![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 19, 2023, 10:36 PM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ನಲ್ಲಿ ಅಮೆರಿನ್ನರ ಪ್ರಾಬಲ್ಯ ಮುಂದುವರಿಯುವ ಸೂಚನೆ ಲಭಿ ಸಿದೆ. ಬುಧವಾರವಷ್ಟೇ ಹಾಲಿ ಚಾಂಪಿಯನ್ ರಫೆಲ್ ನಡಾಲ್ ಅವರನ್ನು ಉರುಳಿಸುವ ಮೂಲಕ ಅಮೆರಿಕದ ಮೆಕೆಂಝಿ ಮೆಕ್ಡೊನಾಲ್ಡ್ ದೊಡ್ಡ ಹೀರೋ ಎನಿಸಿದ್ದರು. ಇದೀಗ ಜೆನ್ಸನ್ ಬ್ರೂಕ್ಸ್ಬೈ ಸರದಿ.
ಗುರುವಾರದ 2ನೇ ಸುತ್ತಿನ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ನಾರ್ವೆ ಆಟಗಾರ ಕ್ಯಾಸ್ಪರ್ ರೂಡ್ ಅವರನ್ನು ಅಮೆರಿಕದ ಜೆನ್ಸನ್ ಬ್ರೂಕ್ಸ್ಬೈ ಮನೆಗೆ ಅಟ್ಟಿದರು. ಇದರೊಂದಿಗೆ ಇಬ್ಬರು ನೆಚ್ಚಿನ ಆಟಗಾರರು ಒಂದೇ ದಿನದ ಅಂತರದಲ್ಲಿ ಮೆಲ್ಬರ್ನ್ಗೆ ಗುಡ್ಬೈ ಹೇಳಬೇಕಾಯಿತು.
ಕ್ಯಾಲಿಫೋರ್ನಿಯಾದ 22 ವರ್ಷದ ಶ್ರೇಯಾಂಕ ರಹಿತ ಆಟಗಾರ ಜೆನ್ಸನ್ ಬ್ರೂಕ್ಸ್ 6-3, 7-5, 6-7 (4-7), 6-2 ಅಂತರದಿಂದ ಕ್ಯಾಸ್ಪರ್ ರೂಡ್ ಆಟಕ್ಕೆ ತೆರೆ ಎಳೆದರು. ರೂಡ್ ಕಳೆದ ವರ್ಷದ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಫೈನಲಿಸ್ಟ್ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ.
“ಕ್ಯಾಸ್ಪರ್ ಓರ್ವ ವಾರಿಯರ್. ಇದೊಂದು ದೊಡ್ಡ ಕದನವಾಗಲಿದೆ ಎಂಬ ಅಂದಾಜಿತ್ತು. ಹಾಗೆಯೇ ನನಗೆ ನನ್ನ ಆಟದ ಮಟ್ಟದ ಮೇಲೆ ವಿಶ್ವಾಸವಿತ್ತು. ಪಂದ್ಯವನ್ನು ತೀರಾ ಗಂಭೀರವಾಗೇನೂ ತೆಗೆದುಕೊಳ್ಳಲಿಲ್ಲ. ಕಳೆದ ವರ್ಷ ನನಗೆ ಕೋವಿಡ್ ಇತ್ತು. ಹೀಗಾಗಿ ಆಸ್ಟ್ರೇಲಿ ಯನ್ ಓಪನ್ ಪದಾರ್ಪಣೆ ಸಾಧ್ಯವಾಗಲಿಲ್ಲ. ಈ ಸಲ ತುಂಬು ವಿಶ್ವಾಸದೊಂದಿಗೆ ಬಂದಿದ್ದೇನೆ’ ಎಂಬುದಾಗಿ ಜೆನ್ಸನ್ ಬ್ರೂಕ್ಸ್ಬೈ ಹೇಳಿದರು.
ಮುಂದಿನ ಸುತ್ತು “ಆಲ್ ಅಮೆರಿಕನ್’ ಹೋರಾಟವಾಗಲಿದೆ. ಜೆನ್ಸನ್ ಬ್ರೂಕ್ಸ್ಬೈ ತಮ್ಮದೇ ದೇಶದ ಟಾಮಿ ಪೌಲ್ ವಿರುದ್ಧ ಆಡಲಿದ್ದಾರೆ. ಪೌಲ್ ಸ್ಪೇನ್ನ ಅಲೆಕ್ಸಾಂಡ್ರೊ ಡೆವಿ ಡೋವಿಕ್ ಫೋಕಿನ ಅವರನ್ನು 5 ಸೆಟ್ಗಳ ಹೋರಾಟದಲ್ಲಿ ಮಣಿಸಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.