Women’s T20 World Cup: ಭಾರತ ಬಳಗವನ್ನು ಪ್ರಕಟಿಸಿದ ಬಿಸಿಸಿಐ; ಸ್ಥಾನ ಪಡೆದ ಶ್ರೇಯಾಂಕ


Team Udayavani, Aug 27, 2024, 5:55 PM IST

bcci announces squad for women t20 world cup

ಮುಂಬೈ: ಕೆಲವೇ ವಾರಗಳಲ್ಲಿ ಆರಂಭವಾಗಲಿರುವ ವನಿತಾ ಟಿ20 ವಿಶ್ವಕಪ್‌ ಗೆ (Women’s T20 World Cup) ಭಾರತ ತಂಡವನ್ನು (BCCI)  ಪ್ರಕಟ ಮಾಡಲಾಗಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಪ್ರಕಟಿಸಿದ ಬೆನ್ನಲ್ಲೇ ಟ್ರೋಫಿ ಗೆಲ್ಲುವ ಫೇವರೇಟ್‌ ತಂಡಗಳಲ್ಲಿ ಒಂದಾದ ಭಾರತ ತಂಡವನ್ನೂ ಪ್ರಕಟಿಸಲಾಗಿದೆ.

ಮಂಗಳವಾರ (ಆ.27) ಬಿಸಿಸಿಐ 15 ಜನರ ತಂಡವನ್ನು ಪ್ರಕಟಿಸಲಾಗಿದೆ. ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ಅವರು ನಾಯಕಿಯಾಗಿ ಮುಂದುವರಿದಿದ್ದು, ಸ್ಮೃತಿ ಮಂಧನಾ (Smriti Mandhana)ಉಪ ನಾಯಕಿಯಾಗಿದ್ದಾರೆ.

ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯಾಸ್ತಿಕಾ ಭಾಟಿಯಾ ಭಾಗವಹಿಸುವಿಕೆಯು ಫಿಟ್ನೆಸ್ ಮೇಲೆ ಅವಲಂಬಿತವಾಗಿದೆ.

ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಮತ್ತು ರೇಣುಕಾ ಸಿಂಗ್ ಠಾಕೂರ್ ಭಾರತದ ವೇಗದ ಬೌಲಿಂಗ್ ಆಯ್ಕೆಗಳಾಗಿದ್ದರೆ, ಆಶಾ ಶೋಭಾನ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್ ಮತ್ತು ಸಜನಾ ಸಜೀವನ್ ಸ್ಪಿನ್‌ ವಿಭಾಗದಲ್ಲಿದ್ದಾರೆ. ಮತ್ತೊಂದೆಡೆ, ದಯಾಳನ್ ಹೇಮಲತಾ ಅವರು ಮುಖ್ಯ ತಂಡದಲ್ಲಿ ಬ್ಯಾಕ್ ಅಪ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದಾರೆ.

ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅವರಿಗೂ ಫಿಟ್ನೆಸ್‌ ಮೇಲೆ ಅವಲಂಭಿತವಾಗಿದೆ. ಕಳೆದ ಏಷ್ಯಾ ಕಪ್‌ ಕೂಟದ ಮೊದಲ ಪಂದ್ಯದ ವೇಳೆ ಶ್ರೇಯಾಂಕಾ ಗಾಯಗೊಂಡಿದ್ದರು.

ಈ ಬಾರಿಯ ವನಿತಾ ಟಿ20 ವಿಶ್ವಕಪ್‌ ಯುಎಇ ನಲ್ಲಿ ನಡೆಯಲಿದೆ. ಈ ಮೊದಲು ಕೂಟವು ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು. ಆದರೆ ರಾಜಕೀಯ ಅಶಾಂತಿಯಿಂದಾಗಿ ಪಂದ್ಯಾವಳಿಯನ್ನು ಬಾಂಗ್ಲಾದೇಶದಿಂದ ಸ್ಥಳಾಂತರಿಸಲಾಯಿತು.

ಉಮಾ ಚೆಟ್ರಿ, ತನುಜಾ ಕನ್ವರ್ ಮತ್ತು ಸೈಮಾ ಠಾಕೂರ್ ಪ್ರಯಾಣಿಕ- ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ. ರಾಘ್ವಿ ಬಿಸ್ಟ್ ಮತ್ತು ಪ್ರಿಯಾ ಮಿಶ್ರಾ ಅವರು ಪ್ರಯಾಣಿಸದ ಮೀಸಲು ಆಟಗಾರರಾಗಿದ್ದಾರೆ.

ಇದು ಪಂದ್ಯಾವಳಿಯ ಒಂಬತ್ತನೇ ಆವೃತ್ತಿಯಾಗಿದ್ದು, ಅಕ್ಟೋಬರ್ 3ರಿಂದ 20 ರವರೆಗೆ ನಡೆಯಲಿದೆ. ಭಾರತವು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾದೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಟಾಪ್ ನ್ಯೂಸ್

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Father-Muller

Father Muller: ಔಷಧ ವಿಜ್ಞಾನ ಮಹಾವಿದ್ಯಾಲಯ ಬಿ ಫಾರ್ಮ ಕೋರ್ಸ್‌ಗೆ ಅನುಮತಿ

Kaljiga-1

Film Release: ಬಹುನಿರೀಕ್ಷಿತ “ಕಲ್ಜಿಗ’ ಸಿನೆಮಾ ಬಿಡುಗಡೆ

Kateel

Temple: ಕೊನೆಯ ಶ್ರಾವಣ ಶುಕ್ರವಾರ ಕಟೀಲಿಗೆ ಅಪಾರ ಭಕ್ತರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

indian-flag

South Asia ಆ್ಯತ್ಲೆಟಿಕ್ಸ್‌ : ರಿಲೇಯಲ್ಲಿ ಭಾರತಕ್ಕೆ ಚಿನ್ನ

missing

Paralympics ಕಾಂಗೋ ಆ್ಯತ್ಲೀಟ್‌ಗಳು ನಾಪತ್ತೆ: ತನಿಖೆ ಆರಂಭ

1-reeee

Duleep Trophy:ಇಂಡಿಯಾ ‘ಎ’ಗೆ ಮುನ್ನಡೆ

1–eewewqe

Paralympic ಚಿನ್ನವನ್ನು ಮೋದಿಗೆ ಅರ್ಪಿಸಿದ ಅಂತಿಲ್‌

1-der

National Swimming: ಕರ್ನಾಟಕ ಚಾಂಪಿಯನ್‌

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

Katapadi

Katapadi: ಸ್ಟೀಲ್‌ ನಟ್‌ಗಳ‌ ಈಶ ವಿಶ್ವದಾಖಲೆಗೆ

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.