BAN vs SA: ಢಾಕಾ ಟೆಸ್ಟ್‌; ಮೊದಲ ದಿನವೇ 16 ವಿಕೆಟ್‌ ಪತನ


Team Udayavani, Oct 21, 2024, 7:53 PM IST

BAN vs SA: ಢಾಕಾ ಟೆಸ್ಟ್‌; ಮೊದಲ ದಿನವೇ 16 ವಿಕೆಟ್‌ ಪತನ

ಢಾಕಾ: ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸೋಮವಾರ ಮೊದಲ್ಗೊಂಡ ಢಾಕಾ ಟೆಸ್ಟ್‌ ಪಂದ್ಯದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನವೇ 16 ವಿಕೆಟ್‌ಗಳು ಉರುಳಿವೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆತಿಥೇಯ ಬಾಂಗ್ಲಾದೇಶ, ಆಫ್ರಿಕನ್ನರ ಬೌಲಿಂಗ್‌ ದಾಳಿಗೆ ತತ್ತರಿಸಿ 106 ರನ್ನಿಗೆ ಆಲೌಟ್‌ ಆಯಿತು. ಬಾಂಗ್ಲಾ ಬೌಲರ್ ಕೂಡ ತಿರುಗಿ ಬಿದ್ದರು. ದಕ್ಷಿಣ ಆಫ್ರಿಕಾ 140 ರನ್ನಿಗೆ 6 ವಿಕೆಟ್‌ ಕಳೆದುಕೊಂಡಿದೆ.

ರಬಾಡ ದಾಖಲೆ
ಬಾಂಗ್ಲಾಕ್ಕೆ ಘಾತಕವಾಗಿ ಪರಿಣಮಿಸಿದವರೆಂದರೆ ಕಾಗಿಸೊ ರಬಾಡ, ವಿಯಾನ್‌ ಮುಲ್ಡರ್‌ ಮತ್ತು ಕೇಶವ್‌ ಮಹಾರಾಜ್‌. ಮೂವರೂ ತಲಾ 3 ವಿಕೆಟ್‌ ಉರುಳಿಸಿದರು. ಈ ಆಕ್ರಮಣದ ವೇಳೆ ರಬಾಡ ಅತೀ ಕಡಿಮೆ 11,817 ಎಸೆತಗಳಲ್ಲಿ 300 ವಿಕೆಟ್‌ ಉರುಳಿಸಿದ ದಾಖಲೆ ಸ್ಥಾಪಿಸಿದರು. ಪಾಕಿಸ್ಥಾನದ ವಕಾರ್‌ ಯೂನಿಸ್‌ ಅವರ ದಾಖಲೆ ಪತನಗೊಂಡಿತು (12,602). 30 ರನ್‌ ಮಾಡಿದ ಆರಂಭಕಾರ ಮಹಮದುಲ್ಲ ಹಸನ್‌ ಜಾಯ್‌ ಅವರದೇ ಬಾಂಗ್ಲಾ ಸರದಿಯ ಹೆಚ್ಚಿನ ಗಳಿಕೆ.

ತೈಜುಲ್‌ಗೆ 5 ವಿಕೆಟ್‌
ಎಡಗೈ ಸ್ಪಿನ್ನರ್‌ ತೈಜುಲ್‌ ಇಸ್ಲಾಮ್‌ ಹರಿಣಗಳ ಪಾಲಿಗೆ ಘಾತಕವಾಗಿ ಪರಿಣಮಿಸಿದರು. ಉರುಳಿದ 6 ವಿಕೆಟ್‌ಗಳಲ್ಲಿ ತೈಜುಲ್‌ ಐದನ್ನು ತಮ್ಮದಾಗಿಸಿಕೊಂಡಿದ್ದಾರೆ. ನೀಡಿದ್ದು 49 ರನ್‌.

ದಕ್ಷಿಣ ಆಫ್ರಿಕಾದ 6 ವಿಕೆಟ್‌ 108 ರನ್ನಿಗೆ ಉದುರಿತ್ತು. ಆದರೆ ಕೈಲ್‌ ವೆರೇಯ್ನ (18) ಮತ್ತು ವಿಯಾನ್‌ ಮುಲ್ಡರ್‌ (17) ಆತಿಥೇಯರ ದಾಳಿಯನ್ನು ತಡೆದು ನಿಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ. ಟೋನಿ ಡಿ ಝೋರ್ಜಿ 30, ರಿಯಾನ್‌ ರಿಕಲ್‌ಸ್ಟನ್‌ 27 ಮತ್ತು ಟ್ರಿಸ್ಟನ್‌ ಸ್ಟಬ್ಸ್ 23 ರನ್‌ ಮಾಡಿದರು.

49ಕ್ಕೆ 5 ವಿಕೆಟ್‌ ಕಿತ್ತ ತೈಜುಲ್‌ ಇಸ್ಲಾಮ್‌.

