![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 25, 2023, 9:24 PM IST
ಮೆಲ್ಬರ್ನ್: ಟೆನಿಸ್ ಬಾಳ್ವೆಯ ಕೊನೆಯ ಗ್ರ್ಯಾನ್ಸ್ಲಾಮ್ನಲ್ಲಿ ಆಡುತ್ತಿರುವ ಸಾನಿಯಾ ಮಿರ್ಜಾ ಪಾಲಿಗೆ ಇದನ್ನು ಸ್ಮರಣೀಯಗೊಳಿಸುವ ಸುವರ್ಣ ಅವಕಾಶವೊಂದು ಎದುರಾಗಿದೆ. ಅವರು ರೋಹನ್ ಬೋಪಣ್ಣ ಜತೆಗೂಡಿ ಆಸ್ಟ್ರೇಲಿಯನ್ ಓಪನ್ ಮಿಕ್ಸೆಡ್ ಡಬಲ್ಸ್ ಫೈನಲ್ ತಲುಪಿದ್ದಾರೆ.
ಬುಧವಾರ ನಡೆದ ಸೆಮಿಫೈನಲ್ನಲ್ಲಿ ಶ್ರೇಯಾಂಕ ರಹಿತ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಸೇರಿಕೊಂಡು 3ನೇ ಶ್ರೇಯಾಂಕದ ಡಿಸೈರ್ ಕ್ರಾಜಿಕ್ (ಅಮೆರಿಕ)-ನೀಲ್ ಸ್ಕಪ್ಸ್ಕಿ (ಬ್ರಿಟನ್) ವಿರುದ್ಧ ಭಾರೀ ಹೋರಾಟ ನಡೆಸಿ 7-6 (5), 6-7 (5), 10-6 ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಇವರ ಜಿದ್ದಾಜಿದ್ದಿ ಕಾಳಗ ಒಂದು ಗಂಟೆ, 52 ನಿಮಿಷಗಳ ತನಕ ಸಾಗಿತು.
ಸಾನಿಯಾ ಮಿರ್ಜಾ ಈವರೆಗೆ 3 ಸಲ ವನಿತಾ ಡಬಲ್ಸ್, 3 ಸಲ ಮಿಶ್ರ ಡಬಲ್ಸ್ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಇದರಲ್ಲಿ ಒಂದು ಡಬಲ್ಸ್, ಒಂದು ಮಿಶ್ರ ಡಬಲ್ಸ್ ಪ್ರಶಸ್ತಿ “ಮೆಲ್ಬರ್ನ್ ಪಾರ್ಕ್’ನಲ್ಲೇ ಒಲಿದಿತ್ತು.
2016ರಲ್ಲಿ ಮಾರ್ಟಿನಾ ಹಿಂಗಿಸ್ ಜತೆಗೂಡಿ ವನಿತಾ ಡಬಲ್ಸ್ ಚಾಂಪಿಯನ್ ಆಗಿದ್ದರು. ಇದಕ್ಕೂ ಮುನ್ನ 2009ರಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಭೂಪತಿ ಜತೆಗಿನ ಇನ್ನೊಂದು ಮಿಶ್ರ ಡಬಲ್ಸ್ ಪ್ರಶಸ್ತಿ 2012ರ ಫ್ರೆಂಚ್ ಓಪನ್ನಲ್ಲಿ ಒಲಿದಿತ್ತು. ಮೂರೂ ಡಬಲ್ಸ್ ಪ್ರಶಸ್ತಿ ಗಳನ್ನೆತ್ತುವಾಗ ಸಾನಿಯಾ ಜತೆ ಯಿದ್ದವರು ಮಾರ್ಟಿನಾ ಹಿಂಗಿಸ್. ಸಾನಿಯಾ ಜತೆಗಾರ ರೋಹನ್ ಬೋಪಣ್ಣ ಗೆದ್ದಿರುವುದು ಒಂದು ಮಿಶ್ರ ಡಬಲ್ಸ್ ಪ್ರಶಸ್ತಿ ಮಾತ್ರ.
ಭಾರತದ ಸ್ಟಾರ್ ಆಟಗಾರ್ತಿ ಯಾಗಿರುವ ಸಾನಿಯಾ ಮಿರ್ಜಾ ಕೆಲವು ತಿಂಗಳ ಹಿಂದೆ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಅದ ರಂತೆ ಆಸ್ಟ್ರೇಲಿಯನ್ ಓಪನ್ ಪಂದ್ಯಾ ವಳಿಯೇ ಅವರ ಕೊನೆಯ ಗ್ರ್ಯಾನ್ಸ್ಲಾಮ್ ಸ್ಪರ್ಧೆ ಆಗಲಿದೆ. ಮುಂದಿನ ತಿಂಗಳು ದುಬಾೖಯಲ್ಲಿ ನಡೆಯುವ ಡಬ್ಲ್ಯುಟಿಎ ಕೂಟದಲ್ಲಿ ಕೊನೆಯ ಸಲ ರ್ಯಾಕೆಟ್ ಹಿಡಿಯಲಿದ್ದಾರೆ.
ಒಂದೇ ಹೆಜ್ಜೆ ಬಾಕಿ…
“ಮೆಲ್ಬರ್ನ್ ಪಾರ್ಕ್ಗೂ ನನಗೂ 18 ವರ್ಷಗಳ ಗಾಢ ನಂಟು. ನನ್ನ ಪಾಲಿಗೆ ಇದು ಮನೆ ಇದ್ದಂತೆ. ಇಲ್ಲಿ ನನ್ನ ಕುಟುಂಬ ಇದೆ. ಬಹಳಷ್ಟು ಮಂದಿ ಭಾರತೀಯರು ನನಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಇನ್ನೊಂದೇ ಒಂದು ಹೆಜ್ಜೆ ಬಾಕಿ ಇದೆ. ಗೆದ್ದು ಗ್ರ್ಯಾನ್ಸ್ಲಾಮ್ ಅಭಿಯಾನವನ್ನು ಸ್ಮರಣೀಯಗೊಳಿಸಬೇಕಿದೆ’ ಎಂಬುದಾಗಿ ಸಾನಿಯಾ ಮಿರ್ಜಾ ಹೇಳಿದರು.
ಸ್ಮರಣೀಯ ಪಯಣ
“ಸಾನಿಯಾ ಜತೆ ಅಂಕಣ ಹಂಚಿ ಕೊಳ್ಳಲು ಖುಷಿಯಾಗುತ್ತಿದೆ. ಇದೊಂದು ಸ್ಮರಣೀಯ ಪಯಣ. ಸಾನಿಯಾ ಎಲ್ಲರ ಪಾಲಿಗೂ ಸ್ಫೂರ್ತಿ. ನಾವು ಒಂದೇ ಮೆಟ್ಟಿಲು ಹಿಂದಿದ್ದೇವೆ. ಸಾನಿಯಾ ಮತ್ತು ಭಾರತಕ್ಕಾಗಿ ಈ ಟ್ರೋಫಿ ಗೆಲ್ಲಬೇಕಿದೆ’ ಎಂಬುದು ರೋಹನ್ ಬೋಪಣ್ಣ ಹೇಳಿಕೆ. ಭಾರತೀಯ ಜೋಡಿ ಚಾಂಪಿಯನ್ ಆಗಿ ಮೂಡಿಬರಲೆಂಬುದು ಕ್ರೀಡಾ ಪ್ರೇಮಿಗಳ ಹಾರೈಕೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.