೇಳೆ “ಎ’ ಬಣದ ಮೊದಲ ಪಂದ್ಯಕ್ಕೆ ಅವರಿಬ್ಬರು ಲಭ್ಯರಾಗದಿದ್ದರೆ ಇದರಿಂದ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದರ ಜತೆ ಹಿರಿಯ ಡಿಫೆಂಡರ್ ಸಂದೇಶ್ ಜಿಂಗನ್ ಮತ್ತು ಅನುಭವಿ ಸುನೀಲ್ ಚೇತ್ರಿ ಕೂಡ ಮೊದಲ ಪಂದ್ಯದಲ್ಲಿ ಆಡುವುದಿಲ್ಲ ಎಂದು ಕೋಚ್ ಐಗರ್ ಸ್ಟಿಮ್ಯಾಕ್ ಹೇಳಿದ್ದಾರೆ.
ಬಣದ ಇನ್ನೆರಡು ಪಂದ್ಯಗಳಲ್ಲಿ ಭಾರತ ಸೆ. 21ರಂದು ಬಾಂಗ್ಲಾದೇಶ ಮತ್ತು ಸೆ. 24ರಂದು ಮ್ಯಾನ್ಮಾರ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗÙಲ್ಲಿ ಭಾರತದ ಗೆಲುವಿಗೆ ಹೆಚ್ಚಿನ ಅವಕಾಶ ಇರುವ ಕಾರಣ ಕೋಚ್ ಸ್ಟಿಮ್ಯಾಕ್ ಈ ನಿರ್ಧಾರ ಮಾಡಿದ್ದಾರೆ.
2002ರಲ್ಲಿ ಮುಖಾಮುಖಿ
ಭಾರತ ಮತ್ತು ಚೀನ ಏಷ್ಯನ್ ಗೇಮ್ಸ್ ನಲ್ಲಿ ಈ ಹಿಂದೆ 2002ರಲ್ಲಿ ಕೊರಿಯದ ಬೂಸಾನ್ನಲ್ಲಿ ಎದುರಾಗಿದ್ದವು. ಈ ಹೋರಾಟದಲ್ಲಿ ಭಾರತ 0-2 ಗೋಲುಗಳಿಂದ ಸೋಲನ್ನು ಕಂಡಿತ್ತು. ಈ ವೇಳೆ ಭಾರತೀಯ ತಂಡದಲ್ಲಿ ಭೂತಿಯ, ಶಣ್ಮುಗಂ ವೆಂಕಟೇಶ್, ಜೊ ಪಾಲ್ ಅಂಚೆರಿ, ರೆನೆಡಿ ಸಿಂಗ್ ಮತ್ತು ಹಾಲಿ ಸಹಾಯಕ ಕೋಚ್ ಮಹೇಶ್ ತಂಡದಲ್ಲಿದ್ದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.