ಆಸೀಸ್ ಕ್ರಿಕೆಟಿಗ ಟೈಟ್ ಈಗ ಭಾರತೀಯ ನಾಗರಿಕ!
Team Udayavani, Mar 25, 2017, 11:08 AM IST
ಮುಂಬೈ: ಖ್ಯಾತ ಆಸ್ಟ್ರೇಲಿಯಾ ಕ್ರಿಕೆಟಿಗ ಶಾನ್ ಟೈಟ್ ಸಾಗರೋತ್ತರ ಭಾರತೀಯ ನಾಗರಿಕ ಪಾಸ್ ಪೋರ್ಟ್ ಪಡೆದಿದ್ದಾರೆ. ಈ ವಿಷಯವನ್ನು ಟ್ವೀಟರ್ನಲ್ಲಿ ಸ್ವತಃ ಟೈಟ್ ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ.
ಸದ್ಯ ಸಿಕ್ಕಿರುವ ಪಾಸ್ಪೋರ್ಟ್ನಡಿಯಲ್ಲಿ ಟೈಟ್ ಭಾರತೀಯ ಪ್ರಜೆಯ ಕೆಲವೊಂದು ಪ್ರಮುಖ ಸವಲತ್ತನ್ನು ಪಡೆಯಲಿದ್ದಾರೆ ಎನ್ನುವುದು ವಿಶೇಷ.
ಮತದಾನ, ಉದ್ಯೋಗದ ಹಕ್ಕಿಲ್ಲ!: ಭಾರತ ಪ್ರಜೆಯ ಪರಮೋಚ್ಚ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಮತದಾನದ ಹಕ್ಕು, ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಹಕ್ಕು ಶಾನ್ ಟೈಟ್ ಗೆ ಇರುವುದಿಲ್ಲ. ಮುಂದಿನ 5 ವರ್ಷ ಬಳಿಕ ಅವರು ಒಂದು ವೇಳೆ ಪೂರ್ಣ ನಾಗರಿಕ ಹಕ್ಕು ಬಯಸಿ
ಅರ್ಜಿ ಹಾಕಿದರಷ್ಟೇ ಸಂಪೂರ್ಣ ನಾಗರಿಕ ಹಕ್ಕು ಸಿಗಲಿದೆ. ಆ ಬಳಿಕವಷ್ಟೇ ಮೇಲೆ ಹೇಳಿರುವ ಪ್ರಮುಖ ಹಕ್ಕುಗಳನ್ನು ಹೊಂದಬಹುದು.
ಭಾರತೀಯ ಪ್ರಜೆಯಾಗಲು ಮನದನ್ನೆ ಕಾರಣ!:
ಶಾನ್ ಟೈಟ್ ಆಸೀಸ್ ಮೂಲದವರಾದರೂ ಭಾರತೀಯ ಪ್ರಜೆಯಾಗಲು ಕಾರಣವೇನು? ಇಂತಹ ದೊಂದು ಪ್ರಶ್ನೆಗೆ ಉತ್ತರ ಹುಡುಕಿದಾಗ ಅದಕ್ಕೆ ಸಿಗುವ ಉತ್ತರ ಒಂದು ಹೆಣ್ಣು. ಹೌದು, ಶಾನ್ ಟೈಟ್ 2010ರಲ್ಲಿ ಭಾರತದಲ್ಲಿ ಆಯೋಜಿತವಾಗಿದ್ದ ಐಪಿಎಲ್ ಕೂಟದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಈ ವೇಳೆ ರೂಪದರ್ಶಿ,ವೈನ್ ಉದ್ಯಮಿ ಮಾಶೂಮ್ ಸಿಂಘಾ ಪರಿಚಯವಾಯಿತು. ಇದು ಸ್ನೇಹ, ನಂತರ ಪ್ರೇಮಕ್ಕೆ ತಿರುಗಿ2014ರಲ್ಲಿ ಮದುವೆ ಮೂಲಕ ಇವರಿಬ್ಬರು ಪತಿ ಪತ್ನಿಯರಾದರು. ಇದಾದ ಬಳಿಕ ಟೈಟ್ಗೆ ಭಾರತದ ಜತೆಗಿನ ಒಡನಾಟ ಹೆಚ್ಚಾಯಿತು. ಭಾರತದ ಪೌರತ್ವ ಪಡೆಯುವ ಹಂಬಲವೂ ಹೆಚ್ಚಾಯಿತು.ಟೈಟ್ ಆಸೀಸ್ ತಂಡದ ಪ್ರಮುಖ ಬೌಲರ್.ಇದುವರೆಗೆ 3 ಟೆಸ್ಟ್ ಪಂದ್ಯಗಳಿಂದ 5 ವಿಕೆಟ್ ಪಡೆದಿದ್ದಾರೆ. 35 ಏಕದಿನ ಪಂದ್ಯದಿಂದ 62 ವಿಕೆಟ್ ಹಾಗೂ 21 ಟಿ20 ಪಂದ್ಯಗಳಿಂದ 28 ವಿಕೆಟ್ ಉರುಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.