ಟಾಪ್ ನ್ಯೂಸ್

Kota-Vote

Council By Poll: ಉಡುಪಿ ಜಿಲ್ಲೆಯಲ್ಲಿ ಶೇ. 96.57 ಮತದಾನ; ಎಲ್ಲೂ ಶೇ.100 ಇಲ್ಲ

MNG-Chowta

Council By Poll: ಕೆಲವು ಸದಸ್ಯರ ಬಹಿಷ್ಕಾರ ನಡುವೆ ಎರಡೂ ಜಿಲ್ಲೆಯಲ್ಲಿ ಶೇ. 97.91 ಮತದಾನ

1-a-bss

Bulandshahr; ಸಿಲಿಂಡರ್ ಸ್ಫೋ*ಟಗೊಂಡು ಐವರು ಮೃ*ತ್ಯು: ಹಲವರಿಗೆ ಗಾಯ

Alvas

Alvas College: ಮೂಡುಬಿದಿರೆಯಲ್ಲಿ ನ.10ರಂದು “ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ

Udupi: ಗೀತಾರ್ಥ ಚಿಂತನೆ 71: ದುಯೋಧನಾದಿಗಳನ್ನು ಮಣಿಸುವಲ್ಲಿ ಅರ್ಜುನನ ದ್ವಂದ್ವ

Udupi: ಗೀತಾರ್ಥ ಚಿಂತನೆ 71: ದುಯೋಧನಾದಿಗಳನ್ನು ಮಣಿಸುವಲ್ಲಿ ಅರ್ಜುನನ ದ್ವಂದ್ವ

New Zealand: ಪರಾಕ್ರಮ; 5 ದಿನಗಳಲ್ಲಿ 5 ಕ್ರೀಡಾ ಸಾಧನೆ

New Zealand: ಪರಾಕ್ರಮ; 5 ದಿನಗಳಲ್ಲಿ 5 ಕ್ರೀಡಾ ಸಾಧನೆ

Krishna-Mata-Udupi

Udupi: ಅ.24-26:ಪ್ರಾಚ್ಯವಿದ್ಯಾಸಮ್ಮೇಳನದಲ್ಲಿ ವಿಶ್ವವಿದ್ಯಾನಿಲಯ ಕುಲಪತಿಗಳ ಸಮಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New Zealand: ಪರಾಕ್ರಮ; 5 ದಿನಗಳಲ್ಲಿ 5 ಕ್ರೀಡಾ ಸಾಧನೆ

New Zealand: ಪರಾಕ್ರಮ; 5 ದಿನಗಳಲ್ಲಿ 5 ಕ್ರೀಡಾ ಸಾಧನೆ

Ranji Trophy: ಕರ್ನಾಟಕಕ್ಕೆ ಮತ್ತೆ ಮಳೆ ಕಾಟ

Ranji Trophy: ಕರ್ನಾಟಕಕ್ಕೆ ಮತ್ತೆ ಮಳೆ ಕಾಟ

Pro Kabaddi 2024: ಯೋಧಾಸ್‌, ಪುನೇರಿ ಜಯಭೇರಿ

Pro Kabaddi 2024: ಯೋಧಾಸ್‌, ಪುನೇರಿ ಜಯಭೇರಿ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

IPL Mega Auction; 2 day event in Riyadh; IPL Mega Auction Date Revealed

IPL Mega Auction: ರಿಯಾದ್‌ ನಲ್ಲಿ 2 ದಿನದ ಇವೆಂಟ್; ಮೆಗಾ ಹರಾಜಿನ ದಿನಾಂಕ ಬಹಿರಂಗ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Kota-Vote

Council By Poll: ಉಡುಪಿ ಜಿಲ್ಲೆಯಲ್ಲಿ ಶೇ. 96.57 ಮತದಾನ; ಎಲ್ಲೂ ಶೇ.100 ಇಲ್ಲ

MNG-Chowta

Council By Poll: ಕೆಲವು ಸದಸ್ಯರ ಬಹಿಷ್ಕಾರ ನಡುವೆ ಎರಡೂ ಜಿಲ್ಲೆಯಲ್ಲಿ ಶೇ. 97.91 ಮತದಾನ

1-a-bss

Bulandshahr; ಸಿಲಿಂಡರ್ ಸ್ಫೋ*ಟಗೊಂಡು ಐವರು ಮೃ*ತ್ಯು: ಹಲವರಿಗೆ ಗಾಯ

Alvas

Alvas College: ಮೂಡುಬಿದಿರೆಯಲ್ಲಿ ನ.10ರಂದು “ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ

Udupi: ಗೀತಾರ್ಥ ಚಿಂತನೆ 71: ದುಯೋಧನಾದಿಗಳನ್ನು ಮಣಿಸುವಲ್ಲಿ ಅರ್ಜುನನ ದ್ವಂದ್ವ

Udupi: ಗೀತಾರ್ಥ ಚಿಂತನೆ 71: ದುಯೋಧನಾದಿಗಳನ್ನು ಮಣಿಸುವಲ್ಲಿ ಅರ್ಜುನನ ದ್ವಂದ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.